ಆ್ಯಪ್ನಗರ

ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿಗೆ ಸರಿಯಾದ ಭದ್ರತೆ ಕೊಡ್ತಿಲ್ಲ: ಪ್ರಿಯಾಂಕ್ ಖರ್ಗೆ

ಮೈಸೂರಿನಿಂದ ಮಂಡ್ಯಗೆ ಯಾತ್ರೆ ಪ್ರವೇಶ ಮಾಡಿದಾಗ ರಾಹುಲ್ ಭದ್ರತೆಗಾಗಿ ಪೊಲೀಸರಲ್ಲಿ ಹಗ್ಗ ಇರಲಿಲ್ಲ. ಇಷ್ಟು ದಿನ ಹಗ್ಗ ಹಿಡಿದು ರಾಹುಲ್‌ಗೆ ರಕ್ಷಣೆ ಕೊಡ್ತಾ ಇದ್ದರು. ಇವತ್ತು ಹಗ್ಗ ಇರದ ಕಾರಣ, ಪೊಲೀಸರು ಕೈ ಹಿಡಿದು ರಕ್ಷಣೆ ಕೊಡುತ್ತಿದ್ದರು ಎಂದು ಆರೋಪಿಸಿದ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ, ಯಾಕೆ ಹಗ್ಗವನ್ನು ತರಲಿಲ್ಲ ಎಂದು ವಿಚಾರಿಸಿದರೆ, ಮೈಸೂರುನವರು ಹಗ್ಗ ತಂದಿದ್ದರು. ವಾಪಸ್ ತೊಗೊಂಡು ಹೋದ್ರು. ಮಂಡ್ಯದವರು ಹಗೆ ಬಿಟ್ಟು ಬಂದಿದ್ದರು ಎಂದು ಆರೋಪಿಸಿದರು. ಈ ಸರ್ಕಾರಕ್ಕೆ ಒಂದು ಹಗ್ಗಕ್ಕೂ ಗತಿ ಇಲ್ಲವೇ? ಎಂದು ಪ್ರಶ್ನಿಸಿದರು.

Authored byಇರ್ಷಾದ್ ಉಪ್ಪಿನಂಗಡಿ | Edited byAvinash Kadeshivalaya | Vijaya Karnataka Web 3 Oct 2022, 1:23 pm
Vijaya Karnataka Web Priyank Kharge
ಬೆಂಗಳೂರು: ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿಗೆ ಸರಿಯಾದ ಭದ್ರತೆ ಕೊಡುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದರು.

ಶ್ರೀರಂಗಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಗಂಭೀರ ಆರೋಪವನ್ನು ಮಾಡಿದರು. ರಾಹುಲ್ ಗಾಂಧಿ ಪಾದಯಾತ್ರೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಆದರೆ ರಾಹುಲ್ ಗಾಂಧಿಗೆ ಸರಿಯಾದ ಭದ್ರತೆ ಕೊಡ್ತಾ ಇಲ್ಲ. ಭಾನುವಾರ ಮಳೆಯಲ್ಲೇ ಭಾಷಣ ಮಾಡಿದ್ರು. ಬಳಿಕ ವೇದಿಕೆಗೆ ಹೋಗುವಾಗ ಅರ್ಧಗಂಟೆ ಟ್ರಾಫಿಕ್‌ನಲ್ಲಿ ಸಿಲುಕಿದ್ದಾರೆ ಎಂದು ವಿವರಿಸಿದರು.
DK Shivakumar | 'ನನ್ನನ್ನೇ ಬಿಡ್ತಿಲ್ಲ ಕಾರ್ಯಕರ್ತರನ್ನು ಬಿಡ್ತಾರಾ?'- ಬಿಜೆಪಿ ನಡೆ ಟೀಕಿಸಿದ ಡಿಕೆಶಿ
ಅಲ್ಲದೇ, ಮೈಸೂರಿನಿಂದ ಮಂಡ್ಯಗೆ ಯಾತ್ರೆ ಪ್ರವೇಶ ಮಾಡಿದಾಗ ರಾಹುಲ್ ಭದ್ರತೆಗಾಗಿ ಪೊಲೀಸರಲ್ಲಿ ಹಗ್ಗ ಇರಲಿಲ್ಲ. ಇಷ್ಟು ದಿನ ಹಗ್ಗ ಹಿಡಿದು ರಾಹುಲ್‌ಗೆ ರಕ್ಷಣೆ ಕೊಡ್ತಾ ಇದ್ದರು. ಇವತ್ತು ಹಗ್ಗ ಇರದ ಕಾರಣ, ಪೊಲೀಸರು ಕೈ ಹಿಡಿದು ರಕ್ಷಣೆ ಕೊಡುತ್ತಿದ್ದರು ಎಂದು ಆರೋಪಿಸಿದರು. ಯಾಕೆ ಹಗ್ಗವನ್ನು ತರಲಿಲ್ಲ ಎಂದು ವಿಚಾರಿಸಿದರೆ, ಮೈಸೂರುನವರು ಹಗ್ಗ ತಂದಿದ್ದರು. ವಾಪಸ್ ತೊಗೊಂಡು ಹೋದ್ರು. ಮಂಡ್ಯದವರು ಹಗೆ ಬಿಟ್ಟು ಬಂದಿದ್ದರು ಎಂದು ಆರೋಪಿಸಿದರು. ಈ ಸರ್ಕಾರಕ್ಕೆ ಒಂದು ಹಗ್ಗಕ್ಕೂ ಗತಿ ಇಲ್ಲವೇ? ಎಂದು ಪ್ರಶ್ನಿಸಿದರು.

ಅಥವಾ ಈ ಬಗ್ಗೆ ಪೊಲೀಸರಿಗೆ ಸರ್ಕಾರದಿಂದ ಸೂಚನೆ ಇತ್ತಾ? ಪೊಲೀಸರ ಬಗ್ಗೆ ನಾನು ಆರೋಪ ಮಾಡಲ್ಲ. ಪೊಲೀಸರು ಕಷ್ಟಪಟ್ಟು ಕೆಲಸ ಮಾಡ್ತಾ ಇದ್ದಾರೆ ಎಂದ ಖರ್ಗೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಲೇಖಕರ ಬಗ್ಗೆ
ಇರ್ಷಾದ್ ಉಪ್ಪಿನಂಗಡಿ
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ದೃಶ್ಯ ಹಾಗೂ ಡಿಜಿಟಲ್ ಮಾಧ್ಯಮ ವರದಿಗಾರಿಕೆಯಲ್ಲಿ 12 ವರ್ಷಗಳ ಅನುಭವ ಹೊಂದಿದ್ದಾರೆ. ಸಿನಿಮಾ ನೋಡುವುದು, ಪುಸ್ತಕ ಓದುವುದು, ಸಮಯ ಸಿಕ್ಕಾಗ ಸುತ್ತಾಟ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ