ಆ್ಯಪ್ನಗರ

ಬೆಂಗಳೂರಿಗರೇ ಎಚ್ಚರ.. ಎಚ್ಚರ..! ಹಾಡಹಗಲೇ ದರೋಡೆ; ಒಂಟಿಯಾಗಿ ಓಡಾಡುವವರೇ ಇವರ ಟಾರ್ಗೆಟ್‌..!

ಬೆಂಗಳೂರಿಗರೇ ಎಚ್ಚರ.. ಎಚ್ಚರ.. ಸಿಲಿಕಾನ್‌ ಸಿಟಿಯಲ್ಲಿ ಒಂಟಿಯಾಗಿ ಓಡಾಡುತ್ತೀರಿ ಎಂದರೆ ಎಚ್ಚರ ವಹಿಸುವುದು ಅತ್ಯಗತ್ಯ. ಹೌದು, ನಗರದಲ್ಲಿ ಎರಡು ದಿನಗಳ ಹಿಂದಷ್ಟೇ ವ್ಯಕ್ತಿಯೊಬ್ಬ ಸಿಕ್ಕ ಸಿಕ್ಕವರಿಗೆ ಚಾಕುವಿನಿಂದ ಇರಿದಿರುವ ಘಟನೆ ಹಸಿಯಾಗಿರುವಾಗಲೇ ಚಿಕ್ಕಪೇಟೆ ಬಳಿ ಇಬ್ಬರು ಅಪರಿಚಿತರು ಹಾಡ ಹಗಲಲ್ಲಿಯೇ ದರೋಡೆ ನಡೆಸಿದ್ದಾರೆ.

Vijaya Karnataka Web 20 Oct 2020, 11:43 pm
ಬೆಂಗಳೂರು: ಬೆಂಗಳೂರಿಗರೇ ಎಚ್ಚರ.. ಎಚ್ಚರ.. ಸಿಲಿಕಾನ್‌ ಸಿಟಿಯಲ್ಲಿ ಒಂಟಿಯಾಗಿ ಓಡಾಡುತ್ತೀರಿ ಎಂದರೆ ಎಚ್ಚರ ವಹಿಸುವುದು ಅತ್ಯಗತ್ಯ. ಹೌದು, ನಗರದಲ್ಲಿ ಎರಡು ದಿನಗಳ ಹಿಂದಷ್ಟೇ ವ್ಯಕ್ತಿಯೊಬ್ಬ ಸಿಕ್ಕ ಸಿಕ್ಕವರಿಗೆ ಚಾಕುವಿನಿಂದ ಇರಿದಿರುವ ಘಟನೆ ಹಸಿಯಾಗಿರುವಾಗಲೇ ಚಿಕ್ಕಪೇಟೆ ಬಳಿ ಇಬ್ಬರು ಅಪರಿಚಿತರು ಹಾಡ ಹಗಲಲ್ಲಿಯೇ ದರೋಡೆ ನಡೆಸಿದ್ದಾರೆ.
Vijaya Karnataka Web horrific incident in broad daylight robbery in chickpet
ಬೆಂಗಳೂರಿಗರೇ ಎಚ್ಚರ.. ಎಚ್ಚರ..! ಹಾಡಹಗಲೇ ದರೋಡೆ; ಒಂಟಿಯಾಗಿ ಓಡಾಡುವವರೇ ಇವರ ಟಾರ್ಗೆಟ್‌..!


ಈ ಮೂಲಕ ಉದ್ಯಾನನಗರಿ ದರೋಡೆಕೋರರ, ಕೊಲೆಗಾರರ ರಾಜಧಾನಿಯಾಗುತ್ತಿದೆಯೇ ಎಂಬ ಅನುಮಾನ ಮೂಡುತ್ತಿದ್ದು, ಒಂಟಿಯಾಗಿ ಓಡಾಡಡುವರಿಗೆ ಭಯ ಶುರುವಾಗಿದೆ. ಚಿಕ್ಕಪೇಟೆ ಬಳಿ ಇಬ್ಬರು ಅಪರಿಚಿತರು ವ್ಯಕ್ತಿಯೊಬ್ಬನನ್ನು ಚಾಕುವಿನಿಂದ ಬೆದರಿಸಿ ದರೋಡೆ ನಡೆಸಿದ್ದಾರೆ. ಘಟನೆ ಸಾರ್ವಜನಿಕರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ವಿಡಿಯೋವನ್ನು ಐಪಿಎಸ್‌ ಅಧಿಕಾರಿ ಡಿ.ರೂಪಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.


ಈ ಬಗ್ಗೆ ಐಪಿಎಸ್‌ ಅಧಿಕಾರಿ ಡಿ.ರೂಪಾ ಟ್ವೀಟ್‌ ಮಾಡಿದ್ದು, ಬೆಂಗಳೂರು ನಗರ ಪೊಲೀಸರಿಗೆ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಜೊತೆಗೆ ಘಟನೆ ಚಿಕ್ಕಪೇಟೆ ಮೆಟ್ರೋ ಸ್ಟೇಷನ್‌ ಬಳಿ ಮಂಗಳವಾರ ನಡೆದಿರಬಹುದು ಎಂದು ಅವರು ತಿಳಿಸಿದ್ದಾರೆ. ಪಶ್ಚಿಮ ವಲಯದ ಎಸಿಪಿ ಹಾಗೂ ಚಿಕ್ಕಪೇಟೆ ಪೊಲೀಸ್‌ ಠಾಣೆಗೆ ಟ್ಯಾಗ್‌ ಮಾಡಿದ್ದಾರೆ.

ಡಿ.ರೂಪಾ ಅವರ ಟ್ವೀಟ್‌ಗೆ ಹಲವು ನಾಗರಿಕರು ಕಮೆಂಟ್‌ ಮಾಡಿದ್ದು, ಬೆಂಗಳೂರಿನಲ್ಲಿ ಹಾಡಹಗಲಲ್ಲಿಯೇ ಇಂತಹ ಘಟನೆಗಳು ನಡೆಯುತ್ತಿರುವುದಕ್ಕೆ ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನು, ಕೆಲವರು ಕ್ರಿಮಿನಲ್‌ಗಳಿಗೆ ಪೊಲೀಸರನ್ನು ಕಂಡರೆ ಭಯವಿಲ್ಲ. ಕಾನೂನನ್ನು ಕೇವಲ ದುರ್ಬಲರ ಮೇಲೆ ಜಾರಿ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಬಾರ್‌ ಮಾಲೀಕ ಮನೀಶ್‌ ಶೆಟ್ಟಿ ಹಂತಕರ ಬಂಧನ: ಇಬ್ಬರ ಕಾಲಿಗೆ ಗುಂಡು

ಬೆಳಗ್ಗೆಯೇ ಇಂತಹ ಘಟನೆಗಳು ನಡೆದರೆ ಜನ ಓಡಾಡುವುದು ಹೇಗೆ..? ಜನರ ಮುಂದೆ ಇಂತಹ ಘಟನೆಗಳು ನಡೆದರೂ ಯಾರು ತಡೆಯುವ ಕೆಲಸ ಮಾಡುವುದಿಲ್ಲ ಎಂದು ಒಂದಿಷ್ಟು ಜನರು ನಾಗರಿಕರ ವರ್ತನೆಗೆ ಕಿಡಿಕಾರಿದ್ದು, ಆದಷ್ಟು ಬೇಗನೇ ದುಷ್ಕರ್ಮಿಗಳನ್ನು ಬಂಧಿಸುವಂತೆ ಮನವಿ ಮಾಡಿದ್ದಾರೆ.

ಜಡ್ಜ್‌ಗೆ ಬಾಂಬ್‌ ಬೆದರಿಕೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌..! ಪತ್ರದ ಹಿಂದೆ ಕೌಟುಂಬಿಕ ಕಲಹದ ಶಂಕೆ, ಇಬ್ಬರ ವಶ

ಇನ್ನು, ನಗರದ ಹಲವೆಡೆ ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸರು ಅಳವಡಿಸಬೇಕು, ನಿಯಮಿತವಾಗಿ ಗಸ್ತು ತಿರುಗಬೇಕು ಎಂದು ಹೇಳಿದ್ದು, ಕೇವಲ ಚಿಕ್ಕಪೇಟೆ ಮಾತ್ರವಲ್ಲದೇ ಅನೇಕ ಪ್ರದೇಶಗಳಲ್ಲಿ ಸ್ಥಳೀಯ ಪೊಲೀಸರನ್ನು ಭದ್ರತೆಗೆ ನಿಯೋಜಿಸಬೇಕು. ಆಗ ಮಾತ್ರ ಇಂತಹ ಘಟನೆಗಳನ್ನು ತಪ್ಪಿಸಬಹುದು ಎಂದು ಹಲವರು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ