ಬೆಂಗಳೂರು: ಕ್ಯಾನ್ಸರ್ ಕಾಯಿಲೆ ಸೃಷ್ಟಿಸಿದ ಭೀತಿಯಿಂದ ಆತ್ಮ ಸ್ಥೈರ್ಯ ಕಳೆದುಕೊಂಡ ವ್ಯಕ್ತಿಯೊಬ್ಬರು ಪತ್ನಿ ಹಾಗೂ ಮಗನನ್ನು ಕೊಲೆ ಮಾಡಿ, ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಕೋಣನ ಕುಂಟೆಯಲ್ಲಿ ನಡೆದಿದೆ. ಮಹೇಶ್ ಕುಮಾರ್ (44), ಜ್ಯೋತಿ (29), ನಂದೀಶ್ ಗೌಡ (9) ಆತ್ಮಹತ್ಯೆ ಮಾಡಿಕೊಂಡವರು. ಮಹೇಶ್ ಅವರು ಚುಂಚ ಘಟ್ಟದಲ್ಲಿ ಹಲವು ವರ್ಷಗಳಿಂದ ಸಂಬಂಧಿಕರೊಬ್ಬರ ಬಾಡಿಗೆ ಮನೆಯಲ್ಲಿ ಕುಟುಂಬದ ಜತೆ ವಾಸಿಸುತ್ತಿದ್ದರು. ಗುರುವಾರ ಮಧ್ಯಾಹ್ನ 12 ರಿಂದ 3 ಗಂಟೆ ನಡುವೆ ಈ ಘಟನೆ ನಡೆದಿದ್ದು, ಸಾಯಂಕಾಲ ಘಟನೆ ಬೆಳಕಿಗೆ ಬಂದಿದೆ. ಮನೆಯಲ್ಲಿ ಡೆತ್ನೋಟ್ ಪತ್ತೆಯಾಗಿದ್ದು, ತನಗೆ ಕ್ಯಾನ್ಸರ್ ಕಾಯಿಲೆಯಿದ್ದು ಆಸ್ಪತ್ರೆ ವೆಚ್ಚ ಭರಿಸಲು ಸಾಧ್ಯವಿಲ್ಲ. ಒಬ್ಬನೇ ಸತ್ತರೆ ಹೆಂಡತಿ, ಮಗನನ್ನು ನೋಡಿಕೊಳ್ಳುವವರು ಯಾರು ಎಂಬ ಚಿಂತೆಯಿಂದ ಮೂವರೂ ಸಾಯುವ ನಿರ್ಧಾರ ಕೈಗೊಂಡಿರುವುದಾಗಿ ಬರೆಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವಿಷಪ್ರಾಶನ ಶಂಕೆ?
ಮಹೇಶ್ ಕುಮಾರ್ ಪತ್ನಿ ಜ್ಯೋತಿ ಹಾಗೂ ಮಗನಿಗೆ ವಿಷವುಣಿಸಿ ಕೊಲೆ ಮಾಡಿರುವ ಶಂಕೆಯಿದೆ. ಮೂವರ ಮೃತದೇಹಗಳ ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕವೇ ಸಾವು ಹೇಗೆ ಸಂಭವಿಸಿದೆ ಎಂಬುದು ಸ್ಪಷ್ಟವಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ.
ಕುಸಿದ ಆತ್ಮಸ್ಥೈರ್ಯ: ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಮಹೇಶ್ ಬಿಬಿಎಂಪಿಯ ಬಿಲ್ ಕಲೆಕ್ಟರ್ ಒಬ್ಬರ ಬಳಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಪತ್ನಿ ಜ್ಯೋತಿ ಗೃಹಿಣಿಯಾಗಿದ್ದರು. ಮಗ ನಂದೀಶ್ ಪ್ರತಿಷ್ಠಿತ ಶಾಲೆಯಲ್ಲಿ 2ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಕಳೆದ ಒಂದು ತಿಂಗಳಿನಿಂದ ಮಹೇಶ್ ಹೊಟ್ಟೆ ನೋವು ಸೇರಿದಂತೆ ಅನಾರೋಗ್ಯದಿಂದ ಬಳಲುತ್ತಿದ್ದರು. ವೈದ್ಯರ ತಪಾಸಣೆ ಬಳಿಕ ಕ್ಯಾನ್ಸರ್ ಇರುವುದು ಗೊತ್ತಾಗಿತ್ತು. ಕ್ಯಾನ್ಸರ್ ಚಿಕಿತ್ಸೆಗೆ ಹಣ ಹೊಂದಿಸುವುದು ಕಷ್ಟ ಎಂದು ಅರಿತ ಮಹೇಶ್ಗೆ ಜಂಘಾಬಲವೇ ಉಡುಗಿ ಹೋಗಿತ್ತು. ಭವಿಷ್ಯದ ಚಿಂತೆ ಕಾಡಿದ ಕಾರಣ ಸಾಮೂಹಿಕವಾಗಿ ಸಾಯುವ ನಿರ್ಧಾರ ಮಾಡಿರುವ ಸಾಧ್ಯತೆಯಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಶಾಲೆಗೆ ಹೋಗಿದ್ದ ಮಗ: ಗುರುವಾರ ಮಗ ನಂದೀಶ್ ಎಂದಿನಂತೆ ಶಾಲೆಗೆ ಹೋಗಿದ್ದ. 11 ಗಂಟೆ ಸುಮಾರಿಗೆ ಶಾಲೆಯ ಬಳಿ ತೆರಳಿದ್ದ ಮಹೇಶ್ ಮಗನನ್ನು ಶಾಲೆಯಿಂದ ಕರೆ ತಂದಿದ್ದಾರೆ. ಬಳಿಕ ಪತ್ನಿ ಹಾಗೂ ಮಗನನ್ನು ನೇಣು ಬಿಗಿದು ಕೊಂದು ಅವರೂ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯಿದೆ ಎಂದು ಅಧಿಕಾರಿ ಹೇಳಿದರು.
ಬಯಲಿಗೆ ಬಂದಿದ್ದು ಹೇಗೆ?
ಮಹೇಶ್ ಹಾಗೂ ಜ್ಯೋತಿಗೆ ಅವರ ಸಂಬಂಧಿಕರು ಗುರುವಾರ ಹಲವು ಬಾರಿ ಕರೆ ಮಾಡಿದ್ದರೂ ಸ್ವೀಕರಿಸಿರಲಿಲ್ಲ. ಹೀಗಾಗಿ, ಮನೆಯ ಮಾಲೀಕರಿಗೆ ವಿಚಾರ ತಿಳಿಸಿದಾಗ ಅವರು ಮನೆಯ ಬಳಿ ಹೋದಾಗ ಒಳಗಡೆಯಿಂದ ಲಾಕ್ ಆಗಿತ್ತು. ಕಿಟಕಿ ಮೂಲಕ ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಮಹೇಶ್ ಮೃತ ದೇಹ ಕಂಡು ಬಂದಿದೆ. ಈ ದೃಶ್ಯ ಕಂಡ ಅವರು ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಪೊಲೀಸರು ತೆರಳಿ ನೋಡಿದಾಗ ಮೂವರ ಮೃತದೇಹಗಳು ಕಂಡು ಬಂದಿವೆ ಎಂದು ಅಧಿಕಾರಿ ವಿವರಿಸಿದರು.
ಕುಟುಂಬಸ್ಥರಿಗೆ ಮಾಹಿತಿ
ಮಹೇಶ್ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ. ಅವರು ಬಂದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಲಾಗುವುದು. ಬಳಿಕ ಅವರು ನೀಡುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತದೆ ಎಂದು ಕೋಣನಕುಂಟೆ ಠಾಣೆ ಪೊಲೀಸರು ತಿಳಿಸಿದ್ದಾರೆ.
ವಿಷಪ್ರಾಶನ ಶಂಕೆ?
ಮಹೇಶ್ ಕುಮಾರ್ ಪತ್ನಿ ಜ್ಯೋತಿ ಹಾಗೂ ಮಗನಿಗೆ ವಿಷವುಣಿಸಿ ಕೊಲೆ ಮಾಡಿರುವ ಶಂಕೆಯಿದೆ. ಮೂವರ ಮೃತದೇಹಗಳ ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕವೇ ಸಾವು ಹೇಗೆ ಸಂಭವಿಸಿದೆ ಎಂಬುದು ಸ್ಪಷ್ಟವಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ.
ಕುಸಿದ ಆತ್ಮಸ್ಥೈರ್ಯ: ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಮಹೇಶ್ ಬಿಬಿಎಂಪಿಯ ಬಿಲ್ ಕಲೆಕ್ಟರ್ ಒಬ್ಬರ ಬಳಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಪತ್ನಿ ಜ್ಯೋತಿ ಗೃಹಿಣಿಯಾಗಿದ್ದರು. ಮಗ ನಂದೀಶ್ ಪ್ರತಿಷ್ಠಿತ ಶಾಲೆಯಲ್ಲಿ 2ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಕಳೆದ ಒಂದು ತಿಂಗಳಿನಿಂದ ಮಹೇಶ್ ಹೊಟ್ಟೆ ನೋವು ಸೇರಿದಂತೆ ಅನಾರೋಗ್ಯದಿಂದ ಬಳಲುತ್ತಿದ್ದರು. ವೈದ್ಯರ ತಪಾಸಣೆ ಬಳಿಕ ಕ್ಯಾನ್ಸರ್ ಇರುವುದು ಗೊತ್ತಾಗಿತ್ತು. ಕ್ಯಾನ್ಸರ್ ಚಿಕಿತ್ಸೆಗೆ ಹಣ ಹೊಂದಿಸುವುದು ಕಷ್ಟ ಎಂದು ಅರಿತ ಮಹೇಶ್ಗೆ ಜಂಘಾಬಲವೇ ಉಡುಗಿ ಹೋಗಿತ್ತು. ಭವಿಷ್ಯದ ಚಿಂತೆ ಕಾಡಿದ ಕಾರಣ ಸಾಮೂಹಿಕವಾಗಿ ಸಾಯುವ ನಿರ್ಧಾರ ಮಾಡಿರುವ ಸಾಧ್ಯತೆಯಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಶಾಲೆಗೆ ಹೋಗಿದ್ದ ಮಗ: ಗುರುವಾರ ಮಗ ನಂದೀಶ್ ಎಂದಿನಂತೆ ಶಾಲೆಗೆ ಹೋಗಿದ್ದ. 11 ಗಂಟೆ ಸುಮಾರಿಗೆ ಶಾಲೆಯ ಬಳಿ ತೆರಳಿದ್ದ ಮಹೇಶ್ ಮಗನನ್ನು ಶಾಲೆಯಿಂದ ಕರೆ ತಂದಿದ್ದಾರೆ. ಬಳಿಕ ಪತ್ನಿ ಹಾಗೂ ಮಗನನ್ನು ನೇಣು ಬಿಗಿದು ಕೊಂದು ಅವರೂ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯಿದೆ ಎಂದು ಅಧಿಕಾರಿ ಹೇಳಿದರು.
ಬಯಲಿಗೆ ಬಂದಿದ್ದು ಹೇಗೆ?
ಮಹೇಶ್ ಹಾಗೂ ಜ್ಯೋತಿಗೆ ಅವರ ಸಂಬಂಧಿಕರು ಗುರುವಾರ ಹಲವು ಬಾರಿ ಕರೆ ಮಾಡಿದ್ದರೂ ಸ್ವೀಕರಿಸಿರಲಿಲ್ಲ. ಹೀಗಾಗಿ, ಮನೆಯ ಮಾಲೀಕರಿಗೆ ವಿಚಾರ ತಿಳಿಸಿದಾಗ ಅವರು ಮನೆಯ ಬಳಿ ಹೋದಾಗ ಒಳಗಡೆಯಿಂದ ಲಾಕ್ ಆಗಿತ್ತು. ಕಿಟಕಿ ಮೂಲಕ ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಮಹೇಶ್ ಮೃತ ದೇಹ ಕಂಡು ಬಂದಿದೆ. ಈ ದೃಶ್ಯ ಕಂಡ ಅವರು ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಪೊಲೀಸರು ತೆರಳಿ ನೋಡಿದಾಗ ಮೂವರ ಮೃತದೇಹಗಳು ಕಂಡು ಬಂದಿವೆ ಎಂದು ಅಧಿಕಾರಿ ವಿವರಿಸಿದರು.
ಕುಟುಂಬಸ್ಥರಿಗೆ ಮಾಹಿತಿ
ಮಹೇಶ್ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ. ಅವರು ಬಂದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಲಾಗುವುದು. ಬಳಿಕ ಅವರು ನೀಡುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತದೆ ಎಂದು ಕೋಣನಕುಂಟೆ ಠಾಣೆ ಪೊಲೀಸರು ತಿಳಿಸಿದ್ದಾರೆ.