ಆ್ಯಪ್ನಗರ

ಇಸ್ಕಾನ್‌ ಬ್ರಹ್ಮೋತ್ಸವ

ಇಸ್ಕಾನ್‌ನಲ್ಲಿ ಹನ್ನೆರಡು ದಿನಗಳ ಬ್ರಹ್ಮೋತ್ಸವ ಅಂಗವಾಗಿ ಭಾನುವಾರ ರಾಧಾಕೃಷ್ಣರಿಗೆ 'ಸ್ವರ್ಣೇಂದು ಸುಂದರ ಅಲಂಕಾರ' ಸಹಿತ ಮಹಾ ಪಲ್ಲಕ್ಕಿ ಮೆರವಣಿಗೆ ನಡೆಯಿತು.

Vijaya Karnataka 22 Apr 2019, 5:00 am
ಬೆಂಗಳೂರು: ಇಸ್ಕಾನ್‌ನಲ್ಲಿ ಹನ್ನೆರಡು ದಿನಗಳ ಬ್ರಹ್ಮೋತ್ಸವ ಅಂಗವಾಗಿ ಭಾನುವಾರ ರಾಧಾಕೃಷ್ಣರಿಗೆ 'ಸ್ವರ್ಣೇಂದು ಸುಂದರ ಅಲಂಕಾರ' ಸಹಿತ ಮಹಾ ಪಲ್ಲಕ್ಕಿ ಮೆರವಣಿಗೆ ನಡೆಯಿತು.
Vijaya Karnataka Web Kalayanotsava


ಪ್ರತಿ ದಿನ ರಾಧಾಕೃಷ್ಣರಿಗೆ ಒಂದೊಂದು ಬಗೆಯ ಅಲಂಕಾರ ಮಾಡಿ ಪಲ್ಲಕ್ಕಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತಿದೆ. ಭಾನುವಾರ ಬೆಳಗ್ಗೆ ಸ್ವರ್ಣೇಂದು ಸುಂದರ ಅಲಂಕಾರ ಮಾಡಿ ಸೂರ್ಯಪ್ರಭ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು. ಇದಕ್ಕೂ ಮುನ್ನ ದೇವಸ್ಥಾನದಲ್ಲಿ ಕಲ್ಯಾಣೋತ್ಸವ ನಡೆಯಿತು. ಸಂಜೆ ರಾಧಾ ಕುಂಜವಿಹಾರಿ ಅಲಂಕಾರ ಮಾಡಿ ಕಲ್ಪವೃಕ್ಷ ವಾಹನದಲ್ಲಿ ಮೆರವಣಿಗೆ ಕೊಂಡೊಯ್ಯಲಾಯಿತು. ನಂತರ ಪೂಜೆ ನೆರವೇರಿಸಿ ಪ್ರಸಾದ ವಿತರಿಸಲಾಯಿತು. ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಏ.29 ರವರೆಗೆ ಬ್ರಹ್ಮೋತ್ಸವ ನಡೆಯಲಿದೆ. ಏ.27 ರಂದು ವಿಶೇಷವಾಗಿ ಬ್ರಹ್ಮರಥದ ಮೆರವಣಿಗೆ ಜರುಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ