ಆ್ಯಪ್ನಗರ

ಡಿಜೆ ಹಳ್ಳಿ ಗಲಭೆ ಪ್ರಕರಣ: ಬೆಂಬಲಕ್ಕೆ ಬಂದವರ ವಾಹನಗಳನ್ನೂ ಸುಟ್ಟರು !

ಪ್ರಚೋದನಕಾರಿ ಪೋಸ್ಟ್‌ ಹಾಕಿದ್ದ ನವೀನನ ವಿರುದ್ಧ ದೂರು ನೀಡಲು ಠಾಣೆಗೆ ಹೋಗಿದ್ದೆ. ಆಗ ಠಾಣೆಯಲ್ಲಿ ನಿಲ್ಲಿಸಿದ್ದ ನನ್ನ ಬೈಕನ್ನೂ ಸುಡಲಾಗಿದೆ'' ಎಂದು ಗಲಭೆಕೋರರ ವಿರುದ್ಧವೂ ಫಿರ್ದೋಶ್‌ ಪಾಷಾ ದೂರು ದಾಖಲಿಸಿದ್ದಾರೆ. ಕೆ.ಜಿ.ಹಳ್ಳಿ ನಿವಾಸಿ ಆರಿಫ್‌ ಎನ್ನುವವರ ಕಾರು ಕೂಡ ಡಿ.ಜೆ.ಹಳ್ಳಿ ಠಾಣೆ ಎದುರೇ ಸಂಪೂರ್ಣ ಸುಟ್ಟು ಭಸ್ಮವಾಗಿದೆ.

Vijaya Karnataka 18 Aug 2020, 2:58 pm
ಬೆಂಗಳೂರು: ದೂರು ದಾಖಲಿಸಿಕೊಳ್ಳುತ್ತಿಲ್ಲ ಎಂದು ಜನರನ್ನು ಬರಲು ಹೇಳಿದ ಗಲಭೆಕೋರರು, ಬಳಿಕ ಹಾಗೆ ಬಂದವರ ವಾಹನಗಳನ್ನೇ ಸುಟ್ಟು ಹಾಕಿದ್ದಾರೆ. ಮಂಗಳವಾರ ರಾತ್ರಿ ಗಲಭೆಕೋರರು ಅತ್ಯಂತ ವಿವೇಚನಾರಹಿತವಾಗಿ ವರ್ತಿಸಿರುವುದಕ್ಕೆ ಇದು ಮತ್ತೊಂದು ಉದಾಹರಣೆ. ಗಲಭೆ ವೇಳೆ ತಮ್ಮವರ ಕಾರು ಬೈಕ್‌ಗಳಿಗೂ ಪೆಟ್ರೋಲ್‌, ಸೀಮೆಎಣ್ಣೆ ಸುರಿದು ಬೆಂಕಿ ಇಟ್ಟಿದ್ದಾರೆ.
Vijaya Karnataka Web bengaluru-violence


''ಪ್ರಚೋದನಕಾರಿ ಪೋಸ್ಟ್‌ ಹಾಕಿದ್ದ ನವೀನನ ವಿರುದ್ಧ ದೂರು ನೀಡಲು ಠಾಣೆಗೆ ಹೋಗಿದ್ದೆ. ಆಗ ಠಾಣೆಯಲ್ಲಿ ನಿಲ್ಲಿಸಿದ್ದ ನನ್ನ ಬೈಕನ್ನೂ ಸುಡಲಾಗಿದೆ'' ಎಂದು ಗಲಭೆಕೋರರ ವಿರುದ್ಧವೂ ಫಿರ್ದೋಶ್‌ ಪಾಷಾ ದೂರು ದಾಖಲಿಸಿದ್ದಾರೆ. ಕೆ.ಜಿ.ಹಳ್ಳಿ ನಿವಾಸಿ ಆರಿಫ್‌ ಎನ್ನುವವರ ಕಾರು ಕೂಡ ಡಿ.ಜೆ.ಹಳ್ಳಿ ಠಾಣೆ ಎದುರೇ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ದೂರು ಕೊಡಲು ಬಂದವರು ಠಾಣೆ ಆವರಣದಲ್ಲೇ ಬೈಕ್‌ಗಳನ್ನು ನಿಲ್ಲಿಸಿದ್ದರು. ಅವರ ಬೈಕ್‌ಗಳಿಗೂ ಬೆಂಕಿ ಬಿದ್ದಿದೆ ಎನ್ನುತ್ತಾರೆ ಪೊಲೀಸರು.

60ಕ್ಕೂ ಹೆಚ್ಚು ಜನರು ರೌಡಿಪಟ್ಟಿಗೆ
ಡಿ.ಜೆ. ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆ ಸಂಬಂಧ ಬಂಧಿತರಾಗಿರುವ 60ಕ್ಕೂ ಹೆಚ್ಚು ಆರೋಪಿಗಳ ವಿರುದ್ಧ ರೌಡಿ ಪಟ್ಟಿ ತೆರೆಯುವ ಸಾಧ್ಯತೆಗಳಿವೆ. ಮೊದಲ ಪ್ರಕರಣದಲ್ಲೇ ಆರೋಪಿಗಳ ವಿರುದ್ಧ ರೌಡಿ ಪಟ್ಟಿ ತೆರೆಯಲು ಕಾನೂನಿನಲ್ಲಿಅವಕಾಶವಿಲ್ಲ. ಆದರೆ, ಸಮಾಜದಲ್ಲಿ ಶಾಂತಿ ಕದಡಿ, ದಾಂಧಲೆ- ಗಲಭೆ ಸೃಷ್ಟಿಸುವವರ ರೌಡಿ ಪಟ್ಟಿ ತೆರೆಯಲು ಅವಕಾಶವಿದೆ.

ಡಿಜೆ ಹಳ್ಳಿ ಹಿಂಸಾಚಾರ: ಬೆಂಗಳೂರು ನಗರ ಪೊಲೀಸ್ ಆಯುಕ್ತರನ್ನು ಭೇಟಿಯಾದ ಮುಸ್ಲಿಂ ಮುಖಂಡರ ನಿಯೋಗ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ