ಮಗನ ದಾಖಲಾತಿಗೆ ಹೋದ ತಾಯಿ ಜೊತೆ ಅನುಚಿತ ವರ್ತನೆ: ಖಾಸಗಿ ಶಾಲೆ ಪ್ರಿನ್ಸಿಪಾಲ್, ಪುತ್ರನ ವಿರುದ್ಧ ಎಫ್ಐಆರ್
7ನೇ ತರಗತಿ ವರೆಗೆ ಓದಿರುವ ತಮ್ಮ ಮಗ ಮಹಮದ್ ಫರಾನ್ ಖಾನ್ನನ್ನು 8ನೇ ತರಗತಿಗೆ ದಾಖಲಾತಿ ಮಾಡಿಸಲು ಹೋದ ಸಂದರ್ಭದಲ್ಲಿ ಮೂವರೂ ತನ್ನ ಜತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ತಹಸೀನ್ ಖಾನಮ್ ನೀಡಿದ ದೂರಿನ ಆಧಾರದಲ್ಲಿ ನಾಗವಾರ ಬಳಿಯ ಇಮ್ಯಾನುಯಲ್ ಶಾಲಾ ಪ್ರಿನ್ಸಿಪಲ್ ರೂತ್ ಸೆಲ್ವರಾಜ್ ಹಾಗೂ ಪುತ್ರರಾದ ಪೌಲ್ ಮತ್ತು ಸ್ಯಾಮ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
Vijaya Karnataka 4 Jun 2019, 5:00 am
ವಿಕ ಸುದ್ದಿಲೋಕ ಬೆಂಗಳೂರು
ಮಗನ ದಾಖಲಾತಿಗಾಗಿ ತೆರಳಿದ್ದ ತಾಯಿಯ ಜತೆ ಅನುಚಿತವಾಗಿ ವರ್ತಿಸಿ ಶಾಲಾ ಆವರಣದಿಂದ ಹೊರಗೆ ದಬ್ಬಿದ ಆರೋಪದ ಮೇಲೆ ಶಾಲೆಯ ಪ್ರಾಂಶುಪಾಲರು ಹಾಗೂ ಇಬ್ಬರು ಪುತ್ರರ ವಿರುದ್ಧ ಕೆ.ಜಿ.ಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
7ನೇ ತರಗತಿ ವರೆಗೆ ಓದಿರುವ ತಮ್ಮ ಮಗ ಮಹಮದ್ ಫರಾನ್ ಖಾನ್ನನ್ನು 8ನೇ ತರಗತಿಗೆ ದಾಖಲಾತಿ ಮಾಡಿಸಲು ಹೋದ ಸಂದರ್ಭದಲ್ಲಿ ಮೂವರೂ ತನ್ನ ಜತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ತಹಸೀನ್ ಖಾನಮ್ ನೀಡಿದ ದೂರಿನ ಆಧಾರದಲ್ಲಿ ನಾಗವಾರ ಬಳಿಯ ಇಮ್ಯಾನುಯಲ್ ಶಾಲಾ ಪ್ರಿನ್ಸಿಪಲ್ ರೂತ್ ಸೆಲ್ವರಾಜ್ ಹಾಗೂ ಪುತ್ರರಾದ ಪೌಲ್ ಮತ್ತು ಸ್ಯಾಮ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
ದೂರಿನಲ್ಲೇನಿದೆ ?
ತಹಸೀನ್ ಖಾನಮ್ ಅವರಿಗೆ ಇಬ್ಬರು ಮಕ್ಕಳಿದ್ದು ಇಬ್ಬರೂ ಇಮ್ಯಾನುಯಲ್ ಶಾಲೆಯಲ್ಲೇ ವ್ಯಾಸಂಗ ಮಾಡುತ್ತಿದ್ದಾರೆ. ಇದೇ ಶಾಲೆಯಲ್ಲಿ ಏಳನೇ ತರಗತಿ ಪೂರೈಸಿದ್ದ ಫರಾನ್ ಖಾನ್ನನ್ನು ಎಂಟನೇ ತರಗತಿಗೆ ದಾಖಲಾತಿ ಮಾಡಿಸುವುದಿತ್ತು. ಇದಕ್ಕಾಗಿ ಫರಾನ್ ಮೇ 28 ರಂದು ಶಾಲೆಗೆ ಹೋಗಿದ್ದ. ಈ ವೇಳೆ ದಾಖಲಾತಿ ಮಾಡಿಕೊಳ್ಳದೆ ಶಾಲಾ ಆಡಳಿತ ಮಂಡಳಿಯವರು ವಾಪಸ್ ಕಳುಹಿಸಿದ್ದರು. ಕಾರಣ ಕೇಳಲು ಹೋದ ತಾಯಿ ತಹಸೀನ್ ಖಾನಮ್ ಅವರ ಜತೆ ಮೂವರೂ ಆರೋಪಿಗಳು ಅನುಚಿತವಾಗಿ ವರ್ತಿಸಿದ್ದಾರೆ. ಮಾತ್ರವಲ್ಲ ಪ್ರಿನ್ಸಿಪಾಲ್ ಅವರ ಪುತ್ರರು ತಹಸೀನ್ ಖಾನಮ್ ಮೈ ಕೈ ಮುಟ್ಟಿದ್ದಾರೆ. ಬಲವಂತವಾಗಿ ಶಾಲೆಯಿಂದ ಹೊರಗೆ ದಬ್ಬಿದ್ದಾರೆ ಎಂದು ದೂರಿನಲ್ಲಿ ದಾಖಲಾಗಿದೆ.
ಈ ಬಗ್ಗೆ ವಿಜಯ ಕರ್ನಾಟಕ ಜತೆ ಮಾತನಾಡಿದ ದೂರುದಾರರು ''ಚೆನ್ನಾಗಿ ಓದುತ್ತಿರುವ ನನ್ನ ಮಗನಿಗೆ ಟಿಸಿ ಕೊಡುತ್ತಿರುವುದಕ್ಕೆ ಏನು ಕಾರಣ ಎಂದು ಹಲವಾರು ಬಾರಿ ಕೇಳಿದೆ. ಪ್ರಿನ್ಸಿಪಾಲ್ ನನ್ನ ಮನವಿಗೆ ಸ್ಪಂದಿಸಲಿಲ್ಲ. ಶುಲ್ಕ ಕೂಡ ಕಟ್ಟಲು ರೆಡಿ ಇದ್ದೇವೆ ಎಂದು ಹೇಳಿದರೂ ಅವರ ಇಬ್ಬರು ಗಂಡು ಮಕ್ಕಳು ನನ್ನ ಜತೆ ಅನುಚಿತವಾಗಿ ವರ್ತಿಸಿದರು. ಇದಕ್ಕಾಗಿ ದೂರು ನೀಡಿದ್ದೇನೆ,''ಎಂದು ತಿಳಿಸಿದರು.
ಈ ಬಗ್ಗೆ ಪತ್ರಿಕೆಗೆ ಪ್ರತಿಕ್ರಿಯಿಸಿದ ಕೆ.ಜಿ.ಹಳ್ಳಿ ಠಾಣಾಧಿಕಾರಿಗಳು ಪ್ರಕರಣದ ಬಗ್ಗೆ ಎಫ್ಐಆರ್ ದಾಖಲಾಗಿದೆ. ತನಿಖೆ ಮುಂದುವರಿದಿದೆ. ಪ್ರಿನ್ಸಿಪಾಲ್ ಮತ್ತು ಮಕ್ಕಳನ್ನು ಕರೆದು ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಮಗನ ದಾಖಲಾತಿಗಾಗಿ ತೆರಳಿದ್ದ ತಾಯಿಯ ಜತೆ ಅನುಚಿತವಾಗಿ ವರ್ತಿಸಿ ಶಾಲಾ ಆವರಣದಿಂದ ಹೊರಗೆ ದಬ್ಬಿದ ಆರೋಪದ ಮೇಲೆ ಶಾಲೆಯ ಪ್ರಾಂಶುಪಾಲರು ಹಾಗೂ ಇಬ್ಬರು ಪುತ್ರರ ವಿರುದ್ಧ ಕೆ.ಜಿ.ಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
7ನೇ ತರಗತಿ ವರೆಗೆ ಓದಿರುವ ತಮ್ಮ ಮಗ ಮಹಮದ್ ಫರಾನ್ ಖಾನ್ನನ್ನು 8ನೇ ತರಗತಿಗೆ ದಾಖಲಾತಿ ಮಾಡಿಸಲು ಹೋದ ಸಂದರ್ಭದಲ್ಲಿ ಮೂವರೂ ತನ್ನ ಜತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ತಹಸೀನ್ ಖಾನಮ್ ನೀಡಿದ ದೂರಿನ ಆಧಾರದಲ್ಲಿ ನಾಗವಾರ ಬಳಿಯ ಇಮ್ಯಾನುಯಲ್ ಶಾಲಾ ಪ್ರಿನ್ಸಿಪಲ್ ರೂತ್ ಸೆಲ್ವರಾಜ್ ಹಾಗೂ ಪುತ್ರರಾದ ಪೌಲ್ ಮತ್ತು ಸ್ಯಾಮ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
ದೂರಿನಲ್ಲೇನಿದೆ ?
ತಹಸೀನ್ ಖಾನಮ್ ಅವರಿಗೆ ಇಬ್ಬರು ಮಕ್ಕಳಿದ್ದು ಇಬ್ಬರೂ ಇಮ್ಯಾನುಯಲ್ ಶಾಲೆಯಲ್ಲೇ ವ್ಯಾಸಂಗ ಮಾಡುತ್ತಿದ್ದಾರೆ. ಇದೇ ಶಾಲೆಯಲ್ಲಿ ಏಳನೇ ತರಗತಿ ಪೂರೈಸಿದ್ದ ಫರಾನ್ ಖಾನ್ನನ್ನು ಎಂಟನೇ ತರಗತಿಗೆ ದಾಖಲಾತಿ ಮಾಡಿಸುವುದಿತ್ತು. ಇದಕ್ಕಾಗಿ ಫರಾನ್ ಮೇ 28 ರಂದು ಶಾಲೆಗೆ ಹೋಗಿದ್ದ. ಈ ವೇಳೆ ದಾಖಲಾತಿ ಮಾಡಿಕೊಳ್ಳದೆ ಶಾಲಾ ಆಡಳಿತ ಮಂಡಳಿಯವರು ವಾಪಸ್ ಕಳುಹಿಸಿದ್ದರು. ಕಾರಣ ಕೇಳಲು ಹೋದ ತಾಯಿ ತಹಸೀನ್ ಖಾನಮ್ ಅವರ ಜತೆ ಮೂವರೂ ಆರೋಪಿಗಳು ಅನುಚಿತವಾಗಿ ವರ್ತಿಸಿದ್ದಾರೆ. ಮಾತ್ರವಲ್ಲ ಪ್ರಿನ್ಸಿಪಾಲ್ ಅವರ ಪುತ್ರರು ತಹಸೀನ್ ಖಾನಮ್ ಮೈ ಕೈ ಮುಟ್ಟಿದ್ದಾರೆ. ಬಲವಂತವಾಗಿ ಶಾಲೆಯಿಂದ ಹೊರಗೆ ದಬ್ಬಿದ್ದಾರೆ ಎಂದು ದೂರಿನಲ್ಲಿ ದಾಖಲಾಗಿದೆ.
ಈ ಬಗ್ಗೆ ವಿಜಯ ಕರ್ನಾಟಕ ಜತೆ ಮಾತನಾಡಿದ ದೂರುದಾರರು ''ಚೆನ್ನಾಗಿ ಓದುತ್ತಿರುವ ನನ್ನ ಮಗನಿಗೆ ಟಿಸಿ ಕೊಡುತ್ತಿರುವುದಕ್ಕೆ ಏನು ಕಾರಣ ಎಂದು ಹಲವಾರು ಬಾರಿ ಕೇಳಿದೆ. ಪ್ರಿನ್ಸಿಪಾಲ್ ನನ್ನ ಮನವಿಗೆ ಸ್ಪಂದಿಸಲಿಲ್ಲ. ಶುಲ್ಕ ಕೂಡ ಕಟ್ಟಲು ರೆಡಿ ಇದ್ದೇವೆ ಎಂದು ಹೇಳಿದರೂ ಅವರ ಇಬ್ಬರು ಗಂಡು ಮಕ್ಕಳು ನನ್ನ ಜತೆ ಅನುಚಿತವಾಗಿ ವರ್ತಿಸಿದರು. ಇದಕ್ಕಾಗಿ ದೂರು ನೀಡಿದ್ದೇನೆ,''ಎಂದು ತಿಳಿಸಿದರು.
ಈ ಬಗ್ಗೆ ಪತ್ರಿಕೆಗೆ ಪ್ರತಿಕ್ರಿಯಿಸಿದ ಕೆ.ಜಿ.ಹಳ್ಳಿ ಠಾಣಾಧಿಕಾರಿಗಳು ಪ್ರಕರಣದ ಬಗ್ಗೆ ಎಫ್ಐಆರ್ ದಾಖಲಾಗಿದೆ. ತನಿಖೆ ಮುಂದುವರಿದಿದೆ. ಪ್ರಿನ್ಸಿಪಾಲ್ ಮತ್ತು ಮಕ್ಕಳನ್ನು ಕರೆದು ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.