Zameer Ahmed Khan: ಕಾಂಗ್ರೆಸ್ ಶಾಸಕ ಜಮೀರ್ಖಾನ್ ಮನೆ,ಕಚೇರಿ ಮೇಲೆ ಐಟಿ ದಾಳಿ!
ಕಾಂಗ್ರೆಸ್ ಶಾಸಕ ಜಮೀರ್ ಖಾನ್ ಅವರಿಗೆ ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದು, ನ್ಯಾಷನಲ್ಸ್ ಟ್ರಾವೆಲ್ಸ್ ಕಚೇರಿ, ಜಮೀರ್ ಅವರ ಮನೆ, ಫ್ಲ್ಯಾಟ್ ಮೇಲೆ ವಿವಿಧ ತಂಡಗಳಲ್ಲಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ಜಮೀರ್ ಅವರಿಗೆ ಸಂಬಂಧಿಸಿದ ವಿವಿಧ ವ್ಯವಹಾರಗಳ ಕುರಿತು ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ. ಸದ್ಯ ಜಮೀರ್ ಅವರ ಮೊಬೈಲ್ ಫೋನ್ ಸಂಪರ್ಕ ಕಡಿತಗೊಂಡಿದೆ.
Vijaya Karnataka Web 5 Aug 2021, 2:15 pm
ಹೈಲೈಟ್ಸ್:
- ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ಖಾನ್ಗೆ ಐಟಿ ಶಾಕ್
- ಮುಂಜಾನೆ ಆರು ಗಂಟೆಗೆ ಜಮೀರ್ ಮನೆ, ಕಚೇರಿಗೆ ದಾಳಿ
- ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು
ಬೆಂಗಳೂರು: ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಜಮೀರ್ ಅಹ್ಮದ್ಖಾನ್ ಅವರಿಗೆ ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಬೆಳಗ್ಗೆ ಆರು ಗಂಟೆ ಸುಮಾರಿಗೆ ಜಮೀರ್ ಅವರ ಮನೆಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಇನೋವಾ ಕಾರ್ನಲ್ಲಿ ಬಂದಿರುವ ಆರು ಮಂದಿ ಅಧಿಕಾರಿಗಳು ಜಮೀರ್ ಮನೆಯಲ್ಲಿ ಶೋಧ ನಡೆಸುತ್ತಿದ್ದಾರೆ. ದಾಳಿ ವೇಳೆ ಜಮೀರ್ ಅಹ್ಮದ್ಖಾನ್ ಅವರು ಮನೆಯಲ್ಲೇ ಇದ್ದರು ಎಂದು ತಿಳಿದು ಬಂದಿದೆ. ಬೆಂಗಳೂರಿನಲ್ಲಿರುವ ಜಮೀರ್ ಅವರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಲಾಗಿದ್ದು, ಇದರ ಜೊತೆಗೆ ಯುಬಿ ಸಿ.ಟಿಯಲ್ಲಿರುವ ಜಮೀರ್ ಅವರ ಫ್ಲ್ಯಾಟ್ ಮೇಲೂ ಅಧಿಕಾರಿಗಳು ಶೋಧ ನಡೆಸಿದ್ದಾರೆ.
ಐಟಿ ಅಧಿಕಾರಿಗಳು ಎರಡು ಕಾರ್ಗಳಲ್ಲಿ ಜಮೀರ್ ಅವರ ನಿವಾಸಕ್ಕೆ ಬಂದಿದ್ದು, ಸದ್ಯ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ನ್ಯಾಷನಲ್ಸ್ ಟ್ರಾವೆಲ್ಸ್ ಕಚೇರಿ, ಮನೆ, ಫ್ಲ್ಯಾಟ್ ಮೇಲೆ ವಿವಿಧ ತಂಡಗಳಲ್ಲಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ಜಮೀರ್ ಅವರಿಗೆ ಸಂಬಂಧಿಸಿದ ವಿವಿಧ ವ್ಯವಹಾರಗಳ ಕುರಿತು ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ. ಸದ್ಯ ಜಮೀರ್ ಅವರ ಮೊಬೈಲ್ ಫೋನ್ ಸಂಪರ್ಕ ಕಡಿತಗೊಂಡಿದೆ.
ಇತ್ತೀಚೆಗಷ್ಟೇ ತಮ್ಮ ಮಗಳ ಮದುವೆಯನ್ನು ಅದ್ಧೂರಿಯಾಗಿ ನಡೆಸಿದ್ದ ಜಮೀರ್, ಬೆಂಗಳೂರಿನಲ್ಲಿ ಭವ್ಯವಾದ ಮನೆಯನ್ನೂ ಕಟ್ಟಿಸಿದ್ದರು. ಶ್ರೀಲಂಕಾದಲ್ಲೂ ಜಮೀರ್ ಅವರ ವ್ಯವಹಾರಗಳಿದ್ದು, ಇನ್ನೊಂದೆಡೆ ಕಾರ್ಯಕ್ರಮಗಳಲ್ಲಿ ಸಹಾಯ ಕೇಳಿ ಬಂದವರಿಗೆ ಸ್ಥಳದಲ್ಲೇ ಹಣವನ್ನೂ ಜಮೀರ್ ಆಗಾಗ ಹಂಚುತ್ತಿದ್ದರು. ಬಡವರಿಗೆ ಹಣ ಹಂಚೋದು ಮೇಲ್ನೋಟಕ್ಕೆ ಜಮೀರ್ ಅವರ ಒಳ್ಳೆಯತನದಂತೆ ಕಂಡರೂ, ಇವರ ಕಾರ್ಯವೈಖರಿ ಐಟಿ ಅಧಿಕಾರಿಗಳ ಅನುಮಾನಕ್ಕೆ ಕಾರಣವಾಗಿತ್ತು. ಹೀಗಾಗಿ ಜಮೀರ್ ಅವರ ಚಲನವಲನಗಳ ಮೇಲೆ ಕಣ್ಣಿಟ್ಟಿರುವ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಐಟಿ ಅಧಿಕಾರಿಗಳು ಎರಡು ಕಾರ್ಗಳಲ್ಲಿ ಜಮೀರ್ ಅವರ ನಿವಾಸಕ್ಕೆ ಬಂದಿದ್ದು, ಸದ್ಯ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ನ್ಯಾಷನಲ್ಸ್ ಟ್ರಾವೆಲ್ಸ್ ಕಚೇರಿ, ಮನೆ, ಫ್ಲ್ಯಾಟ್ ಮೇಲೆ ವಿವಿಧ ತಂಡಗಳಲ್ಲಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ಜಮೀರ್ ಅವರಿಗೆ ಸಂಬಂಧಿಸಿದ ವಿವಿಧ ವ್ಯವಹಾರಗಳ ಕುರಿತು ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ. ಸದ್ಯ ಜಮೀರ್ ಅವರ ಮೊಬೈಲ್ ಫೋನ್ ಸಂಪರ್ಕ ಕಡಿತಗೊಂಡಿದೆ.
ಇತ್ತೀಚೆಗಷ್ಟೇ ತಮ್ಮ ಮಗಳ ಮದುವೆಯನ್ನು ಅದ್ಧೂರಿಯಾಗಿ ನಡೆಸಿದ್ದ ಜಮೀರ್, ಬೆಂಗಳೂರಿನಲ್ಲಿ ಭವ್ಯವಾದ ಮನೆಯನ್ನೂ ಕಟ್ಟಿಸಿದ್ದರು. ಶ್ರೀಲಂಕಾದಲ್ಲೂ ಜಮೀರ್ ಅವರ ವ್ಯವಹಾರಗಳಿದ್ದು, ಇನ್ನೊಂದೆಡೆ ಕಾರ್ಯಕ್ರಮಗಳಲ್ಲಿ ಸಹಾಯ ಕೇಳಿ ಬಂದವರಿಗೆ ಸ್ಥಳದಲ್ಲೇ ಹಣವನ್ನೂ ಜಮೀರ್ ಆಗಾಗ ಹಂಚುತ್ತಿದ್ದರು. ಬಡವರಿಗೆ ಹಣ ಹಂಚೋದು ಮೇಲ್ನೋಟಕ್ಕೆ ಜಮೀರ್ ಅವರ ಒಳ್ಳೆಯತನದಂತೆ ಕಂಡರೂ, ಇವರ ಕಾರ್ಯವೈಖರಿ ಐಟಿ ಅಧಿಕಾರಿಗಳ ಅನುಮಾನಕ್ಕೆ ಕಾರಣವಾಗಿತ್ತು. ಹೀಗಾಗಿ ಜಮೀರ್ ಅವರ ಚಲನವಲನಗಳ ಮೇಲೆ ಕಣ್ಣಿಟ್ಟಿರುವ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.