ಆ್ಯಪ್ನಗರ

ಆನೆಗೆ ಹೊಡೆದ ಗುಂಡಿನಿಂದ ಸ್ನೇಹಿತ ಮೃತ್ಯು: ಆರೋಪಿಗೆ ಹೈಕೋರ್ಟ್‌ ಜಾಮೀನು

ಸ್ನೇಹಿತನಿಗೆ ಗುಂಡಿಕ್ಕಿ ಕೊಂದಿದ್ದ ವ್ಯಕ್ತಿಯನ್ನು ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದೆ.

Bangalore Mirror Bureau 29 Aug 2018, 7:19 pm
[This story originally published in times of India on Aug 29, 2018]
Vijaya Karnataka Web highcourt


ಬೆಂಗಳೂರು: ಸ್ನೇಹಿತನಿಗೆ ಗುಂಡಿಕ್ಕಿ ಕೊಂದಿದ್ದ ವ್ಯಕ್ತಿಯನ್ನು ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದೆ. ಆನೆಗಳನ್ನು ಓಡಿಸಲು ಹಾರಿಸಿದ ಗುಂಡು, ಸ್ನೇಹಿತನಿಗೆ ತಗುಲಿ ಅಶ್ರಫ್‌ ಎಂಬಾತ ಮೃತಪಟ್ಟಿದ್ದ. ಈ ಘಟನೆ ಆಕಸ್ಮಿಕವಾಗಿ ನಡೆದಿದ್ದು, ಆರೋಪಿ ಅಬೂಬಕರ್‌ ಹಂತಕನಲ್ಲ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ. ಹೀಗಾಗಿ ಬಂಧನದಲ್ಲಿದ್ದ ಅಬೂಬಕರ್‌ನನ್ನು ಬಿಡುಗಡೆ ಮಾಡಲಾಗಿದೆ.

ನಾಪೋಕ್ಲುವಿನಲ್ಲಿ ಏ.14, 2018ರಂದು ರಾತ್ರಿ ಅಬೂಬಕರ್‌, ಹನೀಫ್‌ ಹಾಜಿ ಹಾಗೂ ಅಶ್ರಫ್ ಎಸ್ಟೇಟ್‌ ಒಳಗೆ ನುಗ್ಗಿದ್ದ ಆನೆಗಳನ್ನು ಓಡಿಸಲು ತೆರಳಿದ್ದಾರೆ. ಹನೀಫ್‌ ಬಂದೂಕಿನ ಜತೆ ಬಂದಿದ್ದು, ಅಶ್ರಫ್‌ ಮೂತ್ರವಿಸರ್ಜನೆಗಾಗಿ ವಾಹನದಿಂದ ಕೆಳಗಿಳಿದಿದ್ದ. ಈ ವೇಳೆ ಆನೆಗಳನ್ನು ಕಂಡ ಅಬೂಬಕರ್‌, ಹನೀಫ್‌ ಕೈಯಲ್ಲಿದ್ದ ಬಂದೂಕನ್ನು ಪಡೆದು, ಗುಂಡು ಹಾರಿಸಿದ್ದಾನೆ. ಈ ಗುಂಡು ಅಶ್ರಫ್‌ಗೆ ತಗುಲಿದೆ. ತೀವ್ರ ಗಾಯವಾಗಿದ್ದರಿಂದ ಆತ ತುಸು ಹೊತ್ತಲ್ಲೇ ಪ್ರಾಣಬಿಟ್ಟಿದ್ದಾನೆ.

ಅಬ್ದುಲ್‌ ಖಾದರ್‌ ಎಂಬವರು ದೂರು ನೀಡಿದ್ದ ಹಿನ್ನೆಲೆಯಲ್ಲಿ ಅಬೂಬಕರ್‌ನ್ನು ಬಂಧಿಸಲಾಗಿತ್ತು. ಅಬೂಬಕರ್‌ ಜಾಮೀನು ಅರ್ಜಿಯನ್ನು ಈ ಹಿಂದೆ ವಿಚಾರಣಾ ನ್ಯಾಯಾಲಯ ನಿರಾಕರಿಸಿತ್ತು. ಈ ಸಂಬಂಧ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.

ಅಬೂಬಕರ್‌ಗೆ ಸ್ನೆಹಿತ ಅಶ್ರಫ್‌ನನ್ನು ಕೊಲೆ ಮಾಡುವ ಉದ್ಧೇಶ ಇರಲಿಲ್ಲ. ಆನೆ ಓಡಿಸಲು ಆತ ಗುಂಡು ಹಾರಿಸಿದ್ದ. ಸ್ನೇಹಿತನ ಕೊಲೆ ಯತ್ನ ಇದಲ್ಲ. ಹೀಗಾಗಿ ಅಬೂಬಕರ್‌ಗೆ ಜಾಮೀನು ನೀಡುವುದರಿಂದ ಯಾವುದೇ ಸಮಸ್ಯೆಯಾಗದು. ದೂರಿನಲ್ಲೇ ಸ್ಪಷ್ಟವಾಗಿ ನಮೂದಿಸಲಾಗಿದೆ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟು, ಜಾಮೀನು ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ