ಆ್ಯಪ್ನಗರ

ಕಿದ್ವಾಯಿ ಆವರಣದಲ್ಲಿನ ಇಂದಿರಾ ಕ್ಯಾಂಟೀನ್‌ ತೆರವಿಗೆ ಸೂಚನೆ

ನಗರದ ಕಿದ್ವಾಯಿ ಕ್ಯಾನ್ಸರ್‌ ಆಸ್ಪತ್ರೆ ಆವರಣದಲ್ಲಿನ ಇಂದಿರಾ ಕ್ಯಾಂಟೀನ್‌ ಅನ್ನು ಸ್ಥಳಾಂತರಿಸುವಂತೆ ಆಸ್ಪತ್ರೆಯ ಆಡಳಿತ ಮಂಡಳಿ ಬಿಬಿಎಂಪಿಗೆ ಸೂಚಿಸಿದೆ.

Vijaya Karnataka 25 Jan 2019, 5:00 am
ಬೆಂಗಳೂರು: ನಗರದ ಕಿದ್ವಾಯಿ ಕ್ಯಾನ್ಸರ್‌ ಆಸ್ಪತ್ರೆ ಆವರಣದಲ್ಲಿನ ಇಂದಿರಾ ಕ್ಯಾಂಟೀನ್‌ ಅನ್ನು ಸ್ಥಳಾಂತರಿಸುವಂತೆ ಆಸ್ಪತ್ರೆಯ ಆಡಳಿತ ಮಂಡಳಿ ಬಿಬಿಎಂಪಿಗೆ ಸೂಚಿಸಿದೆ.
Vijaya Karnataka Web indira canteen1


ಸಿದ್ದಾಪುರ ವಾರ್ಡ್‌ ವ್ಯಾಪ್ತಿಗೆ ಬರುವ ಕಿದ್ವಾಯಿ ಆಸ್ಪತ್ರೆ ಆವರಣದಲ್ಲಿ ಪಾಲಿಕೆ ವತಿಯಿಂದ ಕ್ಯಾಂಟೀನ್‌ ತೆರೆಯಲಾಗಿತ್ತು. ಕಳೆದ ವರ್ಷ ಜ. 26ರಂದು ಪ್ರಾರಂಭವಾಗಿದ್ದ ಈ ಕ್ಯಾಂಟೀನ್‌ಗೆ ಒಂದು ವರ್ಷ ತುಂಬಲಿದೆ. ಆದರೆ, ಆಸ್ಪತ್ರೆಯ 3 ಸಾವಿರ ಚದರ ಅಡಿ ಜಾಗದಲ್ಲಿ ಕ್ಯಾಂಟೀನ್‌ ನಿರ್ಮಿಸಿರುವುದರಿಂದ ಅಷ್ಟೂ ಜಾಗ ಆಸ್ಪತ್ರೆ ಕಳೆದುಕೊಳ್ಳಬೇಕಿದೆ. ಆಸ್ಪತ್ರೆಯಲ್ಲಿ ಈಗಾಗಲೇ ಸಾಕಷ್ಟು ಜಾಗದ ಕೊರತೆ ಉಂಟಾಗಿದ್ದು, ಆಸ್ಪತ್ರೆ ಚಟುವಟಿಕೆಗಳಿಗೇ ಸಮಸ್ಯೆಯಾಗಿದೆ. ಹೀಗಾಗಿ ಕ್ಯಾಂಟೀನ್‌ನ ಅಗತ್ಯತೆ ಇಲ್ಲ ಎಂದು ಆಡಳಿತ ಮಂಡಳಿ ಕಾರಣ ನೀಡಿದೆ.

ಜತೆಗೆ ಆಸ್ಪತ್ರೆ ತನ್ನದೇ ಕ್ಯಾಂಟೀನ್‌ ಸೌಲಭ್ಯ ಹೊಂದಿದ್ದು, ಒಂದು ಸಾವಿರ ಮಂದಿಗೆ ಆಹಾರ ಒದಗಿಸುತ್ತಿದೆ. ಇಲ್ಲದೆ 1500 ಮಂದಿಗೆ ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆ ಟ್ರಸ್ಟ್‌ ವತಿಯಿಂದ ಮೊಬೈಲ್‌ ಕ್ಯಾಂಟೀನ್‌ ಮೂಲಕ ನಿತ್ಯ ಆಹಾರ ವಿತರಿಸಲಾಗುತ್ತಿದೆ. ಹೀಗಾಗಿ, ಆಸ್ಪತ್ರೆಯಲ್ಲಿ ಇಂದಿರಾ ಕ್ಯಾಂಟೀನ್‌ನ ಅಗತ್ಯತೆ ಇಲ್ಲ ಎಂದು ಆಡಳಿತ ಮಂಡಳಿ ಪ್ರತಿಪಾದಿಸಿದೆ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ