ಆ್ಯಪ್ನಗರ

ರಾಮೇಶ್ವರದಲ್ಲಿ ಕನ್ನಡಕ್ಕೆ ಜೈ ಎಂದಿದ್ದ ಕುಲಾಲ್‌ಗೆ ಸನ್ಮಾನ

ರಾಮೇಶ್ವರದಲ್ಲಿ ತಮಿಳರಿಂದ ಥಳಿತಕ್ಕೊಳಗಾದ ಸಂದರ್ಭದಲ್ಲೂ ಕನ್ನಡಕ್ಕೆ ಜೈಎಂದು ಘೋಷಣೆ ಕೂಗಿದ್ದ ಕುಂದಾಪುರದ ಮಂಜುನಾಥ ಕುಲಾಲ್ ಅವರನ್ನು ಮಾಗಡಿಯಲ್ಲಿ ಸನ್ಮಾನಿಸಲಾಯಿತು.

ವಿಕ ಸುದ್ದಿಲೋಕ 12 Nov 2016, 1:37 pm
ಮಾಗಡಿ: ತಮಿಳುನಾಡಿನ ರಾಮೇಶ್ವರದಲ್ಲಿ ತಮಿಳರಿಂದ ಥಳಿತಕ್ಕೊಳಗಾದ ಸಂದರ್ಭದಲ್ಲೂ ಕನ್ನಡಕ್ಕೆ ಜೈಎಂದು ಘೋಷಣೆ ಕೂಗಿದ್ದ ಕುಂದಾಪುರದ ಮಂಜುನಾಥ ಕುಲಾಲ್ ಅವರನ್ನು ಮಾಗಡಿಯಲ್ಲಿ ಸನ್ಮಾನಿಸಲಾಯಿತು.
Vijaya Karnataka Web honor to manjunath kullal in magadi
ರಾಮೇಶ್ವರದಲ್ಲಿ ಕನ್ನಡಕ್ಕೆ ಜೈ ಎಂದಿದ್ದ ಕುಲಾಲ್‌ಗೆ ಸನ್ಮಾನ


ಮಾಗಡಿಯ ಕೋಟೆ ಮೈದಾನದಲ್ಲಿ ನಡೆದ 61ನೇ ಕನ್ನಡ ರಾಜ್ಯೋತ್ಸವದ ವೇಳೆಶಾಸಕ ಎಚ್.ಸಿ.ಬಾಲಕೃಷ್ಣ ಹಾಗೂ ತಾಲೂಕು ಆಡಳಿತದ ವತಿಯಿಂದ ಕುಲಾಲ್‌ ಅವರನ್ನು ಗೌರವಿಸಲಾಗಿದೆ.

ಕುಂದಾಪುರದ ರಟ್ಟಾಡಿಯ ಕುಲಾಲ್‌ ಅವರು ಕಾವೇರಿ ಹೋರಾಟ ಸಂದರ್ಭದಲ್ಲಿ ಚಾಲಕರಾಗಿ ತಮಿಳುನಾಡಿನ ರಾಮೇಶ್ವರಕ್ಕೆ ಹೋಗಿದ್ದರು. ಅಲ್ಲಿ ತಮಿಳಿಗರು ಅವರನ್ನು ಹೊಡೆದು ಬಡಿದು ತಮಿಳುನಾಡಿಗೆ ಜೈ ಹೇಳು ಎಂದು ಬಲವಂತಪಡಿಸಿದ್ದರು. ಕಾವೇರಿ ತಮಿಳುನಾಡಿಗೆ ಸೇರಿದ್ದು ಎಂದು ಹೇಳುವಂತೆ ಒತ್ತಾಯಿಸಿದ್ದರು. ಗಂಭೀರ ಹಲ್ಲೆಗೆ ಒಳಗಾದರೂ ಸಹ ಕುಲಾಲ್‌ ಅವರು ಕನ್ನಡಕ್ಕೆ ಜೈ ಎಂದು ಹೇಳಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ