ಆ್ಯಪ್ನಗರ

ಪೊಲೀಸ್ ಆ್ಯಕ್ಷನ್ ಎಂದರೇನು ಎಂಬುದನ್ನು ತೋರಿಸುತ್ತೇವೆ: ಬೊಮ್ಮಾಯಿ ಘೋಷಣೆ!

ಪಾದರಾಯನಪುರ ಗಲಭೆಗೆ ಕಾರಣರಾದವರಿಗೆ ತಕ್ಕ ಪಾಠ ಕಲಿಸುವುದಾಗಿ ಹೇಳಿರುವ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಪೊಲೀಸ್ ಕಾರ್ಯಾಚರಣೆ ಎಂದರೆ ಏನು ಎಂಬುದನ್ನು ನಾವು ತೋರಿಸುತ್ತೇವೆ ಎಂದು ಘೋಷಿಸಿದ್ದಾರೆ.

Vijaya Karnataka Web 20 Apr 2020, 11:40 am
ಬೆಂಗಳೂರು: ಪಾದರಾಯನಪುರ ಗಲಭೆಯನ್ನು ತೀವ್ರವಾಗಿ ಖಂಡಿಸಿರುವ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಗಲಭೆಕೋರರಿಗೆ ಪೊಲೀಸ್ ತಾಕತ್ತು ಏನೆಂಬುದನ್ನು ತೋರಿಸುವ ಸಮಯ ಬಂದಿದೆ ಎಂದು ಗುಡುಗಿದ್ದಾರೆ.
Vijaya Karnataka Web basavaraj Bommai
ಪಾದರಾಯನಪುರ ಗಲಭೆಗೆ ಕಾರಣರಾದವರನ್ನು ಶಿಕ್ಷಿಸದೇ ಬಿಡುವುದಿಲ್ಲ ಎಂದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ


ಗಲಭೆ ಪೀಡಿತ ಪಾದರಾಯನಪುರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಗಲಭೆಗೆ ಕಾರಣರಾದವರನ್ನು ಕಾನೂನಿನಡಿ ಶಿಕ್ಷೆಗೆ ಗುರಿಪಡಿಸುವುದು ಖಚಿತ ಎಂದು ಭರವಸೆ ನೀಡಿದ್ದಾರೆ.

ಘಟನೆ ಕುರಿತು ತುಸು ಆಕ್ರೋಶಭರಿತರಾಗಿಯೇ ಮಾತನಾಡಿದ ಬೊಮ್ಮಾಯಿ, ಕಾನೂನನ್ನು ಮೀರುವವರಿಗೆ ಪೊಲೀಸ್ ಕಾರ್ಯಾಚರಣೆ ಎಂದರೇನು ಎಂಬುದನ್ನು ತೋರಿಸುವ ಸಮಯ ಬಂದಿದೆ ಎಂದು ಗುಡುಗಿದ್ದಾರೆ.

ಪಾದರಾಯನಪುರ ದಾಳಿ: ಘಟನಾ ಸ್ಥಳಕ್ಕೆ ಭೇಟಿ ನೀಡಲಿರುವ ಬಸವರಾಜ್‌ ಬೊಮ್ಮಾಯಿ


ಪೊಲೀಸ್ ಕಾರ್ಯಾಚರಣೆ ಎಂದರೆ ಹೇಗಿರುತ್ತದೆ ಎಂಬುದನ್ನು ಇಡೀ ರಾಜ್ಯ ನೋಡಲಿದೆ ಎಂದು ಬಸವರಾಜ್ ಬೊಮ್ಮಾಯಿ ಘೋಷಿಸಿದ್ದು, ಈ ಮೂಲಕ ಗಲಭೆಕೋರರನ್ನು ಉಗ್ರ ಶಿಕ್ಷೆಗೆ ಗುರಿಪಡಿಸುವ ಮಾತುಗಳನ್ನಾಡಿದ್ದಾರೆ.

ಕೆಲವು ಸ್ಥಳೀಯ ಪುಢಾರಿಗಳು ನಾವು ಏನು ಮಾಡಿದರೂ ನಡೆಯುತ್ತದೆ ಎಂಬ ಭ್ರಮೆಯಲ್ಲಿದ್ದಾರೆ. ರಾಜಕೀಯ ಪಕ್ಷಗಳು ಹಾಗೂ ಮುಖಂಡರು ನಮ್ಮನ್ನು ಕಾಪಾಡುತ್ತಾರೆ ಎಂದು ಕೆಲವರು ಭಾವಿಸಿದ್ದಾರೆ. ಅವರೆಲ್ಲರಿಗೂ ಕಾನೂನು ಎಂದರೆ ಏನು ಎಂಬುದನ್ನು ತಿಳಿಸುವ ಕಾಲವಿದು ಎಂದು ಬೊಮ್ಮಾಯಿ ಮಾರ್ಮಿಕವಾಗಿ ನುಡಿದಿದ್ದಾರೆ.

ಪಾದರಾಯನಪುರ ಪ್ರಕರಣ: ಡಿಸಿಪಿ‌ಗೆ ಗೃಹಸಚಿವರ ಕ್ಲಾಸ್‌, ಕಠಿಣ ಕ್ರಮಕ್ಕೆ ಖಡಕ್‌ ಆದೇಶ!

ಪಾದರಾಯನಪುರ ಗಲಭೆ ಕುರಿತು ಗೃಹ ಸಚಿವರು ಬಹಳ ಕೋಪದಲ್ಲಿರುವುದು ಅವರ ಮಾತಿನಿಂದಲೇ ಸ್ಪಷ್ಟವಾಗಿದ್ದು, ಕೊರೊನಾ ವೈರಸ್ ವಿರುದ್ಧ ಇಡೀ ರಾಜ್ಯ ಒಂದಾಗಿ ಹೋರಾಡುತ್ತಿರುವಾಗ ಕೊರೊನಾ ಸಮರ ಧೀರರ ಮೇಲೆ ನಡೆದ ದಾಳಿ ಬಸವರಾಜ್ ಬೊಮ್ಮಾಯಿ ಅವರನ್ನು ನಿಸ್ಸಂದೇಹವಾಗಿ ಕೆರಳಿಸಿದೆ.

ಇದೇ ವೇಳೆ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಅವರ ಪ್ರತಿಕ್ರಿಯೆ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ಜಮೀರ್ ಅಹ್ಮದ್ ಅವರು ಸರ್ಕಾರವಲ್ಲ ಎಂದು ಹರಿಹಾಯ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ