ಆ್ಯಪ್ನಗರ

ಬೆಂಗಳೂರು: ಇನ್ಸ್‌ಟಾಗ್ರಾಂ ಪ್ರಿಯಕರನಿಗಾಗಿ ಮನೆ ಬಿಟ್ಟ 14ರ ಬಾಲೆ!

14 ವರ್ಷದ ಯುವತಿಯೊಬ್ಬಳು ಇನ್ಸ್‌ಟಾಗ್ರಾಂನಲ್ಲಿ ಪರಿಚಯವಾದ ಯುವಕ­ನನ್ನು ತಲೆಗೆ ಹಚ್ಚಿಕೊಂಡು ಪ್ರೀತಿಯೆಂದು ನಂಬಿ ಮನೆ ಬಿಟ್ಟು ಹೊರಟು, ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಘಟನೆ ನಡೆದಿದೆ.

Vijaya Karnataka Web 27 Jun 2020, 9:59 am
ಬೆಂಗಳೂರು: ಇನ್ಸ್‌ಟಾಗ್ರಾಂನಲ್ಲಿ ಪರಿಚಯವಾದ ಯುವಕ­ನನ್ನು ತಲೆಗೆ ಹಚ್ಚಿಕೊಂಡು ಅದನ್ನೇ ಪ್ರೀತಿಯೆಂದು ನಂಬಿ ಮನೆ ಬಿಟ್ಟು ಹೊರಟಿದ್ದ 14 ವರ್ಷದ ಬಾಲಕಿ ವಿಮಾನ ನಿಲ್ದಾಣದಲ್ಲಿ ತಂದೆ ಕೈಗೆ ಸಿಕ್ಕಿಬಿದ್ದಿದ್ದಾಳೆ.
Vijaya Karnataka Web Instagram


ಬಾಲಕಿಯನ್ನು ಪುಸಲಾಯಿಸಿ ನಕಲಿ ದಾಖಲೆ ಸೃಷ್ಟಿಸಿ ಹೈದರಾಬಾದ್‌ಗೆ ಕರೆಸಿಕೊಳ್ಳಲು ಸಂಚು ನಡೆಸಿದ್ದಕ್ಕಾಗಿ ವಿಶಾಲ್‌ ಹೆಸರಿನ ಇನ್ಸ್‌ಟಾಗ್ರಾಂ ಪ್ರಿಯಕರನ ವಿರುದ್ಧ ಸೈಬರ್‌ಠಾಣೆ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಬಾಲಕಿ 18 ವರ್ಷ ದಾಟಿದ್ದಾಳೆ ಎಂದು ನಂಬಿಸಲು ಆಕೆಯ ಹೆಸರಿನಲ್ಲಿ ನಕಲಿ ಎಸ್ಸೆಸ್ಸೆಲ್ಸಿ ಅಂಕಪಟ್ಟಿಯನ್ನು ವಿಶಾಲ್‌ ಸೃಷ್ಟಿಸಿದ್ದ. ಈತನ ವಿರುದ್ಧ ಪೋಕ್ಸೋ ಮತ್ತು ವಂಚನೆ ಕಾಯಿದೆಯಡಿ ಕ್ರಿಮಿನಲ್‌ ಪ್ರಕರಣ ದಾಖಲಾಗಿದ್ದು, ಆರೋಪಿ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ.

ನಡೆದದ್ದೇನು?: ಇನ್ಸ್‌ಟಾಗ್ರಾಂನಲ್ಲಿ ಕ್ರಿಯಾಶೀಲವಾಗಿರುತ್ತಿದ್ದ 8ನೇ ತರಗತಿ ಓದುತ್ತಿರುವ ಬಾಲಕಿಗೆ, ಅಲ್ಲೇ ವಿಶಾಲ್‌ನ ಪರಿಚಯ ಆಗಿತ್ತು. ಮೊದಲ ಬಾರಿ ಯುವಕನೊಬ್ಬನ ಸ್ನೇಹಕ್ಕೆ ಬಂದ ಬಾಲಕಿಗೆ ಅದೇ ಪ್ರೀತಿ ಎನ್ನುವ ತಪ್ಪು ಗ್ರಹಿಕೆ ಆಗಿತ್ತು. ಹೈದರಾಬಾದ್‌ನ ವಿಶಾಲ್‌ ಈಕೆಯನ್ನು ಅಲ್ಲಿಗೇ ಕರೆಸಿಕೊಳ್ಳಲು ಸ್ಕೆಚ್‌ ಹಾಕಿದ್ದ. ಇಬ್ಬರೂ ಒಟ್ಟಿಗೇ ಇರೋಣ ಎಂದು ಮನವೊಲಿಸಿದ್ದ. ಬಳಿಕ ತಾನೇ ಬಾಲಕಿಯ ಎಸ್ಸೆಸ್ಸೆಲ್ಸಿ ಅಂಕಪಟ್ಟಿ ಸೃಷ್ಟಿಸಿದ. ಆಧಾರ್‌ ಕಾರ್ಡ್‌, 15 ಪಾಸ್‌ಪೋರ್ಟ್‌ ಸೈಜಿನ ಚಿತ್ರಗಳು ಹಾಗೂ 10 ಸಾವಿರ ರೂ. ನಗದು ತೆಗೆದುಕೊಂಡು ವಿಮಾನ ಹತ್ತಿ ಹೈದರಾಬಾದ್‌ಗೆ ಬರುವಂತೆ ಬಾಲಕಿಯ ತಲೆ ತಿಕ್ಕಿದ್ದ.

ಮುದ್ದಿನ ಶ್ವಾನ ಮೃತಪಟ್ಟು ಒಂದು ಗಂಟೆಯಲ್ಲಿ ಮೋಡದಲ್ಲಿ ಕಾಣಿಸಿತ್ತಂತೆ ಮುಖ!

ಬಾಲಕಿ ಆ ಮಾತುಗಳನ್ನೇ ನಂಬಿಕೊಂಡು ಮನೆಯಿಂದ ಹೊರಟು ವಿಮಾನ ನಿಲ್ದಾಣ ತಲುಪಿದ್ದಳು. ಆದರೆ, ಮಗಳ ವರ್ತನೆಯಲ್ಲಾಗಿರುವ ಬದಲಾವಣೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ತಂದೆ, ಮನೆಯಿಂದ ಹೊರಗೆ ಹೋದ ಮಗಳು ಬಹಳ ಹೊತ್ತಾದರೂ ವಾಪಸ್ಸಾಗದಿದ್ದಾಗ ಅನುಮಾನಗೊಂಡು ಆಕೆಯ ಇನ್ಸ್‌ ಟಾಗ್ರಾಂ ಖಾತೆ ಗಮನಿಸಿದ್ದರು. ಅದರಲ್ಲಿಆಕೆಗೆ ಹೈದರಾಬಾದ್‌ಗೆ ಹೋಗಲು ವಿಮಾನದ ಟಿಕೆಟ್‌ ಬುಕ್‌ ಆಗಿರುವ ಮಾಹಿತಿ ಸಿಕ್ಕಿತು. ತಕ್ಷಣ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಧಾವಿಸಿದರು. ವಿಮಾನಕ್ಕಾಗಿ ಕಾಯುತ್ತಾ ಕುಳಿತಿದ್ದ ಮಗಳನ್ನು ವಾಪಸ್‌ ಮನೆಗೆ ಕರೆತಂದು ಬುದ್ಧಿವಾದ ಹೇಳಿದ್ದಾರೆ.

ಶ್ವಾನಕ್ಕೆ ಇಳಿಯಲು `ಬಸ್' ನಿರ್ಮಿಸಿದ ಮಾಲಿಕ! : ಕಾರಣ ತುಂಬಾ ಹೃದಯಸ್ಪರ್ಶಿ...

ಪ್ರಕರಣ ದಾಖಲು: ಮಗಳನ್ನು ವಾಪಸ್‌ ಕರೆತಂದ ಬಳಿಕ ಯಾರು ವಿಶಾಲ್‌ ಎನ್ನುವ ಬಗ್ಗೆ ಪರಿಶೀಲನೆ ನಡೆಸಿದಾಗ ಪೋಷಕರಿಗೆ ಬಹಳ ಅನುಮಾನ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿಬಾಲಕಿಯರನ್ನು ವಂಚಿಸುವವನೇ ಇರಬೇಕು ಎನ್ನುವ ಕಾರಣದಿಂದ ಸೈಬರ್‌ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ