ಆ್ಯಪ್ನಗರ

ಮತ್ತೆ ಬಣ್ಣ ಹಚ್ಚುವೆ : ಉಮಾಶ್ರೀ

ಮುಂದಿನ ದಿನಗಳಲ್ಲಿ ನಾನು ಮತ್ತೆ ಬಣ್ಣ ಹಚ್ಚಿ ನಟನೆಗೆ ಬರುತ್ತೇನೆ ಎಂದು ಮಾಜಿ ಸಚಿವೆ ಉಮಾಶ್ರೀ ನುಡಿದರು.

Virtual Tourist 11 Dec 2018, 5:00 am
ಬೆಂಗಳೂರು: ಮುಂದಿನ ದಿನಗಳಲ್ಲಿ ನಾನು ಮತ್ತೆ ಬಣ್ಣ ಹಚ್ಚಿ ನಟನೆಗೆ ಬರುತ್ತೇನೆ ಎಂದು ಮಾಜಿ ಸಚಿವೆ ಉಮಾಶ್ರೀ ನುಡಿದರು.
Vijaya Karnataka Web uma_wn


'ನಾಟಕ ಬೆಂಗ್ಳೂರು' ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿರುವ 11ನೇ ವರ್ಷದ ರಂಗೋತ್ಸವಕ್ಕೆ ತಮಟೆ ಬಾರಿಸುವ ಮೂಲಕ ಚಾಲನೆ ನೀಡಿ ಸೋಮವಾರ ಅವರು ಮಾತನಾಡಿದರು.

''ಈ ಹಿಂದೆ ರಂಗಭೂಮಿ, ಚಲನಚಿತ್ರಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಕನ್ನಡಿಗರ ಮನೆಮಾತಾಗಿದ್ದೆ. ನಂತರ ರಾಜಕೀಯದಲ್ಲಿ ಅವಕಾಶ ಸಿಕ್ಕಿತು. ಆ ದಿನಗಳಲ್ಲಿ ನನ್ನ ನಟನೆಗೆ ಒತ್ತು ನೀಡಲಾಗಲಿಲ್ಲ. ನಟನೆ ನನಗೆ ಬದುಕು ಮತ್ತು ಅನ್ನ ಕೊಟ್ಟ ವೃತ್ತಿ. ಅದನ್ನು ಮತ್ತೆ ಮುಂದುವರಿಸುತ್ತೇನೆ,''ಎಂದರು.

ಇತ್ತೀಚೆಗಷ್ಟೇ ನಿವೃತ್ತಿ ಹೊಂದಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್‌.ಆರ್‌. ವಿಶುಕುಮಾರ್‌ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ರಂಗ ಕಲಾವಿದ ಬಿ.ವಿ. ರಾಜಾರಾಂ, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಜೆ. ಲೋಕೇಶ್‌, ರಂಗಕರ್ಮಿ ಕೆ.ವಿ. ನಾಗರಾಜ ಮೂರ್ತಿ, ರಂಗ ನಿರ್ದೇಶಕ ಶಶಿಧರ ಭಾರಿಘಾಟ್‌ ಮತ್ತಿತರರು ಉಪಸ್ಥಿತರಿದ್ದರು.

ಉದ್ಘಾಟನೆ ನಂತರ ವಿಶ್ವಪಥ ಕಲಾಸಂಗಮ ತಂಡವು ಹನುಮಂತ ಹಾಲಗೇರಿ ರಚನೆಯ 'ಊರು ಸುಟ್ಟರೂ ಹನುಮಪ್ಪ ಹೊರಗ' ನಾಟಕ ಪ್ರದರ್ಶನ ನಡೆಯಿತು. ರಂಗೋತ್ಸವವು ಡಿ.26ರವರೆಗೆ ನಡೆಯಲಿದ್ದು, ಪ್ರತಿದಿನ ಸಂಜೆ 7 ಗಂಟೆಗೆ ನಾಟಕಗಳು ಪ್ರದರ್ಶನಗೊಳ್ಳಲಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ