ಆ್ಯಪ್ನಗರ

ಫೇಸ್‌ಬುಕ್ ಇನಿಯನಿಗೆ ಸರ್ಪ್ರೈಸ್ ನೀಡಲು ಬೆಂಗಳೂರಿಂದ ಭೋಪಾಲ್‌ಗೆ ಹೋದ ಬಾಲಕಿ

ಫೇಸ್‌ಬುಕ್ ಪ್ರೇಮಿಗಾಗಿ 15 ವರ್ಷದ ಬಾಲಕಿ ವಿಮಾನವನ್ನೇರಿ ಹೋಗಿದ್ದಾಳೆ. ಆತನ ನಡತೆ ಪರೀಕ್ಷಿಸಲು ಹೀಗೆ ಮಾಡಿದೆ ಎಂದಿದ್ದ

TIMESOFINDIA.COM 28 Aug 2019, 12:57 pm
ಬೆಂಗಳೂರು: ಇಂದಿನ ಮಕ್ಕಳು ಮೊಬೈಲ್, ಸಾಮಾಜಿಕ ಜಾಲತಾಣಕ್ಕೆ ಎಷ್ಟರ ಮಟ್ಟಿಗೆ ದಾಸರಾಗಿದ್ದಾರೆಂದರೆ, ತಮ್ಮ ವಯಸ್ಸಿಗೆ ಮೀರಿ ನಡೆದುಕೊಳ್ಳುತ್ತಿದ್ದಾರೆ. ಪೋಷಕರಷ್ಟೇ ಅಲ್ಲ, ಸಮಾಜವೇ ದಂಗಾಗಿ ಹೋಗುವಂತಹ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಇದಕ್ಕೆ ನಿದರ್ಶನವಾಗಿ ನಗರದ ಬಾಲಕಿಯೊಬ್ಬಳು ತನ್ನ ಫೇಸ್‌ಬುಕ್ ಗೆಳೆಯನಿಗೆ ಸರ್ಪೈಸ್ ನೀಡಲು ವಿಮಾನದ ಮೂಲಕ ಶನಿವಾರ ಬೆಂಗಳೂರಿನಿಂದ ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ಗೆ ತೆರಳಿರುವ ಪ್ರಸಂಗ ಬೆಳಕಿಗೆ ಬಂದಿದೆ.
Vijaya Karnataka Web Facebook Love


ಆಕೆಯಂತೆ ಅವನು ಕೂಡ ಅಪ್ರಾಪ್ತನಾಗಿದ್ದು, ಏಕಾಏಕಿ ತನ್ನ ಮನೆ ಬಾಗಿಲಲ್ಲಿ ಬಂದು ನಿಂತ ಬಾಲಕಿಯನ್ನು ಕಂಡು ಹೌಹಾರಿ ಹೋಗಿದ್ದಾನೆ. ಆದರೆ ವಯೋಸಹಜ ಬಾಲಿಶತನ ತೋರದ ಬಾಲಕ ಪ್ರೌಢನಾಗಿ ವರ್ತಿಸಿದ್ದಾನೆ. ತನ್ನ ಜತೆ ಮನೆಯಲ್ಲಿ ಇಟ್ಟುಕೊಳ್ಳಲು ನಿರಾಕರಿಸಿ , ನೀನು ಬೆಂಗಳೂರಿಗೆ ಹಿಂತಿರುಗು ಎಂದು ಆಕೆಗೆ ತಿಳಿಸಿ ಹೇಳಿದ್ದಾನೆ. ಆಕೆ ಜಗ್ಗದಿದ್ದಾಗ ಹೋಟೆಲ್‌ನಲ್ಲಿ ರೂಮ್ ಬುಕ್ ಮಾಡಿಸಿ, ಅವಳನ್ನು ಅಲ್ಲಿಯೇ ಬಿಟ್ಟು ಮನೆಗೆ ಹಿಂತಿರುಗಿದ್ದಾನೆ. ಆಕೆ ಬಳಿ ಪದೇ ಪದೇ ಮನೆಗೆ ಹೋಗು ಎಂದಾತ ಒತ್ತಾಯಿಸಿದ ಹಿನ್ನೆಲೆಯಲ್ಲಿ ಸೋಮವಾರ ದಿನ ಇಬ್ಬರಲ್ಲೂ ಜಗಳವಾಗಿದೆ. ಕೋಪಗೊಂಡ ಬಾಲಕಿ ಹೋಟೆಲ್‌ ರೂಮ್ ಖಾಲಿ ಮಾಡಿಕೊಂಡು ದಿಕ್ಕುದೆಸೆ ಇಲ್ಲದೆ ಅಲೆದಾಡುತ್ತಿದ್ದಾಗ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ ಮಕ್ಕಳ ಕಲ್ಯಾಣ ಸಮಿತಿಗೆ ಕರೆದುಕೊಂಡು ಹೋಗಿದ್ದಾರೆ.

ಗೆಳೆಯನ ನಡತೆಯನ್ನು ಪರೀಕ್ಷಿಸಲು ಅಲ್ಲಿಗೆ ಬಂದಿದ್ದಾಗಿ ಆಕೆ ಹೇಳಿದ್ದಾಳೆ ಎಂದು ತಿಳಿದು ಬಂದಿದೆ.

ಆಕೆಗೆ ಆನ್ಲೈನ್‌ನಲ್ಲಿ ಸಿಕ್ಕಾಪಟ್ಟೆ ಸ್ನೇಹಿತರಿದ್ದು, ತಾನು ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡಿ ಹಣ ಸಂಪಾದಿಸಿ, ಆ ಹಣದಿಂದ ವಿಮಾನ ಟಿಕೆಟ್ ಖರೀದಿಸಿದೆ. ಅಪ್ಪನ ಜತೆ ಜಗಳವಾಡಿದ ಸಿಟ್ಟಿನಲ್ಲಿ ಗೆಳೆಯನನ್ನು ನೋಡಲು ವಿಮಾನ ಹತ್ತಿದೆ ಎಂದು ಹೇಳಿದ್ದಾಳೆ.

ಆಕೆಯ ತಂದೆ ಯಶಸ್ವಿ ಉದ್ಯಮಿಯಾಗಿದ್ದು, ಕೋಪದಿಂದ ಮಗಳು ಚಿಕ್ಕಮ್ಮನ ಮನೆಗೆ ಹೋಗಿರಬಹುದೆಂದುಕೊಂಡು ತಲೆ ಕೆಡಿಸಿಕೊಳ್ಳದೇ ಸುಮ್ಮನಿದ್ದರು. ಭೋಪಾಲ್ ಮಕ್ಕಳ ಕಲ್ಯಾಣ ಅಧಿಕಾರಿಗಳು ಫೋನ್ ಕರೆ ಮಾಡಿ ವಿಷಯ ತಿಳಿಸಿದಾಗಲೇ ಅವರಿಗೆ ಮಗಳು ಅಷ್ಟು ದೂರ ಪ್ರಯಾಣ ಬೆಳೆಸಿದುದರ ಅರಿವಾಗಿದ್ದು.

ಭೋಪಾಲಕ್ಕೆ ಹೋದ ತಂದೆ ಸೋಮವಾರ ರಾತ್ರಿ ಆಕೆಯನ್ನು ಬೆಂಗಳೂರಿಗೆ ಕರೆ ತಂದಿದ್ದಾನೆ.

"ಹೆತ್ತವರಿಗೆ ತಿಳಿಸದೆ ಇಂತಹ ಮೊಂಡು ಧೈರ್ಯ ಪ್ರದರ್ಶಿಸಿರುವುದು ತಪ್ಪು. ಇದರಿಂದ ನಿನಗೆ ಅಪಾಯವಾಗುವ ಸಾಧ್ಯತೆ ಇತ್ತು ಎಂಬುದನ್ನು ಬಾಲಕಿಗೆ ಅರ್ಥ ಮಾಡಿಸಿದ್ದೇವೆ. ಆಕೆಯ ಗೆಳೆಯ ಪ್ರೌಢತೆಯಿಂದ ವರ್ತಿಸಿದ್ದರಿಂದ ಸಂಭಾವ್ಯ ಅಪಾಯ ತಪ್ಪಿದೆ"- ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ರಾಜೀವ್ ಜೈನ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ