ಆ್ಯಪ್ನಗರ

​ಕಟ್ಟಡ, ಗಾರ್ಮೆಂಟ್‌ ಮಹಿಳಾ ಉದ್ಯೋಗಿಗಳಿಗೆ ಇಂದಿರಾ ಬಸ್‌ಪಾಸ್‌

ಕಟ್ಟಡ ಕಾಮಗಾರಿ ಮತ್ತು ಗಾರ್ಮೆಂಟ್‌ಗಳಲ್ಲಿ ದುಡಿಯುತ್ತಿರುವ ಮಹಿಳಾ ಕಾರ್ಮಿಕರಿಗೆ ಇಂದಿರಾ ಪಾಸ್ ನೀಡುವ ಯೋಜನೆ ಜಾರಿಗೆ ತರಲಾಗುವುದು ಎಂದು ಎಚ್.ಎಂ.ರೇವಣ್ಣ ಹೇಳಿದ್ದಾರೆ.

Vijaya Karnataka Web 1 Dec 2017, 7:26 pm
ಬೆಂಗಳೂರು: ಕಟ್ಟಡ ಕಾಮಗಾರಿ ಮತ್ತು ಗಾರ್ಮೆಂಟ್‌ಗಳಲ್ಲಿ ದುಡಿಯುತ್ತಿರುವ ಮಹಿಳಾ ಕಾರ್ಮಿಕರಿಗೆ ಇಂದಿರಾ ಪಾಸ್ ನೀಡುವ ಯೋಜನೆ ಜಾರಿಗೆ ತರಲಾಗುವುದು ಎಂದು ಎಚ್.ಎಂ.ರೇವಣ್ಣ ಹೇಳಿದ್ದಾರೆ.
Vijaya Karnataka Web indira transport indira pass announced
​ಕಟ್ಟಡ, ಗಾರ್ಮೆಂಟ್‌ ಮಹಿಳಾ ಉದ್ಯೋಗಿಗಳಿಗೆ ಇಂದಿರಾ ಬಸ್‌ಪಾಸ್‌


ಗಾರ್ಮೆಂಟ್ಸ್‌ನ ಎರಡು ಲಕ್ಷ ಮಹಿಳಾ ನೌಕರರು ಹಾಗೂ ಕಟ್ಟಡ ಕಾಮಗಾರಿಯ ಎಂಟು ಲಕ್ಷ ಮಹಿಳಾ ಕಾರ್ಮಿಕರಿಗೆ ಇಂದಿರಾ ಪಾಸ್ ನೀಡುತ್ತೇವೆ.ಇಂದಿರಾ ಸಾರಿಗೆ ಜಾರಿ ಬಳಿಕ ಇಂದಿರಾ ಪಾಸ್ ಯೋಜನೆ ಜಾರಿ ಗೊಳಿಸುವುದಾಗಿ ರೇವಣ್ಣ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಬೆಂಗಳೂರು ಉಳಿವಿಗಾಗಿ ಪ್ರತಿ ತಿಂಗಳು ಒಂದು ದಿನ ವಿರಳ ಸಂಚಾರ ದಿನ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ.

ಸಾರಿಗೆ ಇಲಾಖೆ ವತಿಯಿಂದ ಪ್ರತಿ ತಿಂಗಳ ಎರಡನೇ ಭಾನುವಾರ ವಿರಳ ಸಂಚಾರ ದಿನ ಅಭಿಯಾನ ನಡೆಯಲಿದೆ. ಎರಡನೇ ಭಾನುವಾರ ಸ್ವಂತ ವಾಹನ ಬಳಸದೆ ಸಮೂಹ ಸಾರಿಗೆ ಬಳಸಲು ಸಾರ್ವಜನಿಕರಿಗೆ ಮನವಿ ಮಾಡಲಾಗುವುದು. ಬಿಎಂಟಿಸಿ, ಹಳದಿ ಬಾಡಿಗೆ ವಾಹನ, ಆಟೊಗಳಿಗೆ ನಿರ್ಬಂಧವಿಲ್ಲ. ಫೆಬ್ರವರಿ ಎರಡನೇ ಭಾನುವಾರ ವಿರಳ ಸಂಚಾರ ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ಲೆಸ್ ಟ್ರಾಫಿಕ್ ಡೇ ಅಭಿಯಾನ ಕುರಿತು ವ್ಯಾಪಕ ಪ್ರಚಾರ ನೀಡಲು ನಿರ್ಧರಿಸಲಾಗಿದೆ ಎಂದು ಸಚಿವರು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ