ಆ್ಯಪ್ನಗರ

ಕಾಲದ ಹೊಡೆತಕ್ಕೆ ಸಿಲುಕದ 'ಕಾಲೆ ಭಾಯಿ ಕಾ ಅಖಾಡಾ'

ರಾಜಧಾನಿ ಬೆಂಗಳೂರಿನ ಶಿವಾಜಿನಗರದ ಕಿರಿದಾದ ಬೀದಿಯಲ್ಲಿರುವ 80 ವರ್ಷಗಳಷ್ಟು ಹಳೆಯ 'ಕಾಲೆ ಭಾಯಿ ಕಾ ಅಖಾಡಾ' ಎಂಬ ಗರಡಿ ಮನೆ ತನ್ನ ಮೂಲ ಸ್ವರೂಪವನ್ನೇ ಉಳಿಸಿಕೊಂಡು ಬಂದಿದೆ.

Bangalore Mirror Bureau 9 Jun 2017, 3:47 pm
ಬೆಂಗಳೂರು: ಆಧುನಿಕ ಜಗತ್ತಿನಲ್ಲಿ ಪ್ರತಿಯೊಂದು ಕ್ಷೇತ್ರಗಳಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿದೆ. ಆದರೆ, ರಾಜಧಾನಿ ಬೆಂಗಳೂರಿನ ಶಿವಾಜಿನಗರದ ಕಿರಿದಾದ ಬೀದಿಯಲ್ಲಿರುವ 80 ವರ್ಷಗಳಷ್ಟು ಹಳೆಯ 'ಕಾಲೆ ಭಾಯಿ ಕಾ ಅಖಾಡಾ' ಎಂಬ ಗರಡಿ ಮನೆ ತನ್ನ ಮೂಲ ಸ್ವರೂಪವನ್ನೇ ಉಳಿಸಿಕೊಂಡು ಬಂದಿದೆ.
Vijaya Karnataka Web hidden among the narrow streets of shivajinagar is kale bhai ka akhada
ಕಾಲದ ಹೊಡೆತಕ್ಕೆ ಸಿಲುಕದ 'ಕಾಲೆ ಭಾಯಿ ಕಾ ಅಖಾಡಾ'


ದಿನಗಳು ಕಳೆದಂತೆ ರಾಜಧಾನಿ ಬೆಂಗಳೂರು ವ್ಯಾಪಕವಾಗಿ ಬೆಳೆಯುತ್ತಿದೆ. ವೇಗವಾಗಿ ಬೆಳೆಯುತ್ತಿರುವ ನಗರ ಎಂಬ ಖ್ಯಾತಿ ಪಡೆದುಕೊಂಡಿದ್ದು, ದೇಶದ ವಿವಿಧ ಭಾಗದ ಜನರು ಉದ್ದೋಗ ಅರಸಿ ವಲಸೆ ಬರುತ್ತಿದ್ದಾರೆ. ಇಷ್ಟೊಂದು ಬದಲಾಗಿರುವ ನಗರದಲ್ಲಿ 80 ವರ್ಷಗಳ ಇತಿಹಾಸ ಹೊಂದಿರುವ 'ಕಾಲೆ ಭಾಯಿ ಕಾ ಅಖಾಡಾ'ದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಅದೇ ಹಳೆಯ ಕಟ್ಟಡ, ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿರುವುದು ವಿಶೇಷವಾಗಿದೆ.

ಈ ಅಖಾಡಾವನ್ನು ಸುಪ್ರಸಿದ್ಧ ಪೈಲ್ವಾನ್ ಕಾಲೆ ಭಾಯಿ ಅವರು 1937ರಲ್ಲಿ ಸ್ಥಾಪಿಸಿದ್ದರು. ಇದೀಗ ಅಖಾಡವನ್ನು ಪೈಲ್ವಾನ್ ಬಶೀರ್ ಅವರು ನಿರ್ವಹಿಸುತ್ತಿದ್ದಾರೆ. 'ನನಗೆ ನೆನಪಿರುವಂತೆ ಕಳೆದ 80 ವರ್ಷಗಳಿಂದ ಈ ಅಖಾಡ ತನ್ನ ಮೂಲ ಸ್ವರೂಪವನ್ನೇ ಉಳಿಸಿಕೊಂಡು ಬಂದಿದೆ' ಎಂದು ಪೈಲ್ವಾನ್ ಬಶೀರ್ ಹೇಳಿಕೊಂಡಿದ್ದಾರೆ.

ಇತಿಹಾಸದ ಹಿನ್ನೆಲೆ ಹೊಂದಿರುವ ಈ ಅಖಾಡದಲ್ಲಿ ಹಲವು ಬಗೆಯ ಪೈಲ್ವಾನ್‌ರನ್ನು ಕಾಣಬಹುದಾಗಿದೆ. ಈ ಅಖಾಡದಲ್ಲಿ ಬೆಳಗ್ಗೆ 5ರಿಂದ 11ರವರೆಗೆ ಮತ್ತು ಸಂಜೆ 7 ರಿಂದ 10ರವರೆಗೆ ಕುಸ್ತಿಪಟುಗಳಿಗೆ ತರಬೇತಿ ನೀಡಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ