ಆ್ಯಪ್ನಗರ

ಮೆಡಿಕಲ್‌ ಸೀಟ್‌ಗೆ ₹47 ಲಕ್ಷ ಪಡೆದು ವಂಚನೆ ಆರೋಪ; ಅಪ್ಪಾಜಿಗೌಡ ಮತ್ತಿತರರ ವಿರುದ್ಧದ ವಿಚಾರಣೆ ರದ್ದು..!

2014-15ನೇ ಸಾಲಿನಲ್ಲಿ ಮೊದಲನೇ ವರ್ಷದ ಎಂಬಿಬಿಎಸ್‌ ಪದವಿ ಸೀಟು ಹಂಚಿಕೆ ಮಾಡಲಾಗಿತ್ತು. ಅದಕ್ಕಾಗಿ 47 ಲಕ್ಷ ರೂ.ಗಳನ್ನು ಅಪ್ಪಾಜಿಗೌಡ, ಡಾ.ಎಂ.ಜಿ. ಗೋಪಾಲ್‌ ಮತ್ತು ಡಾ.ನಿಸರ್ಗ ಪಡೆದಿದ್ದರು. ಆದರೆ, ತಮ್ಮ ಮಗನಿಗೆ ಹಂಚಿಕೆಯಾದ ಸೀಟನ್ನು ಮತ್ತೊಬ್ಬರಿಗೆ ಹಂಚಿಕೆ ಮಾಡಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ಸಲ್ಲಿಕೆಯಾಗಿತ್ತು.

Vijaya Karnataka Web 23 Jan 2021, 7:50 am
ಬೆಂಗಳೂರು: ಕಿಮ್ಸ್‌ನಲ್ಲಿ ಎಂಬಿಬಿಎಸ್‌ ಸೀಟು ಹಂಚಿಕೆಗೆ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ್ದಾರೆಂಬ ಆರೋಪದ ಸಂಬಂಧ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಡಾ.ಅಪ್ಪಾಜಿಗೌಡ ಹಾಗೂ ಇನ್ನಿತರರ ವಿರುದ್ಧದ ದೂರು ಮತ್ತು ಮ್ಯಾಜಿಸ್ಪ್ರೇಟ್‌ ಕೋರ್ಟ್‌ನಲ್ಲಿ ನಡೆಯುತ್ತಿದ್ದ ವಿಚಾರಣೆಯನ್ನು ಹೈಕೋರ್ಟ್‌ ರದ್ದುಪಡಿಸಿದೆ.
Vijaya Karnataka Web Karnataka high court 3
Karnataka HC


ತಮ್ಮ ವಿರುದ್ಧದ ದೂರು ಮತ್ತು ವಿಚಾರಣೆ ರದ್ದು ಕೋರಿ ಡಾ.ಎಂ.ಜಿ.ಗೋಪಾಲ್‌, ಡಾ.ಅಪ್ಪಾಜಿಗೌಡ ಮತ್ತು ಡಾ.ನಿಸರ್ಗ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ.ಬಿ.ಎ.ಪಾಟೀಲ್‌ ಅವರಿದ್ದ ಏಕಸದಸ್ಯಪೀಠ ಪುರಸ್ಕರಿಸಿದೆ. ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಆದರೆ, ಸಿಸಿಬಿಗೆ ಪೊಲೀಸ್‌ ಠಾಣೆ ಸ್ಥಾನಮಾನವಿಲ್ಲ. ಕಾನೂನು ಪ್ರಕಾರ ಆರೋಪ ಪಟ್ಟಿಯನ್ನು ಪೊಲೀಸ್‌ ಠಾಣಾ ಇನ್ಸ್‌ಪೆಕ್ಟರ್‌ ಸಲ್ಲಿಸಬೇಕು. ಆಗ ಮಾತ್ರ ಮ್ಯಾಜಿಸ್ಪ್ರೇಟ್‌ ಕೋರ್ಟ್‌ ಒಪ್ಪಿಗೆ ಪಡೆದು ಆರೋಪ ನಿಗದಿಪಡಿಸಿ ವಿಚಾರಣೆ ನಡೆಸಬೇಕು. ಈ ನಿಯಮ ಉಲ್ಲಂಘನೆ ಕಾರಣ ಅರ್ಜಿದಾರರ ವಿರುದ್ಧದ ಮ್ಯಾಜಿಸ್ಪ್ರೇಟ್‌ ಕೋರ್ಟ್‌ ವಿಚಾರಣೆ ರದ್ದುಪಡಿಸಲಾಗುತ್ತಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
₹50 ಸಾವಿರ ದಂಡ ಕಟ್ಟಲು ವಿಫಲ; ವಾಟಾಳ್‌ ನಾಗರಾಜ್‌ ವಿರುದ್ಧ ಎಫ್‌ಐಆರ್‌..!
ಕೆ.ಆರ್‌.ಚೌಧರಿ ಎಂಬುವರ ಮಗನಿಗೆ ಕೆಂಪೇಗೌಡ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ 2014-15ನೇ ಸಾಲಿನಲ್ಲಿ ಮೊದಲನೇ ವರ್ಷದ ಎಂಬಿಬಿಎಸ್‌ ಪದವಿ ಸೀಟು ಹಂಚಿಕೆ ಮಾಡಲಾಗಿತ್ತು. ಅದಕ್ಕಾಗಿ 47 ಲಕ್ಷ ರೂ.ಗಳನ್ನು ಅಪ್ಪಾಜಿಗೌಡ, ಡಾ.ಎಂ.ಜಿ. ಗೋಪಾಲ್‌ ಮತ್ತು ಡಾ.ನಿಸರ್ಗ ಪಡೆದಿದ್ದರು. ಆದರೆ, ತಮ್ಮ ಮಗನಿಗೆ ಹಂಚಿಕೆಯಾದ ಸೀಟನ್ನು ಮತ್ತೊಬ್ಬರಿಗೆ ಹಂಚಿಕೆ ಮಾಡಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ಸಲ್ಲಿಕೆಯಾಗಿತ್ತು.
ವಿನಯ ಕುಲಕರ್ಣಿ ಜಾಮೀನು ಅರ್ಜಿ ವಜಾ ಮಾಡಿದ ಧಾರವಾಡ ಹೈಕೋರ್ಟ್..!
ಆ ದೂರು ಆಧರಿಸಿ ತನಿಖೆ ನಡೆಸಿದ್ದ ಸಿಸಿಬಿ ಪೊಲೀಸರು 4ನೇ ಹೆಚ್ಚುವರಿ ಎಸಿಎಂಎಂ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ತಮ್ಮ ವಿರುದ್ಧದ ಆರೋಪ ಕೈಬಿಡುವಂತೆ ಕೋರಿ ಅಪ್ಪಾಜಿ ಗೌಡ ಹಾಗೂ ಇನ್ನಿಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಎಸಿಎಎಂಎ ನ್ಯಾಯಾಲಯ ತಿರಸ್ಕರಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ