ಆರ್ಬಿಐ ಭರವಸೆ?
ಈ ನಡುವೆ, ಮಂಗಳವಾರ ರಾಜ್ಯ ಪಟ್ಟಣ ಬ್ಯಾಂಕ್ಗಳ ಮಹಾ ಮಂಡಲದ ನಿರ್ದೇಶಕ ಕೃಷ್ಣ , ಬ್ಯಾಂಕ್ನ ಅಧ್ಯಕ್ಷ ರಾಮಕೃಷ್ಣ ಮತ್ತು ಇನ್ನಿತರೆ ಆಡಳಿತ ಮಂಡಳಿ ಸದಸ್ಯರ ನೇತೃತ್ವದ ನಿಯೋಗ ಆರ್ಬಿಐಗೆ ತೆರಳಿ ಚರ್ಚೆ ನಡೆಸಿದೆ. ‘ಠೇವಣಿದಾರರು ಮತ್ತು ಗ್ರಾಹಕರ ಆತಂಕವನ್ನು ಅರ್ಥ ಮಾಡಿಸಿದ್ದೇವೆ. ಆರ್ಬಿಐ ಅಧಿಕಾರಿಗಳು ನಮ್ಮ ಮಾತನ್ನು ಪೂರ್ತಿಯಾಗಿ ಕೇಳಿಸಿಕೊಂಡಿದ್ದಾರೆ. ಆದಷ್ಟು ಬೇಗ ನಿರ್ಬಂಧ ಸಡಿಲಿಸುವ ಭರವಸೆ ನೀಡಿದ್ದಾರೆ’ ಎಂಬುದಾಗಿ ಇವರುಗಳು ಹೇಳಿದ್ದಾರೆ.
‘ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ಕೆಲವೊಂದು ಸಹಕಾರಿ ಬ್ಯಾಂಕ್ಗಳಿಂದ ಗ್ರಾಹಕರು ಕೇವಲ ಸಾವಿರ ರೂಪಾಯಿ ಮಾತ್ರ ಡ್ರಾ ಮಾಡಲು ಅವಕಾಶವಿತ್ತು. ಆದರೆ ರಾಘವೇಂದ್ರ ಬ್ಯಾಂಕ್ನ ಗ್ರಾಹಕರಿಗೆ 35 ಸಾವಿರ ರೂಪಾಯಿ ಡ್ರಾ ಮಾಡಲು ಅವಕಾಶ ಕೊಟ್ಟಿದ್ದೇವೆ. ಪರಿಶೀಲನೆ ಮುಗಿದ ಬಳಿಕ ಆದಷ್ಟು ಬೇಗ ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂದು ಆರ್ಬಿಐ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಎಚ್ಕೆ ಪಾಟೀಲ್ ಜೊತೆ ಚರ್ಚೆ
ಆರ್ಬಿಐ ಜತೆಗಿನ ಸಭೆ ಬಳಿಕ ಸಹಕಾರ ಕ್ಷೇತ್ರದ ಹಿರಿಯರಾದ ಎಚ್.ಕೆ. ಪಾಟೀಲರ ಜತೆಗೂ ಮಹಾಮಂಡಲದ ಸಭೆ ನಡೆಯಿತು. ಸಮಸ್ಯೆ ಬಗೆಹರಿಸಲು ಪೂರಕವಾಗಿ ಎರಡು ಗಂಟೆಗೂ ಅಧಿಕ ಅವಧಿಯ ಚರ್ಚೆ ನಡೆಯಿತು. ದೇಶ ಮತ್ತು ರಾಜ್ಯದ ಆರ್ಥಿಕತೆಯಲ್ಲಿ ಸಹಕಾರ ಕ್ಷೇತ್ರದ ಪಾತ್ರ ಮತ್ತು ಪಾಲು ಬಹುದೊಡ್ಡದಿದೆ. ಸಹಕಾರ ಕ್ಷೇತ್ರಕ್ಕೆ ಧಕ್ಕೆ ಆದರೆ ಅದು ದೇಶದ ಆರ್ಥಿಕತೆ ಮೇಲೆ ಇನ್ನೂ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುವ ಆತಂಕಗಳು ಸಭೆಯಲ್ಲಿ ವ್ಯಕ್ತವಾಯಿತು ಎಂದು ತಿಳಿದು ಬಂದಿದೆ.
ಗುರು ರಾಘವೇಂದ್ರ ಬ್ಯಾಂಕ್ ನ ಲೈಸನ್ಸ್ ರದ್ದಾಗಿಲ್ಲ: ಆರ್ಬಿಐ ಸ್ಪಷ್ಟನೆ, ಅಷ್ಟಕ್ಕೂ ಆಗಿದ್ದೇನು?
‘ಒಬ್ಬೇ ಒಬ್ಬ ಗ್ರಾಹಕರಿಗೂ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಆರ್ಬಿಐಗೆ ಮನವಿ’
“ಆರ್ಬಿಐ ಜತೆ ಮಂಗಳವಾರ ಬೆಳಗ್ಗೆ ಸಭೆ ನಡೆಸಿ, ಸಂಜೆ ಹಿರಿಯ ಸಹಕಾರಿ ಧುರೀಣರಾದ ಎಚ್.ಕೆ.ಪಾಟೀಲ್ ಅವರ ಜತೆಗೂ ಸಭೆ ನಡೆಸಿದ್ದೇವೆ. ಹಬ್ಬದ ದಿನಗಳಿವೆ. ಈ ಸಂದರ್ಭದಲ್ಲಿ ಗ್ರಾಹಕರಿಗೆ ನೆಮ್ಮದಿ ಮತ್ತು ಭರವಸೆ ಬೇಕಾಗಿದೆ. ಆದಷ್ಟು ಬೇಗ ಪರಿಶೀಲನೆ ಮುಗಿಸಿ ಮುಂಚಿನಂತೆ ಬ್ಯಾಂಕ್ ಕಾರ್ಯನಿರ್ವಹಿಸಲು ಅನುಮತಿ ನೀಡುವಂತೆ ನಾವು ಮಾಡಿದ ಮನವಿಗೆ ಆರ್ಬಿಐ ಸ್ಪಂದಿಸಿದೆ. ಸಂಜೆ ಎಚ್.ಕೆ. ಪಾಟೀಲರ ಜತೆ ನಡೆಸಿದ ಸಭೆಯೂ ಅರ್ಥಪೂರ್ಣವಾಗಿ ನಡೆದಿದೆ. ಒಬ್ಬೇ ಒಬ್ಬ ಗ್ರಾಹಕರಿಗೂ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದೇನೆ,” ಎಂಬುದಾಗಿ ರಾಜ್ಯ ಪಟ್ಟಣ ಬ್ಯಾಂಕ್ಗಳ ಮಹಾಮಂಡಲ ನಿರ್ದೇಶಕ ಎಚ್.ಸಿ. ಕೃಷ್ಣ ಹೇಳಿದರು.
ನಾವು ಎಲ್ಲಿಯೂ ಓಡಿ ಹೋಗಲ್ಲ...
“ನಾನು ಎಲ್ಲಿಯೂ ಓಡಿ ಹೋಗುವುದಿಲ್ಲ. ಮಲ್ಯ ರೀತಿ ವಿದೇಶಕ್ಕೆ ಓಡಿ ಹೋಗುತ್ತೇನೆ ಎನ್ನುವ ಅಪಪ್ರಚಾರದ ಬಗ್ಗೆ ಕಿವಿಗೊಡಬೇಡಿ. ಇಲ್ಲೇ ಇದ್ದು ಸಮಸ್ಯೆ ಬಗೆಹರಿಸಲು ಯತ್ನಿಸುತ್ತೇನೆ. ಠೇವಣಿದಾರರ ಹಣ ಸುರಕ್ಷಿತವಾಗಿದೆ. 2,200 ಕೋಟಿ ರೂಪಾಯಿ ವಹಿವಾಟು ನಡೆಸಿರುವ ಬ್ಯಾಂಕ್ ಪ್ರತಿಯೊಬ್ಬ ಗ್ರಾಹಕರ ಹಣಕ್ಕೂ ಜವಾಬ್ದಾರಿ ಆಗಿದೆ. ಸದ್ಯ ಸಮಸ್ಯೆ ಎದುರಾಗಿದೆ. ಬಗೆಹರಿಸುತ್ತೇವೆ ಎನ್ನುವ ಭರವಸೆಯಿಡಿ,” ಎಂಬುದಾಗಿ ರಾಘವೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ರಾಮಕೃಷ್ಣ ವಿವರಿಸಿದರು.