ಆ್ಯಪ್ನಗರ

ಬೆಂಗಳೂರಿನಿಂದ ತೆರಳುವ ಪ್ರಯಾಣಿಕರ ವಿಮಾನ ಟಿಕೆಟ್‌ ದರ ಹೆಚ್ಚಳ ಸಾಧ್ಯತೆ

​ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರ (ಎಇಆರ್‌ಎ) ಕೆಐಎ ಬಳಕೆದಾರರ ಅಭಿವೃದ್ಧಿ ಶುಲ್ಕ (ಯುಡಿಎಫ್‌) ಮತ್ತು ವಿಮಾನ ಲ್ಯಾಂಡಿಂಗ್‌ ಶುಲ್ಕ ಹೆಚ್ಚಳಕ್ಕೆ ಅನುಮತಿ ನೀಡಿರುವ ಕಾರಣ ಟಿಕೆಟ್‌ ದರ ಹೆಚ್ಚಳವಾಗಲಿದೆ.

Vijaya Karnataka 30 May 2020, 9:02 pm
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೇರೆ ಬೇರೆ ನಗರ, ರಾಷ್ಟ್ರಗಳಿಗೆ ಪ್ರಯಾಣ ಬೆಳೆಸುವ ವಿಮಾನ ಟೆಕಿಟ್‌ ದರ ಜೂ. 1ರಿಂದ ಸ್ವಲ್ಪ ತುಟ್ಟಿಯಾಗುವ ಸಾಧ್ಯತೆಯಿದೆ.
Vijaya Karnataka Web KIA Bengaluru


ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರ (ಎಇಆರ್‌ಎ) ಕೆಐಎ ಬಳಕೆದಾರರ ಅಭಿವೃದ್ಧಿ ಶುಲ್ಕ (ಯುಡಿಎಫ್‌) ಮತ್ತು ವಿಮಾನ ಲ್ಯಾಂಡಿಂಗ್‌ ಶುಲ್ಕ ಹೆಚ್ಚಳಕ್ಕೆ ಅನುಮತಿ ನೀಡಿರುವ ಕಾರಣ ದರ ಹೆಚ್ಚಳವಾಗಲಿದೆ.

ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ 716 ರೂ. ಇದ್ದ ಬಳಕೆದಾರರ ಅಭಿವೃದ್ಧಿ ಶುಲ್ಕ 839 ರೂ.ಗೆ ಏರಿದೆ. ದೇಶೀಯ ಮಾರ್ಗದಲ್ಲಿ 179 ರೂ. ಇದ್ದ ಶುಲ್ಕ 184 ರೂ.ಗೇರಿದೆ. ಬಳಕೆದಾರರ ಶುಲ್ಕದ ಜತೆಗೆ ವಿಮಾನಗಳು ಲ್ಯಾಂಡಿಂಗ್‌ ಶುಲ್ಕ ಹೆಚ್ಚಿಸಿರುವ ಕಾರಣ ಏರ್‌ಲೈನ್ಸ್‌ ಕಂಪನಿಗಳು ವಿಮಾನ ಟಿಕೆಟ್‌ ದರವನ್ನು ಹೆಚ್ಚಳ ಮಾಡುವ ಸಾಧ್ಯತೆ ಇದೆ.

ಇಂಧನ ಪೂರೈಸುವ ಕಂಪನಿಗಳು ವಿಮಾನ ನಿಲ್ದಾಣ ನಿರ್ವಾಹಕರಿಗೆ ಪಾವತಿ ಮಾಡಬೇಕಿದ್ದ ಇಂಧನ ಶುಲ್ಕವನ್ನು (ಎಫ್‌ಟಿಸಿ) ಕೇಂದ್ರ ಸರಕಾರ ಜನವರಿ ತಿಂಗಳಲ್ಲಿ ರದ್ದುಗೊಳಿಸಿತ್ತು. ವಿಮಾನ ಇಂಧನ ದರ ಜನವರಿ ತಿಂಗಳಲ್ಲಿ ಏರಿಕೆ ಕಂಡಿದ್ದ ಕಾರಣ ಏರ್‌ಲೈನ್ಸ್‌ ಕಂಪನಿಗಳಿಗೆ ತುಸು ಅನುಕೂಲ ಮಾಡಿಕೊಡಲೆಂದು ಶುಲ್ಕ ರದ್ದುಗೊಳಿಸಿತ್ತು. ಆದರೆ, ಇದರಿಂದ ವಿಮಾನ ನಿಲ್ದಾಣ ನಿರ್ವಾಹಕರ ಆದಾಯಕ್ಕೆ ಧಕ್ಕೆಯಾಗಿತ್ತು.

ನಿಲ್ದಾಣಗಳ ನಿರ್ವಾಹಕರಿಗೆ ಆದಾಯ ಕಡಿತವಾಗಿದ್ದ ಕಾರಣ ವಿಮಾನ ನಿಲ್ದಾಣಗಳ ವಿವಿಧ ಶುಲ್ಕಗಳಲ್ಲಿ ಬದಲವಾಣೆ ಮಾಡಿಕೊಡುವಂತೆ ಕೇಂದ್ರ ವಿಮಾನಯಾನ ಸಚಿವಾಲಯ ಸೂಚಿಸಿದ್ದ ಕಾರಣ ಎಇಆರ್‌ಎ ಬಳಕೆದಾರರ ಶುಲ್ಕ ಮತ್ತು ಲ್ಯಾಂಡಿಂಗ್‌ ಶುಲ್ಕ ಹೆಚ್ಚಿಸಿದೆ. ಇದು ನೇರವಾಗಿ ಟಿಕೆಟ್‌ ದರದ ಮೇಲೆ ಪರಿಣಾಮ ಬಿದ್ದಿದೆ.

ಎಫ್‌ಟಿಸಿ ಶುಲ್ಕ ರದ್ದುಗೊಳಿಸಿದ ಕಾರಣ ಜನವರಿ 15 ರಿಂದ ಮಾ. 3ರವರೆಗೆ 140 ಕೋಟಿ ರೂ. ನಷ್ಚವಾಗಿದ್ದ ಕಾರಣ ಇದನ್ನು ತುಂಬಿಸಿಕೊಡಲು ವ್ಯವಸ್ಥೆ ಮಾಡುವಂತೆ ಎಂದು ಕೆಐಎ ಆಡಳಿತ ಮಂಡಳಿ ಮನವಿ ಮಾಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ