ಬೆಂಗಳೂರು: ಕೋವಿಡ್ನಿಂದ ಪೋಷಕರು ಆಸ್ಪತ್ರೆ ಸೇರುವುದರಿಂದ ಮತ್ತು ಜೀವ ಕಳೆದುಕೊಳ್ಳುವುದರಿಂದ ಮಕ್ಕಳು ಅನಾಥರಾಗುತ್ತಿರುವ ಬಗ್ಗೆ ಮಕ್ಕಳ ಸಹಾಯವಾಣಿಗೆ ಹೆಚ್ಚಿನ ಕರೆಗಳು ಬರುತ್ತಿರುವುದು ಕೆಲವು ದಿನಗಳ ಹಿಂದೆ ವರದಿಯಾಗಿತ್ತು. ಆದರೆ ಈ ಪರಿಸ್ಥಿತಿ ಅಕ್ರಮ ಚಟುವಟಿಕೆಗಳಿಗೆ ಕಾರಣವಾಗುತ್ತಿದೆ ಎನ್ನುವುದು ಬಹಿರಂಗವಾಗಿದೆ. ಕೋವಿಡ್ನಿಂದ ತಂದೆ ತಾಯಿಯನ್ನು ಕಳೆದುಕೊಂಡು ಅನಾಥರಾದ ಮಕ್ಕಳನ್ನು ದತ್ತು ತೆಗೆದುಕೊಳ್ಳುವ, ಅವರ ಆರೈಕೆ ಮಾಡಲು ಜನರು ಬಯಕೆ ಹೊಂದಿರುವುದರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ಗಳು ಹರಿದಾಡುತ್ತಿವೆ. ಆದರೆ ಅಂತಹ ಪೋಸ್ಟ್ಗಳ ಜಾಲಕ್ಕೆ ಬೀಳದಂತೆ ಜನರಿಗೆ ಮಕ್ಕಳ ಹಕ್ಕುಗಳ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.
ಸಾಂಕ್ರಾಮಿದ ನಡುವೆ ಪೋಷಕರು ಹಾಗೂ ಆರೈಕೆದಾರರನ್ನು ಕಳೆದುಕೊಂಡ ಮಕ್ಕಳಿಗೆ ಸೂಕ್ತ ಸೌಲಭ್ಯಗಳನ್ನು ಒದಗಿಸುವ ಸಲುವಾಗಿ ರಾಜ್ಯ ಸರ್ಕಾರ ಮೇ 3ರಂದು ಐಎಎಸ್ ಅಧಿಕಾರಿ ಕೆಪಿ ಮೋಹನ್ ರಾಜ್ ಅವರನ್ನು ನೋಡಲ್ ಅಧಿಕಾರಿಯನ್ಆಗಿ ನೇಮಿಸಿದೆ.
'ಕೋವಿಡ್-ಅನಾಥ ಮಕ್ಕಳ ಜೀವಕ್ಕೆ ಅಂತಹ ಸಂದೇಶಗಳು ಬೆದರಿಕೆಯಾಗಿ ಪರಿಣಮಿಸುತ್ತಿವೆ. ಸರ್ಕಾರದ ಮಾಧ್ಯಮಗಳ ಮೂಲಕ ನಡೆಯದಿರುವ ಮಕ್ಕಳ ಯಾವುದೇ ರೀತಿಯ ದತ್ತ ತೆಗೆದುಕೊಳ್ಳುವಿಕೆ ಅಕ್ರಮವಾಗುತ್ತದೆ. ಮಕ್ಕಳ ಭವಿಷ್ಯದ ಕುರಿತಾದ ಭಾವನಾತ್ಮಕ ಸಂದೇಶಗಳು ಹಾಗೂ ಅನುಕಂಪಗಳು ಈ ಜಾಲದಲ್ಲಿ ಸಿಲುಕಿಸುತ್ತವೆ' ಎಂದು ಕಾರ್ಯಕರ್ತರೊಬ್ಬರು ಎಚ್ಚರಿಕೆ ನೀಡಿದ್ದಾರೆ.
ಮಗುವೊಂದನ್ನು ನೇರವಾಗಿ ದತ್ತು ತೆಗೆದುಕೊಳ್ಳುವುದು ಅಕ್ರಮ ಹಾಗೂ ಶಿಕ್ಷಾರ್ಹ ಅಪರಾಧ. ಕೇಂದ್ರ ದತ್ತು ಸಂಪನ್ಮೂಲ ಸಂಸ್ಥೆಯ ಮೂಲಕ ಮಾತ್ರವೇ ದತ್ತು ತೆಗೆದುಕೊಳ್ಳಲು ಅವಕಾಶವಿದೆ.
'ಈಗ ಅಕ್ರಮ ದತ್ತು ಚಟುವಟಿಕೆಯ ಭೀತಿ ಉಂಟಾಗಿದೆ. ಈ ಮಕ್ಕಳಿಗೆ ಆರೈಕೆ ಹಾಗೂ ರಕ್ಷಣೆಯ ಅಗತ್ಯವಿದೆ. ಅವರ ಕುಟುಂಬದೊಂದಿಗಿನ ಯಾವುದೇ ಸಂಬಂಧವನ್ನು ನಾವು ತುಂಡರಿಸಬಾರದು. ಇದು ಬಿಕ್ಕಟ್ಟಿನ ಸನ್ನಿವೇಶ. ಇಲ್ಲಿ ನಾವು ಎರಡು ಗುಂಪುಗಳ ಮಕ್ಕಳನ್ನು ನೋಡುತ್ತೇವೆ. ಸೋಂಕಿತರು ಹಾಗೂ ಪರಿಣಾಮಕ್ಕೆ ತುತ್ತಾದ ಮತ್ತು ತಾತ್ಕಾಲಿಕ ಬೆಂಬಲದ ಅಗತ್ಯವುಳ್ಳವರು' ಎನ್ನುತ್ತಾರೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಮಾಜಿ ಅಧ್ಯಕ್ಷೆ ನೀನಾ ನಾಯಕ್.
ಅನಾಥಾಲಯದಲ್ಲಿ ಅಂತಹ ಮಕ್ಕಳನ್ನು ನೋಡಿಕೊಳ್ಳುವ ಬಯಕೆ ಹೊಂದಿರುವ ಅನೇಕ ಕುಟುಂಬಗಳಿಂದ ಅರ್ಜಿಗಳನ್ನು ಮಕ್ಕಳ ಕಲ್ಯಾಣ ಇಲಾಖೆ ಸ್ವೀಕರಿಸಿದೆ. ಆದರೆ ಇಂತಹ ಕೆಲವು ಮಕ್ಕಳಿಗೆ ಅನಾಥಾಲಯ ಅಗತ್ಯವಿರುವ ಪ್ರಕರಣಗಳಲ್ಲಿ ಅಂತಹ ಗುಂಪುಗಳು, ಎನ್ಜಿಒಗಳ ಅರ್ಹತೆಯನ್ನು ಪರಿಶೀಲಿಸಿ ನಿಲುವು ತೆಗೆದುಕೊಳ್ಳುವುದು ಆಯೋಗಕ್ಕೆ ತೀರ್ಮಾನಕ್ಕೆ ಬಿಟ್ಟಿದ್ದು ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಮಗ್ರ ಮಕ್ಕಳ ರಕ್ಷಣೆ ಸೇವೆಯ ಅಧಿಕಾರಿಯೊಬ್ಬರು.
ಕೋವಿಡ್ ಸಾಂಕ್ರಾಮಿಕದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳನ್ನು ದತ್ತು ನೀಡಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸಂದೇಶಗಳನ್ನು ಹರಿಬಿಡಲಾಗುತ್ತಿದೆ. ಅಂತಹ ಮಕ್ಕಳ ಆರೈಕೆಗಾಗಿ ದೇಣಿಗೆ ಸಂಗ್ರಹಣೆ ನಡೆಯುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಅಂತಹ ಯಾವುದೇ ಪ್ರಕರಣ ಕಂಡುಬಂದರೂ ಸಾರ್ವಜನಿಕರು 1908 ಮಕ್ಕಳ ಸಹಾಯವಾಣಿ ಅಥವಾ ಮಕ್ಕಳ ಕಲ್ಯಾಣ ಸಮಿತಿಯ ಗಮನಕ್ಕೆ ತರಬೇಕು ಎಂದು ಐಸಿಪಿಎಸ್ ಹೇಳಿಕೆ ತಿಳಿಸಿದೆ.
ಸಾಂಕ್ರಾಮಿದ ನಡುವೆ ಪೋಷಕರು ಹಾಗೂ ಆರೈಕೆದಾರರನ್ನು ಕಳೆದುಕೊಂಡ ಮಕ್ಕಳಿಗೆ ಸೂಕ್ತ ಸೌಲಭ್ಯಗಳನ್ನು ಒದಗಿಸುವ ಸಲುವಾಗಿ ರಾಜ್ಯ ಸರ್ಕಾರ ಮೇ 3ರಂದು ಐಎಎಸ್ ಅಧಿಕಾರಿ ಕೆಪಿ ಮೋಹನ್ ರಾಜ್ ಅವರನ್ನು ನೋಡಲ್ ಅಧಿಕಾರಿಯನ್ಆಗಿ ನೇಮಿಸಿದೆ.
'ಕೋವಿಡ್-ಅನಾಥ ಮಕ್ಕಳ ಜೀವಕ್ಕೆ ಅಂತಹ ಸಂದೇಶಗಳು ಬೆದರಿಕೆಯಾಗಿ ಪರಿಣಮಿಸುತ್ತಿವೆ. ಸರ್ಕಾರದ ಮಾಧ್ಯಮಗಳ ಮೂಲಕ ನಡೆಯದಿರುವ ಮಕ್ಕಳ ಯಾವುದೇ ರೀತಿಯ ದತ್ತ ತೆಗೆದುಕೊಳ್ಳುವಿಕೆ ಅಕ್ರಮವಾಗುತ್ತದೆ. ಮಕ್ಕಳ ಭವಿಷ್ಯದ ಕುರಿತಾದ ಭಾವನಾತ್ಮಕ ಸಂದೇಶಗಳು ಹಾಗೂ ಅನುಕಂಪಗಳು ಈ ಜಾಲದಲ್ಲಿ ಸಿಲುಕಿಸುತ್ತವೆ' ಎಂದು ಕಾರ್ಯಕರ್ತರೊಬ್ಬರು ಎಚ್ಚರಿಕೆ ನೀಡಿದ್ದಾರೆ.
ಮಗುವೊಂದನ್ನು ನೇರವಾಗಿ ದತ್ತು ತೆಗೆದುಕೊಳ್ಳುವುದು ಅಕ್ರಮ ಹಾಗೂ ಶಿಕ್ಷಾರ್ಹ ಅಪರಾಧ. ಕೇಂದ್ರ ದತ್ತು ಸಂಪನ್ಮೂಲ ಸಂಸ್ಥೆಯ ಮೂಲಕ ಮಾತ್ರವೇ ದತ್ತು ತೆಗೆದುಕೊಳ್ಳಲು ಅವಕಾಶವಿದೆ.
'ಈಗ ಅಕ್ರಮ ದತ್ತು ಚಟುವಟಿಕೆಯ ಭೀತಿ ಉಂಟಾಗಿದೆ. ಈ ಮಕ್ಕಳಿಗೆ ಆರೈಕೆ ಹಾಗೂ ರಕ್ಷಣೆಯ ಅಗತ್ಯವಿದೆ. ಅವರ ಕುಟುಂಬದೊಂದಿಗಿನ ಯಾವುದೇ ಸಂಬಂಧವನ್ನು ನಾವು ತುಂಡರಿಸಬಾರದು. ಇದು ಬಿಕ್ಕಟ್ಟಿನ ಸನ್ನಿವೇಶ. ಇಲ್ಲಿ ನಾವು ಎರಡು ಗುಂಪುಗಳ ಮಕ್ಕಳನ್ನು ನೋಡುತ್ತೇವೆ. ಸೋಂಕಿತರು ಹಾಗೂ ಪರಿಣಾಮಕ್ಕೆ ತುತ್ತಾದ ಮತ್ತು ತಾತ್ಕಾಲಿಕ ಬೆಂಬಲದ ಅಗತ್ಯವುಳ್ಳವರು' ಎನ್ನುತ್ತಾರೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಮಾಜಿ ಅಧ್ಯಕ್ಷೆ ನೀನಾ ನಾಯಕ್.
ಅನಾಥಾಲಯದಲ್ಲಿ ಅಂತಹ ಮಕ್ಕಳನ್ನು ನೋಡಿಕೊಳ್ಳುವ ಬಯಕೆ ಹೊಂದಿರುವ ಅನೇಕ ಕುಟುಂಬಗಳಿಂದ ಅರ್ಜಿಗಳನ್ನು ಮಕ್ಕಳ ಕಲ್ಯಾಣ ಇಲಾಖೆ ಸ್ವೀಕರಿಸಿದೆ. ಆದರೆ ಇಂತಹ ಕೆಲವು ಮಕ್ಕಳಿಗೆ ಅನಾಥಾಲಯ ಅಗತ್ಯವಿರುವ ಪ್ರಕರಣಗಳಲ್ಲಿ ಅಂತಹ ಗುಂಪುಗಳು, ಎನ್ಜಿಒಗಳ ಅರ್ಹತೆಯನ್ನು ಪರಿಶೀಲಿಸಿ ನಿಲುವು ತೆಗೆದುಕೊಳ್ಳುವುದು ಆಯೋಗಕ್ಕೆ ತೀರ್ಮಾನಕ್ಕೆ ಬಿಟ್ಟಿದ್ದು ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಮಗ್ರ ಮಕ್ಕಳ ರಕ್ಷಣೆ ಸೇವೆಯ ಅಧಿಕಾರಿಯೊಬ್ಬರು.
ಕೋವಿಡ್ ಸಾಂಕ್ರಾಮಿಕದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳನ್ನು ದತ್ತು ನೀಡಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸಂದೇಶಗಳನ್ನು ಹರಿಬಿಡಲಾಗುತ್ತಿದೆ. ಅಂತಹ ಮಕ್ಕಳ ಆರೈಕೆಗಾಗಿ ದೇಣಿಗೆ ಸಂಗ್ರಹಣೆ ನಡೆಯುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಅಂತಹ ಯಾವುದೇ ಪ್ರಕರಣ ಕಂಡುಬಂದರೂ ಸಾರ್ವಜನಿಕರು 1908 ಮಕ್ಕಳ ಸಹಾಯವಾಣಿ ಅಥವಾ ಮಕ್ಕಳ ಕಲ್ಯಾಣ ಸಮಿತಿಯ ಗಮನಕ್ಕೆ ತರಬೇಕು ಎಂದು ಐಸಿಪಿಎಸ್ ಹೇಳಿಕೆ ತಿಳಿಸಿದೆ.