ಆ್ಯಪ್ನಗರ

BBMP: ಗುಂಡಿ ಮುಚ್ಚದಿದ್ದರೆ ಬಿಬಿಎಂಪಿಯನ್ನೇ ಮುಚ್ಚುತ್ತೇವೆ - ಹೈಕೋರ್ಟ್ ಎಚ್ಚರಿಕೆ

ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚುವ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಇಂದು ನಡೆದ ಪಿಐಎಲ್ ವಿಚಾರಣೆಯಲ್ಲಿ ಉತ್ತರಿಸಿದ ಬಿಬಿಎಂಪಿ, ಕಳೆದ 15 ದಿನಗಳಿಂದ ರಸ್ತೆಗುಂಡಿ ಮುಚ್ಚಿಲ್ಲ, 43 ಪ್ರದೇಶಗಳ ಪೈಕಿ 16 ಕಡೆ ಮುಚ್ಚಿದ್ದೇವೆಂದು ಹೇಳಿದೆ.

Vijaya Karnataka Web 24 Oct 2018, 10:29 am
ಬೆಂಗಳೂರು: ಬಿಬಿಎಂಪಿ ಕೆಲಸ ಮಾಡದಿದ್ದರೆ ಬೆಂಗಳೂರು ಸ್ಥಗಿತವಾಗುವುದಿಲ್ಲ. ಬದಲಿಗೆ ಬಿಬಿಎಂಪಿಯನ್ನೇ ಮುಚ್ಚಿಸಲಾಗುವುದೆಂದು ಹೈಕೋರ್ಟ್ ಖಡಕ್ ಆಗಿ ಎಚ್ಚರಿಕೆ ನೀಡಿದೆ.
Vijaya Karnataka Web BBMP


ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚುವ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಇಂದು ನಡೆದ ಪಿಐಎಲ್ ವಿಚಾರಣೆಯಲ್ಲಿ ಉತ್ತರಿಸಿದ ಬಿಬಿಎಂಪಿ, ಕಳೆದ 15 ದಿನಗಳಿಂದ ರಸ್ತೆಗುಂಡಿ ಮುಚ್ಚಿಲ್ಲ, 43 ಪ್ರದೇಶಗಳ ಪೈಕಿ 16 ಕಡೆ ಮುಚ್ಚಿದ್ದೇವೆಂದು ಹೇಳಿದೆ.

ಈ ಉತ್ತರಕ್ಕೆ ಕೆಂಡಾಮಂಡಲವಾದ ನ್ಯಾಯಾಧೀಶರ ಪೀಠ, ನೀವು ಗುಂಡಿ ಮುಚ್ಚದಿದ್ದರೆ ನಿಮ್ಮದೇ ವೈಫಲ್ಯ ಎಂದು ಪರಿಗಣಿಸಲ್ಪಡುತ್ತದೆ. ನಿಮ್ಮಿಂದಾಗದಿದ್ದರೆ ಈ ಕಾರ್ಯ ವನ್ನು ಬೇರೆ ಏಜೆನ್ಸಿಗೆ ನೀಡುತ್ತೇವೆ ಎಂದು ಎಚ್ಚರಿಕೆ ನೀಡಿತು. ಅಷ್ಟೇ ಅಲ್ಲ ನಿಷ್ಪ್ರಯೋಜಕವೆಂದು ಸಾಬೀತು ಮಾಡುತಿದ್ದೀರಾ. ನಿಮ್ಮ ಅಧಿಕಾರಿಗಳಿಗೇ ಎಷ್ಟು ಕೆಲಸವಾಗಿದೆ ಎಂಬ ಬಗ್ಗೆ ಕೂಡ ತಿಳಿದಿರುವುದಿಲ್ಲ. 43 ಪ್ರದೇಶಗಳ ರಸ್ತೆಗುಂಡಿಗಳನ್ನು ಇವತ್ತೇ ಮುಚ್ಚಬೇಕು. ಬಿಡಬ್ಲುಎಸ್ ಎಸ್ ಬಿ ಯೋ, ಬಿಬಿಎಂಪಿ ತಪ್ಪೋ ಗೊತ್ತಿಲ್ಲ. ಇಂದು ಮಧ್ಯಾಹ್ನ 1.30 ರೊಳಗೆ 43 ಕಡೆಯ ರಸ್ತೆ ಗುಂಡಿ ಮುಚ್ಚಬೇಕು ಎಂದ ಕೋರ್ಟ್ ವಿಚಾರಣೆಯನ್ನು ಮಧ್ಯಾಹ್ನ 1.30 ಕ್ಕೆ ಮುಂದೂಡಿದೆ.

ರಸ್ತೆಗುಂಡಿಗಳಿಗೆ ನಾವು ಹೊಣೆಯಲ್ಲವೆಂದು ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿ (. ಬಿಡಬ್ಲುಎಸ್ಎಸ್‌ಬಿ) ವಾದಿಸಿತು.

ನಗರದ ರಸ್ತೆ ಗುಂಡಿಗಳನ್ನು ಮುಚ್ಚಲು ಹೈಕೋರ್ಟ್‌ ನೀಡಿದ್ದ ಗಡುವು ಮಂಗಳವಾರಕ್ಕೆ (ಇಂದು) ಮುಗಿದಿದೆ. ಆದಾಗ್ಯೂ, ಬಹುತೇಕ ಕಡೆ ವಾಹನ ಸವಾರರ ಬಲಿಗಾಗಿ ಹೊಂಡ-ಗುಂಡಿಗಳು ಬಾಯ್ತೆರೆದು ಕುಳಿತಿದ್ದು, ಪಾಲಿಕೆ ಅಧಿಕಾರಿಗಳು ಕೈಚೆಲ್ಲಿ ಕುಳಿತಿದ್ದಾರೆ.

ನ್ಯಾಯಾಲಯವು ತರಾಟೆ ತೆಗೆದುಕೊಂಡ ಕೂಡಲೇ ಬಿಬಿಎಂಪಿಯು ನಗರದೆಲ್ಲೆಡೆ ಸಮರೋಪಾದಿಯಲ್ಲಿ ಗುಂಡಿ ಮುಚ್ಚುವ ಕಾಮಗಾರಿಯನ್ನು ಕೈಗೊಂಡಿತು. ಸತತವಾಗಿ ಮಳೆ ಸುರಿಯುತ್ತಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯ ಕೂಡ ಮೂರು ಬಾರಿ ಗಡುವು ವಿಸ್ತರಿಸಿ ಉದಾರತೆ ತೋರಿಸಿತು. ದಸರಾ ರಜೆ ಅವಧಿಯಲ್ಲಿ ನಗರದಲ್ಲಿ ವಾಹನಗಳ ದಟ್ಟಣೆ ಕಡಿಮೆ ಇರುತ್ತದೆ. ಈ ಅವಧಿಯಲ್ಲಿ ತ್ವರಿತವಾಗಿ ಗುಂಡಿ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಆದೇಶಿಸಿತ್ತು.

ಹೈಕೋರ್ಟ್‌ ನೀಡಿದ್ದ ಕಾಲಮಿತಿ ಮುಗಿದಿದೆ. ಈ ವಿಚಾರ ಇಂದು ವಿಚಾರಣೆಗೆ ಬಂದಿದೆ. ಆದರೆ, ಬಹುತೇಕ ರಸ್ತೆಗಳು ಗುಂಡಿ ಮುಕ್ತವಾಗಿಲ್ಲ. ಹೈಕೋರ್ಟ್‌, ಬಿಬಿಎಂಪಿ ಮತ್ತು ರಾಜ್ಯದ ಶಕ್ತಿಸೌಧಕ್ಕೆ ಕೂಗಳತೆ ದೂರದಲ್ಲಿರುವ ಪ್ರದೇಶಗಳಲ್ಲಿನ ರಸ್ತೆಗಳಲ್ಲೇ ಗುಂಡಿಗಳನ್ನು ಮುಚ್ಚುವ ಕೆಲಸ ಆಗಿಲ್ಲ. ಈಗಾಗಲೇ ಮುಚ್ಚಿರುವ ಗುಂಡಿಗಳು ಸಹ ಮತ್ತೆ ಬಾಯ್ತೆರೆದುಕೊಂಡಿವೆ. ಕಳಪೆ ಕಾಮಗಾರಿಯಿಂದ ಡಾಂಬರು ಕಿತ್ತು ಬಂದು ಗುಂಡಿಗಳು ನಿರ್ಮಾಣವಾಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ