ಆ್ಯಪ್ನಗರ

ಜಾರ್ಜ್‌ ಅವರ ಜಾಗದಲ್ಲಿ ಇಂದಿರಾ ಕ್ಯಾಂಟೀನ್‌ ನಿರ್ಮಿಸಲಿ: ಶೆಟ್ಟರ್‌

ಬೆಂಗಳೂರಿನಲ್ಲಿ ಸಚಿವ ಜಾರ್ಜ್ ಅವರ ಸಾಕಷ್ಟು ಆಸ್ತಿಗಳಿವೆ. ಅವುಗಳಲ್ಲಿ ಕ್ಯಾಂಟೀನ್ ಕಟ್ಟಲಿ.

ವಿಕ ಸುದ್ದಿಲೋಕ 16 Aug 2017, 2:16 pm
ಹುಬ್ಬಳ್ಳಿ: ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟಿನ್ ನಿರ್ಮಾಣಕ್ಕೆ ಖಾಸಗಿಯವರ ಮತ್ತು ದೇವಸ್ಥಾನದ ಜಾಗಗಳನ್ನು ಪಡೆಯಲಾಗುತ್ತದೆ. ಬೆಂಗಳೂರಿನಲ್ಲಿ ಸಚಿವ ಜಾರ್ಜ್ ಅವರ ಸಾಕಷ್ಟು ಆಸ್ತಿಗಳಿವೆ. ಅವುಗಳಲ್ಲಿ ಕ್ಯಾಂಟೀನ್ ಕಟ್ಟಲಿ. ಇಂದಿರಾ ಕ್ಯಾಂಟಿನ್ ಮೊದಲೇ ನಿರ್ಮಾಣ ಮಾಡಬಹುದಿತ್ತು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
Vijaya Karnataka Web indira canteenshettar objection
ಜಾರ್ಜ್‌ ಅವರ ಜಾಗದಲ್ಲಿ ಇಂದಿರಾ ಕ್ಯಾಂಟೀನ್‌ ನಿರ್ಮಿಸಲಿ: ಶೆಟ್ಟರ್‌


ಅಧಿಕಾರಾವಧಿಯ ಕೊನೆ ವರ್ಷದಲ್ಲಿ ತೋರಿಕೆಗೆ, ಪ್ರಚಾರಕ್ಕೆ ಇಂದಿರಾ ಕ್ಯಾಂಟಿನ್ ಮಾಡಿದ್ದಾರೆ. ಇಂದಿರಾ ಕ್ಯಾಂಟಿನ್ ಉದ್ಘಾಟನೆಯು ಈಗ ಬೇಕಿಲ್ಲ ಎಂದು ಅವರು ಹೇಳಿದರು.

ಬೆಂಗಳೂರಿನಲ್ಲಿ ಸಣ್ಣ ಮಳೆ ಮಳೆಯಾದ್ರೂ ಟ್ರಾಫಿಕ್ ಜಾಮ್ ಉಂಟಾಗಿ ಜನರಿಗೆ ಜೀವದ ಹೆದರಿಕೆಯಾಗುತ್ತಿದೆ. ನಾಲ್ಕು ವರ್ಷದಲ್ಲಿ ಸಾವಿರಾರು ಕೋಟಿ ಬೆಂಗಳೂರು ಅಭಿವೃದ್ಧಿಗೆ ಕೊಟ್ಟಿರುವುದಾಗಿ ರಾಜ್ಯ ಸರಕಾರ ಹೇಳುತ್ತಿದೆ. ಸ್ಟೀಲ್ ಬ್ರಿಡ್ಜ್ ಹೆಸರಿನಲ್ಲಿ ಕಮಿಷನ್ ಹೊಡೆಯುವುದಕ್ಕೆ ಮುಂದಾಗಿತ್ತು. ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಒಂದು ಸುತ್ತು ಬೆಂಗಳೂರು ಪ್ರದಕ್ಷಿಣೆ ಹಾಕಲಿ, ಪರಿಸ್ಥಿತಿ ತಿಳಿದು ಮುಖ್ಯಮಂತ್ರಿ ಗೆ ಸೂಚನೆ ನೀಡಲಿ ಎಂದರು.

ರೈತರ ಬಗ್ಗೆ ಕಾಳಜಿ ಇದ್ದರೆ ರೈತರು ಪಡೆದಿರುವ ರಾಷ್ಟ್ರಿಕೃತ ಬ್ಯಾಂಕ್‌ನ ಸಾಲಮನ್ನಾ ಮಾಡುವಂತೆ ರಾಹುಲ್ ಗಾಂಧಿ ಸಿದ್ದರಾಮಯ್ಯ ನವರಿಗೆ ಸೂಚನೆ ನೀಡಲಿಎಂದು ಶೆಟ್ಟರ್‌ ಒತ್ತಾಯಿಸಿದರು. ಸಿಎಂ ಹಾಗೂ ರಾಹುಲ್ ಗಾಂಧಿ ಡ್ರಾಮ ಮಾಡುವುದು ಬೇಕಿಲ್ಲ. ಮುಖ್ಯಮಂತ್ರಿ ಅಧಿಕಾರಕ್ಕೆ ಅಂಟಿ ಕುಳಿತ್ತಿದ್ದಾರೆ. ಸಿದ್ದರಾಮಯ್ಯ ಒಂದು ದಿನದ ಅಧಿಕಾರವನ್ನೂ ಬಿಡುವವರಲ್ಲ. ಅವಧಿ ಮುನ್ನ ಚುನಾವಣೆ ಬರುತ್ತದೆ ಎಂದು ಕಾಂಗ್ರೆಸ್ ನವರು ಸುಳ್ಳು ವದಂತಿ ಹಬ್ಬಿಸಿದ್ದಾರೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ