ಆ್ಯಪ್ನಗರ

ಬೆಂಗಳೂರಿನ ಹೊರಗೆ ಇಂದಿರಾ ಕ್ಯಾಂಟೀನ್‌ಗಳ ಸದ್ದೇ ಇಲ್ಲ, ವಿಸ್ತರಣೆ ಆಸಕ್ತಿಯೂ ಸರಕಾರಕ್ಕಿಲ್ಲ...

ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್‌ ಸ್ಥಾಪಿಸುವ ಹಿಂದಿನ ಸರಕಾರದ ಇರಾದೆ ಇನ್ನೂ ಕನಸಾಗಿಯೇ ಉಳಿದುಕೊಂಡಿದ್ದು, ಹಣದ ಕೊರತೆ, ಅಧಿಕಾರಿಗಳ ಗೈರು ಸೇರಿದಂತೆ ಯೋಜನೆ ಪೂರ್ಣಕ್ಕೆ ಆಸಕ್ತಿಯೇ ಕೊರತೆಯೇ ಎದ್ದು ಕಾಣುತ್ತಿದೆ.

TIMESOFINDIA.COM 8 Nov 2018, 6:30 pm
[This story originally published in times of india nov 8, 2018]
Vijaya Karnataka Web indira canteen


ಬೆಂಗಳೂರು: ಹಿಂದಿದ್ದ ಸಿದ್ದರಾಮಯ್ಯ ನೇತೃತ್ವದ ಸರಕಾರದ ಯೋಜನೆಗಳನ್ನು ಮುಂದುವರಿಸುವ ಇರಾದೆ ಸಮ್ಮಿಶ್ರ ಸರಕಾರಕ್ಕಿದ್ದರೂ, ಅನುಷ್ಠಾನದ ವಿಚಾರದಲ್ಲಿ ವೇಗ ಕಳೆದುಕೊಂಡಿದೆ. ಬೆಂಗಳೂರಿನಿಂದ ಹೊರ ಭಾಗದಲ್ಲೂ ಇಂದಿರಾ ಕ್ಯಾಂಟೀನ್‌ ಸ್ಥಾಪಿಸುವ ಯೋಜನೆ ಇದೀಗ ಕಳೆಕುಂದಿದೆ.

ಬಡ ಹಾಗೂ ಮಧ್ಯಮ ವರ್ಗದ ಜನರ ಹಸಿವು ನೀಗಿಸಲೆಂದೇ ಈ ಯೋಜನೆಯನ್ನು ಕಾಂಗ್ರೆಸ್‌ ಜಾರಿಗೊಳಿಸಿತ್ತು. ಬೆಂಗಳೂರಿನ 198 ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್‌ ಆರಂಭಗೊಂಡಿದೆ. ರಾಜ್ಯದ 10 ಮುನ್ಸಿಪಲ್‌ ಕಾರ್ಪೋರೇಷನ್‌ಗಳಲ್ಲಿ ಒಟ್ಟಾರೆ 260 ಇಂದಿರಾ ಕ್ಯಾಂಟೀನ್‌ ಆರಂಭಿಸುವ ಘೋಷಣೆ ಮಾಡಲಾಗಿತ್ತು. ಆದರೆ ಇನ್ನೂ 100 ಕ್ಯಾಂಟೀನ್‌ಗಳ ನಿರ್ಮಾಣ ಕಾರ್ಯ ಬಾಕಿ ಆಗಿದೆ.

ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳ ನಿರುತ್ಸಾಹ, ಗೈರು, ಹಣದ ಕೊರತೆಯಿಂದಾಗಿ ಯೋಜನೆ ಕುಂಟುತ್ತಾ ಸಾಗಿದೆ. ಮೇಯಲ್ಲಿ ಚುನಾವಣೆ, ಅತಂತ್ರ ವಿಧಾನಸಭೆ, ಸಮ್ಮಿಶ್ರ ಸರಕಾರ ರಚನೆ ಸೇರಿದಂತೆ ನಡೆದ ಅನೇಕ ರಾಜಕೀಯ ವಿದ್ಯಮಾನಗಳಿಂದ ಯೋಜನೆಗೆ ಅಗತ್ಯ ಪ್ರಮಾಣದ ಹಣವೂ ಬಿಡುಗಡೆಯಾಗಿಲ್ಲ. ಇದಲ್ಲದೆ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಯೋಜನೆಗೆ ನೇಮಿಸಲಾಗಿದ್ದ ಅಧಿಕಾರಿಗಳು ವರ್ಗವಾಗಿದ್ದಾರೆ ಎಂದು ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಯೋರ್ವರು ಮಾಹಿತಿ ನೀಡಿದ್ದಾರೆ.

ಬೆಂಗಳೂರಿಗೆ ಸೀಮಿತಗೊಂಡಿದ್ದ ಇಂದಿರಾ ಕ್ಯಾಂಟೀನ್‌ಗಳನ್ನು ರಾಜ್ಯಾದ್ಯಂತ ವಿಸ್ತರಿಸುವುದಾಗಿ ಕಾಂಗ್ರೆಸ್‌ ಘೋಷಿಸಿತ್ತು. ಚುನಾವಣೆ ಬಳಿಕ ಅಸ್ತಿತ್ವಕ್ಕೆ ಬಂದ ಸಮ್ಮಿಶ್ರ ಸರಕಾರದಲ್ಲಿ, ಸಿಎಂ ಕುಮಾರಸ್ವಾಮಿಯೂ ಇಂದಿರಾ ಕ್ಯಾಂಟೀನ್‌ಗಳನ್ನು ರಾಜ್ಯದ ವಿವಿಧ ಭಾಗಗಳಿಗೆ ವಿಸ್ತರಿಸುವುದಾಗಿ ಹೇಳಿದ್ದರು. ಆದರೆ ಈ ಯೋಜನೆ ಇದೀಗ ಘೋಷಣೆಗಷ್ಟೇ ಸೀಮಿತವಾಗಿದೆ.

ಈ ಎಲ್ಲ ಅಡೆತಡೆಗಳಿರುವ ಮಧ್ಯೆ ಇದೀಗ, ಯೋಜನೆಗೆ ಮತ್ತೆ ಕಾರ್ಯ ರೂಪಕ್ಕೆ ತರಲಾಗುತ್ತಿದೆ. ಕಳೆದ ವಾರದ ವರೆಗೆ ರಾಜ್ಯಾದ್ಯಂತ 160 ಕ್ಯಾಂಟೀನ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಪೌರಾಡಳಿತ ನಿರ್ದೇಶನಾಲಯ ಹಾಗೂ ನಗರಾಭಿವೃದ್ಧಿ ಇಲಾಖೆಗೆ ಉಳಿದ 100 ಕ್ಯಾಂಟೀನ್‌ ಸಿದ್ಧಗೊಳಿಸಲು 1.5 ಕೋಟಿ ರೂ ಅನುಮತಿ ಸಿಕ್ಕಿದೆ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ