ಬೆಂಗಳೂರು: ಉಪಚುನಾವಣೆಯಲ್ಲಿ ಬಿಜೆಪಿ ಮೋದಿ ಹೆಸರನ್ನು ಇಟ್ಟುಕೊಂಡು ಆಟವಾಡಿದೆ. ಬರಗಾಲಕ್ಕೆ ಸಂಬಂಧಿಸಿದಂತೆ ಪ್ರಧಾನಿ ಜತೆ ಚರ್ಚೆ ಮಾಡಲಾಗದೆ ರಾಜ್ಯದ ಸಂಸದರು ವಾಪಸ್ ಬಂದಿದ್ದಾರೆ. ಜನರು ಅವರಿಗೆ ತಕ್ಕಪಾಠ ಕಲಿಸಿದ್ದಾರೆ. ಗುಂಡ್ಲುಪೇಟೆ ಮತ್ತು ನಂಜನಗೂಡಿನಲ್ಲಿ ಕಾಂಗ್ರೆಸ್ ಅನ್ನು ಗೆಲ್ಲಿಸಿದ್ದಾರೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಕಾಂಗ್ರೆಸ್ನ ಕೆಲಸ ಏನು ಅಂತಾ ಜನರಿಗೆ ಗೊತ್ತು. ರಾಜ್ಯದ ಸಂಸದರು ಉತ್ತರ ಕುಮಾರರು ಇದ್ದಂತೆ. ಪ್ರಧಾನಿ ಜತೆ ಚರ್ಚೆ ಮಾಡಲು ಆಗದೆ ಬೆನ್ನೆಲುಬಿಲ್ಲದೆ ಕುಳಿತುಕೊಂಡಿರುತ್ತಾರೆ. ಮಾಧ್ಯಮದವರ ಮುಂದೆ ಮಾತ್ರ ಬೀಗುತ್ತಾರೆ ಎಂದು ಸಚಿವರು ಹೇಳಿದರು.
ಕಾಂಗ್ರೆಸ್ನ ಕೆಲಸ ಏನು ಅಂತಾ ಜನರಿಗೆ ಗೊತ್ತು. ರಾಜ್ಯದ ಸಂಸದರು ಉತ್ತರ ಕುಮಾರರು ಇದ್ದಂತೆ. ಪ್ರಧಾನಿ ಜತೆ ಚರ್ಚೆ ಮಾಡಲು ಆಗದೆ ಬೆನ್ನೆಲುಬಿಲ್ಲದೆ ಕುಳಿತುಕೊಂಡಿರುತ್ತಾರೆ. ಮಾಧ್ಯಮದವರ ಮುಂದೆ ಮಾತ್ರ ಬೀಗುತ್ತಾರೆ ಎಂದು ಸಚಿವರು ಹೇಳಿದರು.