ಆ್ಯಪ್ನಗರ

ಕಿರುಕುಳದಿಂದ ತೀವ್ರ ದುಖಃವಾಗಿದೆ: ಹಿರಿಯ IPS ಅಧಿಕಾರಿ ರವೀಂದ್ರನಾಥ್ ರಾಜೀನಾಮೆ

ಡಿಜಿಯ ಭೇಟಿಗೆ ಅವಕಾಶ ಸಿಗದ ಹಿನ್ನೆಲೆ ಕಂಟ್ರೋಲ್‌ ರೂಂಗೆ ಐಪಿಎಸ್ ಅಧಿಕಾರಿ ರಾಜೀನಾಮೆ ಸಲ್ಲಿಸಿದ್ದಾರೆ. ಇಲಾಖೆಯಲ್ಲಿನ ಕಿರುಕುಳದಿಂದಾಗಿ ರಾಜೀನಾಮೆ ನೀಡಿರುವುದಾಗಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. 2014ರಲ್ಲಿ ಕನ್ನಿಂಗ್ ಹ್ಯಾಂ ರಸ್ತೆಯ ಕಾಫಿ ಶಾಪ್‌ನಲ್ಲಿ ಎಡಿಜಿಪಿ ರವೀಂದ್ರನಾಥ್ ಯುವತಿಯರಿಬ್ಬರ ಫೋಟೊ ತೆಗೆದು ವಿವಾದಕ್ಕೀಡಾಗಿದ್ದರು.

Vijaya Karnataka Web 29 Oct 2020, 12:06 pm
ಬೆಂಗಳೂರು: ಕಿರುಕುಳದಿಂದ ಬೇಸತ್ತು ಹಿರಿಯ ಐಪಿಎಸ್‌ ಅಧಿಕಾರಿ ಡಾ.ಪಿ ರವೀಂದ್ರನಾಥ್ ರಾಜೀನಾಮೆ ನೀಡಿದ್ದಾರೆ. ಪರೋಕ್ಷ ಕಿರುಕುಳದಿಂದ ತೀವ್ರ ಸಂಕಟಪಟ್ಟಿದ್ದೆ. ಇದೀಗ ರಾಜೀನಾಮೆ ನೀಡುವ ಮೂಲಕ ನೆಮ್ಮದಿಯ ಜೀವನದ ದಾರಿಯನ್ನು ತುಳಿಯುತ್ತಿದ್ದೇನೆ ಎಂದು ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
Vijaya Karnataka Web ravindra


ಬುಧವಾರ ತಡರಾತ್ರಿ ಡಿಜಿಗೆ ರಾಜೀನಾಮೆ ಸಲ್ಲಿಸಲು ತೆರಳಿದ್ದರು ಎನ್ನಲಾಗಿದೆ, ಆದರೆ ಡಿಜಿಯ ಭೇಟಿಗೆ ಅವಕಾಶ ಸಿಗದ ಹಿನ್ನೆಲೆ ಕಂಟ್ರೋಲ್‌ ರೂಂಗೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ಪತ್ರದಲ್ಲಿ ಕಳೆದ ನಾಲ್ಕು ವರ್ಷದಿಂದ ನಾನು ಇಲಾಖೆಯಲ್ಲಿ ತೀವ್ರ ಸಮಸ್ಯೆಗಳನ್ನು ಕೆಲವರಿಂದ ಅನುಭವಿಸಿರುವುದಾಗಿ ಆರೋಪಿಸಿದ್ದಾರೆ.

ನನ್ನ ಸೇವೆ ವಿಚಾರದಲ್ಲಿ ಸುಪ್ರೀಂಕೋರ್ಟ್‌ ನ್ಯಾಯ ನೀಡದರು ಕೆಲವರಿಂದ ಅನ್ಯಾಯವಾಗಿದೆ ಎಂದು ಪತ್ರದಲ್ಲಿ ತನ್ನ ನೋವು ತೋಡಿಕೊಂಡಿದ್ದಾರೆ. ಇನ್ನು ಮೂಲಗಳ ಪ್ರಕಾರ ಬುಧವಾರ ರಾಜ್ಯ ಸರಕಾರ ಮೂವರು ಅಧಿಕಾರಿಗಳಿಗೆ ಡಿಜೆಪಿ ಬಡ್ತಿ ನೀಡಿತ್ತು. ತನಗಿಂತ ಕಿರಿಯ ಅಧಿಕಾರಿಗಳಿಗೆ ಬಡ್ತಿ ನೀಡಿರುವುದರ ಬಗ್ಗೆ ಅಸಮಾಧಾನ ಹೊಂದಿದ್ದರು ಎನ್ನಲಾಗಿದೆ. ಸದ್ಯ ರವೀಂದ್ರನಾಥ್‌ ಅರಣ್ಯ ಇಲಾಖೆಯ ಎಡಿಜಿಪಿಯಾಗಿದ್ದಾರೆ.

ಆರ್‌ ಆರ್‌ ನಗರ: ಕಾಂಗ್ರೆಸ್‌ಗೆ ಕಾರ್ಯಕರ್ತರ ಕೊರತೆಯೇ ಸವಾಲು!

ಫೋಟೊ ತೆಗೆದು ಸುದ್ದಿಯಾಗಿದ್ದ ಅಧಿಕಾರಿ!
2014ರಲ್ಲಿ ಕನ್ನಿಂಗ್ ಹ್ಯಾಂ ರಸ್ತೆಯ ಕಾಫಿ ಶಾಪ್‌ನಲ್ಲಿ ಎಡಿಜಿಪಿ ರವೀಂದ್ರನಾಥ್ ಯುವತಿಯರಿಬ್ಬರ ಫೋಟೊ ತೆಗೆದು ವಿವಾದಕ್ಕೀಡಾಗಿದ್ದರು. ಸಾಮಾನ್ಯ ಉಡುಪಿನಲ್ಲಿದ್ದ ರವೀಂದ್ರನಾಥ್ ಕನ್ನಿಂಗ್ ಹ್ಯಾಂ ರಸ್ತೆಯ ಕಾಫಿ ಶಾಪ್‌ಗೆ ತೆರಳಿದ್ದರು. ಈ ವೇಳೆ ಮುಂದಿನ ಟೇಬಲ್‌ನಲ್ಲಿ ಕುಳಿತ್ತಿದ್ದ ಯುವತಿಯರ ಫೋಟೊ ತೆಗೆದಿದ್ದರು ಎಂದು ಸಂತ್ರಸ್ತರು ಆರೋಪಿಸಿದ್ದರು.

ಈ ಬಗ್ಗೆ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು. ಇನ್ನು ತಮ್ಮ ವಿರುದ್ಧದ ಆರೋಪದಲ್ಲಿ ನಗರ ಪೊಲೀಸ್ ಕಮಿಷನರ್‌ ರಾಘವೇಂದ್ರ ಔರದ್ಕರ್‌ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ಪಿತೂರಿ ಇದೆ ಎಂದು ಪ್ರತಿ ಆರೋಪ ಮಾಡಿದ್ದರು ರವೀಂದ್ರನಾಥ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ