ಆ್ಯಪ್ನಗರ

ಷರತ್ತು ಪಾಲಿಸದಿದ್ರೆ ಮೆಟ್ರೋ ಕಾಮಗಾರಿ ಸ್ಥಗಿತಕ್ಕೆ ಹಿಂಜರಿಯುವುದಿಲ್ಲ: ಹೈಕೋರ್ಟ್‌ ಎಚ್ಚರಿಕೆ

ಬೆಂಗಳೂರು ನಮ್ಮ ಮೆಟ್ರೋ ರೈಲು ಯೋಜನೆಯ 1 ಮತ್ತು 2ನೇ ಹಂತದ ಪೂರ್ವ ಷರತ್ತುಗಳನ್ನು ಪಾಲಿಸದೇ ಇದ್ದರೆ 2ನೇ ಹಂತದ ಕಾಮಗಾರಿ ಸ್ಥಗಿತಕ್ಕೆ ಹಿಂಜರಿಯುವುದಿಲ್ಲ ಎಂದು ಹೈಕೋರ್ಟ್‌ ಎಚ್ಚರಿಕೆ ನೀಡಿದೆ.

Vijaya Karnataka Web 14 Feb 2020, 11:26 am
ಬೆಂಗಳೂರು: ಮೆಟ್ರೋ ರೈಲು ಯೋಜನೆಯ 1 ಮತ್ತು 2ನೇ ಹಂತದ ಅನುಮೋದನೆಯ ಪೂರ್ವ ಷರತ್ತುಗಳನ್ನು ಪಾಲಿಸದೇ ಇದ್ದರೆ ಎರಡನೇ ಹಂತದ ಕಾಮಗಾರಿಗಳನ್ನು ಸ್ಥಗಿತಗೊಳಿಸಲು ಹಿಂಜರಿಯುವುದಿಲ್ಲ ಎಂದು ಹೈಕೋರ್ಟ್‌, ಬಿಎಂಆರ್‌ಸಿಎಲ್‌ಗೆ ಗುರುವಾರ ಎಚ್ಚರಿಕೆ ನೀಡಿದೆ.
Vijaya Karnataka Web namma metro construction


ದೊಮ್ಮಲೂರಿನ ಡಿ.ಟಿ. ದೆವರೆ ಹಾಗೂ ಬೆಂಗಳೂರು ಎನ್ವಿರಾನ್‌ಮೆಂಟ್‌ ಟ್ರಸ್ಟ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ್‌ ಹಾಗೂ ನ್ಯಾ.ಹೇಮಂತ್‌ ಚಂದನ ಗೌಡರ್‌ ಅವರಿದ್ದ ವಿಭಾಗೀಯಪೀಠದ ಮುಂದೆ ವಿಚಾರಣೆಗೆ ಬಂದಿತು.

ಕೆಲ ಕಾಲ ವಿಚಾರಣೆ ನಂತರ, ಬಿಎಂಆರ್‌ಸಿಎಲ್‌ ಪೂರ್ವ ಷರತ್ತುಗಳನ್ನು ಪಾಲಿಸಿದೆಯೇ ಇಲ್ಲವೇ ಎಂಬ ಬಗ್ಗೆ ಪರಿಶೀಲನೆ ನಡೆಸಿ ಮಾ.20ರೊಳಗೆ ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸಬೇಕು ಎಂದು ಕೇಂದ್ರ ಸರಕಾರಕ್ಕೆ ಆದೇಶ ನೀಡಿತು.

ಮೆಟ್ರೊ ಸುರಂಗ ಕಾಮಗಾರಿಗೂ ತಟ್ಟಿದ ಕೊರೊನಾ ವೈರಸ್‌, ಕಾಮಗಾರಿ ತಡ

ಅಲ್ಲದೆ, ಒಂದು ವೇಳೆ ಕೇಂದ್ರ ಸರಕಾರ ನೀಡಿದ ವರದಿಯಲ್ಲಿ ಷರತ್ತುಗಳನ್ನು ಪಾಲನೆ ಮಾಡಿಲ್ಲಎಂದಾದರೆ ನ್ಯಾಯಾಲಯ ಪ್ರಸ್ತುತ ನಡೆಯುತ್ತಿರುವ ಎರಡನೇ ಹಂತದ ಮೆಟ್ರೋ ಕಾಮಗಾರಿಗಳನ್ನು ಸ್ಥಗಿತಗೊಳಿಸಲೂ ಸಹ ಹಿಂಜರಿಯುವುದಿಲ್ಲಎಂದು ಮೌಖಿಕವಾಗಿ ಎಚ್ಚರಿಸಿತು.

"ನಮ್ಮ ಮೆಟ್ರೊ" 40 ನಿಲ್ದಾಣಗಳಲ್ಲಿ ಎನ್‌ಸಿಎಂಸಿ ಜಾರಿ, ಕ್ಯೂ ಆರ್‌ ಕೋಡ್‌ ತಂತ್ರಜ್ಞಾನವೂ ಲಭ್ಯ

'' ಬಿಎಂಆರ್‌ಪಿ 1 ಮತ್ತು 2ನೇ ಹಂತಕ್ಕೆ ಅನುಮೋದನೆ ನೀಡುವಾಗ ಕೇಂದ್ರ ಸರಕಾರ ಹಲವು ಷರತ್ತುಗಳನ್ನು ವಿಧಿಸಿತ್ತು.ಅವುಗಳನ್ನು ಪಾಲಿಸುವುದು ಬಿಎಂಆರ್‌ಸಿಲ್‌ ಮತ್ತು ಸಕಾರದ ಕರ್ತವ್ಯ.ಅದನ್ನು ಪಾಲನೆ ಮಾಡಲೇಬೇಕು, ಅದರಲ್ಲಿರಾಜೀ ಪ್ರಶ್ನೆಯೇ ಇಲ್ಲ'' ಎಂದು ನ್ಯಾಯಪೀಠ ಹೇಳಿತು.

ಬಿಎಂಟಿಸಿ-ಮೆಟ್ರೊ ಜಂಟಿ ಯೋಜನೆ: ಮೊಬಿಲಿಟಿ ಕಾರ್ಡ್‌ ಬಳಕೆಗೆ ಬೈಯ್ಯಪ್ಪನಹಳ್ಳಿ ನಿಲ್ದಾಣ ರೆಡಿ

ಅರ್ಜಿದಾರರ ಪರ ವಕೀಲರು, ''ಬಿಎಂಆರ್‌ಪಿ 1 ಮತ್ತು 2ನೇ ಹಂತಕ್ಕೆ ಅನುಮೋದನೆ ನೀಡುವಾಗ ಸಮಗ್ರ ಸಂಚಾರ ಅನುಪಾತ ತರ್ಕಬದ್ಧಗೊಳಿಸುವಿಕೆ ಯೋಜನೆ (ಐಟಿಆರ್‌ಆರ್‌ಪಿ) ಹಾಗೂ ಸಮಗ್ರ ಚಲನಶೀಲತೆ ಯೋಜನೆ (ಸಿಎಂಪಿ) ಅನುಷ್ಠಾನಕ್ಕೆ ತರುವುದು ಕಡ್ಡಾಯ ಎಂದು ಷರತ್ತು ವಿಧಿಸಲಾಗಿತ್ತು. ಆದರೆ ಮೆಟ್ರೊ ರೈಲು ನಿಗಮ, ಐಟಿಆರ್‌ಆರ್‌ಪಿ ಮತ್ತು ಸಿಎಂಪಿ ಸಿದ್ಧಪಡಿಸಿ ಅದನ್ನು ಅನುಷ್ಠಾನಗೊಳಿಸಿಲ್ಲ'' ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಬಿಎಂಟಿಸಿಯಲ್ಲಿ ಹಿಂದಿಗೆ ವಿರೋಧ, ಟ್ವಿಟರ್‌ನಲ್ಲಿ ನಮ್ಮ ಬಿಎಂಟಿಸಿ ಹಿಂದಿ ಬೇಡ ಟಾಪ್‌ ಟ್ರೆಂಡಿಂಗ್

''ರಾಜ್ಯ ಸರಕಾರ ಮತ್ತು ಬಿಎಂಆರ್‌ಸಿಎಲ್‌ ಸಂಪೂರ್ಣ ವಿಫಲವಾಗಿದೆ. ಅನುಮೋದನೆ ಮತ್ತು ಒಡಂಬಡಿಕೆಯ ಷರತ್ತುಗಳನ್ನು ಉಲ್ಲಂಘಿಘಿಸಲಾಗಿದೆ. ಇದರಿಂದಾಗಿ ಯೋಜನೆಯ ಅನುಷ್ಠಾನದಲ್ಲಿಗಂಭೀರವಾದ ಲೋಪಗಳಾಗಿದ್ದು, ವ್ಯತಿರಿಕ್ತ ಪರಿಣಾಮ ಎದುರಿಸಬೇಕಾಗುತ್ತದೆ'' ಎಂದು ಹೇಳಿದರು.

ಮೆಟ್ರೋ 1ಹಂತದ ಡಿಪಿಆರ್‌ ಪ್ರಕಾರ 2007ರಲ್ಲಿ8.2 ಲಕ್ಷ, 2011ರಲ್ಲಿ10.2 ಲಕ್ಷ ಮತ್ತು 2021ರ ವೇಳೆಗೆ 16.1 ಲಕ್ಷ ನಿರೀಕ್ಷಿತ ಪ್ರಯಾಣಿಕರನ್ನು ಅಂದಾಜಿಸಲಾಗಿತ್ತು. ಆದರೆ, ಐಟಿಆರ್‌ಆರ್‌ಪಿ ಮತ್ತು ಸಿಎಂಪಿ ಅನುಷ್ಠಾನಗೊಳಿಸದ ಕಾರಣ ಈ ಅಂದಾಜು ವಿಫಲಗೊಂಡಿದೆ. 2019ರ ಜನವರಿಯ ಮಾಹಿತಿ ಪ್ರಕಾರ ನಿರೀಕ್ಷಿತ ಪ್ರಯಾಣಿಕರ ಸಂಖ್ಯೆ 4 ಲಕ್ಷ ಇದೆ. 2ನೇ ಹಂತದ ಕಾಮಗಾರಿ ಸಹ ನಿಗದಿತ ಅವಧಿಯೊಳಗೆ ಪೂರ್ಣಗೊಳ್ಳುವ ಸಾಧ್ಯತೆ ತೀರಾ ಕಡಿಮೆ ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ