ಬೆಂಗಳೂರು: ನಗರದ ಜನತೆಯನ್ನು ಬೆಂಬಿಡದೆ ಕಾಡುತ್ತಿರುವ ರಸ್ತೆ ಗುಂಡಿ ಸಮಸ್ಯೆಯು ತಕ್ಷಣಕ್ಕೆ ಬಗೆಹರಿಯುವ ಲಕ್ಷಣಗಳೇ ಕಾಣುತ್ತಿಲ್ಲ. ವಾಹನ ಸವಾರರು ಗುಂಡಿ ಮುಕ್ತ ರಸ್ತೆಗಳಲ್ಲಿ ಓಡಾಡಲು ವರ್ಷಾಂತ್ಯದವರೆಗೆ ಕಾಯಲೇಬೇಕಂತೆ! ಹೌದು, ರಸ್ತೆಗಳ ನಿರ್ವಹಣೆಯ ಹೊಣೆ ಹೊತ್ತ ಎಂಜಿನಿಯರ್ಗಳೇ ಹೇಳುತ್ತಿರುವ ಮಾತುಗಳಿವು. ಜಲಮಂಡಳಿ ಮತ್ತು ಇತರೆ ಇಲಾಖೆಗಳು ಅಗೆದಿರುವ ರಸ್ತೆಗಳನ್ನು ಹೊರತುಪಡಿಸಿ, ಹೊಂಡ ಗುಂಡಿಗಳಿಂದ ಅಧ್ವಾನವಾಗಿರುವ ರಸ್ತೆಗಳನ್ನು ದುರಸ್ತಿಪಡಿಸಲು 2-3 ತಿಂಗಳು ಕಾಲಾವಕಾಶ ಬೇಕಿದೆ ಎನ್ನುತ್ತಿದ್ದಾರೆ ಅಧಿಕಾರಿಗಳು. ಹೀಗಾಗಿ, ಜನರು ಅಲ್ಲಿಯವರೆಗೆ ಬೆನ್ನು ನೋವಿಗೆ ಸಜ್ಜಾಗಿಯೇ ರಸ್ತೆಗಿಳಿಯಬೇಕಾಗಿದೆ.
ನಗರದಲ್ಲಿ ಗುಂಡಿಗಳಿಲ್ಲದ ಒಂದೇ ಒಂದು ರಸ್ತೆ ಇಲ್ಲ. ಸವಾರರು ಬೆನ್ನು ಮೂಳೆ ಮುರಿದುಕೊಳ್ಳಲಿ, ಗುಂಡಿಗಳನ್ನು ತಪ್ಪಿಸಲು ಹೋಗಿ ಬಿದ್ದು ಗಾಯಗೊಳ್ಳಲಿ, ಇಲ್ಲವೇ ಪ್ರಾಣವನ್ನೇ ಕಳೆದುಕೊಳ್ಳಲಿ. ಅದಕ್ಕೂ ತನಗೂ ಸಂಬಂಧವೇ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ ಸಂಬಂಧಪಟ್ಟ ಎಂಜಿನಿಯರ್ಗಳು. ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಅವರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಗುಂಡಿಗಳನ್ನು ಮುಚ್ಚಲು 15 ದಿನಗಳ ಗಡುವು ಕೊಟ್ಟಿದ್ದರು. ಆ ಗಡುವು ಮೀರಿ ತಿಂಗಳು ಕಳೆದರೂ ರಸ್ತೆ ಗುಂಡಿ ಸಮಸ್ಯೆ ಬಗೆಹರಿದಿಲ್ಲ.
ವಾರ್ಡ್ ರಸ್ತೆಗಳಲ್ಲಿ ಗುಂಡಿ ಮುಚ್ಚುವ ಕೆಲಸವೇ ಶುರುವಾಗಿಲ್ಲ. ಪ್ರಮುಖ ರಸ್ತೆ, ವಾರ್ಡ್ ರಸ್ತೆಗಳಷ್ಟೇ ಅಲ್ಲ; ಮೇಲ್ಸೇತುವೆಗಳು ಕೂಡ ಗುಂಡಿಗಳಿಂದ ತುಂಬಿಕೊಂಡಿವೆ. ಒಂದೆಡೆ ಮೆಟ್ರೊ ಕಾಮಗಾರಿಯ ಭರಾಟೆ, ಮತ್ತೊಂದು ಕಡೆ ಮೇಲ್ಸೇತುವೆ, ಕೆಳಸೇತುವೆಗಳ ನಿರ್ಮಾಣದ ಆರ್ಭಟ, ಇನ್ನೊಂದೆಡೆ ಟೆಂಡರ್ಶ್ಯೂರ್, ವೈಟ್ಟಾಪಿಂಗ್ ಕಾಮಗಾರಿಗಳ ಅಬ್ಬರದಿಂದ ಹೈರಾಣಾಗಿ ಹೋಗಿರುವ ವಾಹನ ಸವಾರರಿಗೆ ಗುಂಡಿ ಬಿದ್ದು ಅಧ್ವಾನವಾಗಿರುವ ರಸ್ತೆಗಳಿಂದಲೂ ಮುಕ್ತಿ ಸಿಗದಂತಾಗಿದೆ.
14 ದಿನದಲ್ಲಿ ಬಿಬಿಎಂಪಿ ಆಡಳಿತಾವಧಿ ಮುಕ್ತಾಯ, ಅರೆಬರೆ ಕಾಮಗಾರಿ ತರಾತುರಿ ಉದ್ಘಾಟನೆ ಆರಂಭ!
ವರ್ಷಾಂತ್ಯದೊಳಗೆ ರಸ್ತೆಗಳು ಗುಂಡಿಮುಕ್ತ?
ಪ್ರತಿ ವರ್ಷದ ಮಳೆಗಾಲದಲ್ಲೂ ಗುಂಡಿ ಬಿದ್ದು ಹದಗೆಟ್ಟು ಹೋಗುತ್ತಿರುವ ರಸ್ತೆಗಳು ನಗರದ ನಿವಾಸಿಗಳನ್ನು ತೀವ್ರವಾಗಿ ಬಾಧಿಧಿಸುತ್ತಿವೆ. ಮಳೆಯಿಂದ ಸಣ್ಣಪುಟ್ಟ ಗುಂಡಿಗಳು ಹೊಂಡಗಳಾಗಿ ಮಾರ್ಪಡುತ್ತಿವೆ. ಕಳಪೆ ಕಾಮಗಾರಿಯಿಂದಾಗಿ ಡಾಂಬರು ಕಿತ್ತು ಬಂದು ರಸ್ತೆಗಳು ಅಸ್ಥಿ ಪಂಜರಗಳಂತಾಗುತ್ತಿವೆ. ಇದರಿಂದ ವಾಹನ ದಟ್ಟಣೆ ಉಂಟಾಗುತ್ತಿದ್ದು, ಸಾರ್ವಜನಿಕರು ತಾಸುಗಟ್ಟಲೇ ರಸ್ತೆಗಳಲ್ಲೇ ಸಮಯ ಕಳೆಯುವಂತಾಗಿದೆ.
ಇದೇನು ರಸ್ತೆಯೋ ಕೆಸರು ಗದ್ದೆಯೋ, ಜಲಮಂಡಳಿ ಕಾಮಗಾರಿಯಿಂದ ಗಬ್ಬು ನಾರುತ್ತಿದೆ ಚಿಕ್ಕಪೇಟೆ ರಸ್ತೆ
''ನಗರದ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಲೆಕ್ಕ ಹಾಕಿಕೊಂಡು ಕುಳಿತುಕೊಳ್ಳಲಾಗುವುದಿಲ್ಲ. ಮಳೆಯಿಂದ ಹೊಸದಾಗಿ ಗುಂಡಿಗಳು ಸೃಷ್ಟಿಯಾಗುತ್ತಲೇ ಇದ್ದು, ದುರಸ್ತಿ ಕಾರ್ಯ ನಡೆಯುತ್ತಲೇ ಇದೆ. ಡಾಂಬರಿನ ಮೇಲ್ಪದರವು ಕಿತ್ತು ಬಂದಿರುವ ರಸ್ತೆಗಳ ಸಂಖ್ಯೆ ಜಾಸ್ತಿ ಇದೆ. ಹೀಗಾಗಿ, ಅಷ್ಟೂ ಉದ್ದಕ್ಕೆ ಡಾಂಬರು ಹಾಕಬೇಕಿದೆ. ವರ್ಷಾಂತ್ಯದೊಳಗೆ ಎಲ್ಲರಸ್ತೆಗಳನ್ನು ಗುಂಡಿ ಮುಕ್ತಗೊಳಿಸಲಾಗುವುದು,'' ಎಂದು ಪಾಲಿಕೆಯ ರಸ್ತೆ ಮೂಲಸೌಕರ್ಯ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು.
ರಸ್ತೆ ಅಗೆತಕ್ಕೆ 2 ತಿಂಗಳು ಮೀಸಲು:
''ಜಲಮಂಡಳಿ, ಬೆಸ್ಕಾಂ, ಕೆಪಿಟಿಸಿಎಲ್ ಮತ್ತು ಗೇಲ್ ಕಂಪೆನಿಯು ಪ್ರತಿ ವರ್ಷವೂ ಮೂಲಸೌಕರ್ಯಕ್ಕಾಗಿ ರಸ್ತೆಗಳನ್ನು ಅಗೆದು ಹಾಕುತ್ತಿವೆ. ಇದರಿಂದ ಹೊಸದಾಗಿ ಅಭಿವೃದ್ಧಿಪಡಿಸಿದ, ಡಾಂಬರು ಹಾಕಲಾದ ರಸ್ತೆಗಳು ಕೂಡ ಹಾಳಾಗುತ್ತಿದ್ದು, ದುರಸ್ತಿ ಕಾರ್ಯ ವಿಳಂಬವಾಗುತ್ತಿದೆ. ಆದ ಕಾರಣ, ವರ್ಷಾಂತ್ಯದ ಎರಡು ತಿಂಗಳು ಮಾತ್ರ ರಸ್ತೆ ಅಗೆತಕ್ಕೆ ಅನುಮತಿ ನೀಡಲು ಚಿಂತನೆ ನಡೆಸಲಾಗಿದೆ. ಇದರಿಂದ ಮಳೆಗಾಲ ಶುರುವಾಗುವ ವೇಳೆಗೆ ಅಗೆದಿರುವ ರಸ್ತೆಗಳನ್ನು ದುರಸ್ತಿಪಡಿಸಲು ಸಾಧ್ಯವಾಗಲಿದೆ,'' ಎಂದು ಹೇಳಿದರು. ವಾರ್ಡ್ ರಸ್ತೆಗಳಲ್ಲಿ ಬಿದ್ದ ಗುಂಡಿಗಳನ್ನು ತಕ್ಷಣ ಮುಚ್ಚಲು ಕ್ರಮ ವಹಿಸದ ಸಂಬಂಧಪಟ್ಟ ಎಇ, ಎಇಇ ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಹೇಳಿತ್ತು. ಅಲ್ಲದೇ 12 ಎಂಜಿನಿಯರ್ಗಳಿಗೆ ತಲಾ 1000 ರೂ. ದಂಡ ಕೂಡ ಹಾಕಲಾಗಿತ್ತು. ನೆಪ ಮಾತ್ರಕ್ಕೆ ಬೆರಳೆಣಿಕೆಯಷ್ಟು ಮಂದಿ ವಿರುದ್ಧ ಮಾತ್ರ ಕ್ರಮ ಜರುಗಿಸಲಾಯಿತು. ಹೀಗಾಗಿ, ಎಂಜಿನಿಯರ್ಗಳು ಅಸಡ್ಡೆ ತೋರುವುದು ಮುಂದುವರಿದಿದೆ.
ಸ್ವಂತ ವಾಹನದಲ್ಲಿ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸುವ ಬಾಳೇಶ್ ಟೇಲರ್ ಸ್ವಚ್ಛತೆಯ ರಾಯಭಾರಿ ಬಾಳೇಶ್ ಟೇಲರ್
ಚ.ಮೀ ದುರಸ್ತಿಗೆ 800 ರಿಂದ 1350 ರೂ. ದರ:
''ಬಿಬಿಎಂಪಿ ವ್ಯಾಪ್ತಿಯ ವಾರ್ಡ್ ರಸ್ತೆಗಳಲ್ಲಿಬಿದ್ದಿರುವ ಗುಂಡಿಗಳ ದುರಸ್ತಿ ಕಾರ್ಯಕ್ಕೆ ವಲಯವಾರು ಟೆಂಡರ್ ಕರೆದು, ಅಂತಿಮಗೊಳಿಸಲಾಗಿದೆ. ಪ್ರತಿ ಚ.ಮೀ ಗುಂಡಿ ದುರಸ್ತಿ ಕಾರ್ಯಕ್ಕೆ 850 ರೂ. ನಿಂದ 1350 ರೂ. ದರ ಪಾವತಿಸಲಾಗುವುದು. ಟೆಂಡರ್ ಪಡೆದ ಗುತ್ತಿಗೆದಾರರು ಕಾರ್ಮಿಕರು ಮತ್ತು ಯಂತ್ರೋಪಕರಣಗಳನ್ನಷ್ಟೇ ಬಳಸಿಕೊಂಡು ಗುಂಡಿಗಳನ್ನು ಮುಚ್ಚಲಿದ್ದಾರೆ. ಪಾಲಿಕೆಯ ಘಟಕದಿಂದಲೇ ಡಾಂಬರು ಪೂರೈಸಲಾಗುತ್ತದೆ,'' ಎಂದು ಅಧಿಕಾರಿ ಮಾಹಿತಿ ನೀಡಿದರು. ''ಕಣ್ಣೂರು ಬಳಿ ಪಾಲಿಕೆಯಿಂದ ಸ್ಥಾಪಿಸಿರುವ ಡಾಂಬರು ಘಟಕದ ನಿರ್ವಹಣೆ, ಕಾರ್ಯಾಚರಣೆಯನ್ನು ಸಂಸ್ಥೆಯೊಂದಕ್ಕೆ ಗುತ್ತಿಗೆಗೆ ನೀಡಲಾಗಿದೆ. ಪ್ರತಿ ಕ್ಯೂಬಿಕ್ ಮೀಟರ್ ಡಾಂಬರು ಉತ್ಪಾದನೆಗೆ 7200 ರೂ. ದರ ನೀಡಲಾಗುತ್ತಿದೆ. ವಾರ್ಡ್ ರಸ್ತೆಗಳಲ್ಲಿ ಸೆ. 28ರಿಂದ ಗುಂಡಿಗಳನ್ನು ಮುಚ್ಚುವ ಕೆಲಸ ಆರಂಭವಾಗಲಿದೆ,'' ಎಂದು ತಿಳಿಸಿದರು.
ಅಕ್ರಮ ತಡೆಯಲು ಎಲ್ಲ ಬಿಬಿಎಂಪಿ ಕಚೇರಿಗೂ ಸಿಸಿಟಿವಿ: ಸಂಜೆ 7ರ ನಂತರ ಕೆಲಸ ಮಾಡಂಗಿಲ್ಲ..!
2790 ಕಿ.ಮೀ ಉದ್ದದ ರಸ್ತೆಗಳ ಅಗೆತ
ಜಲಮಂಡಳಿ ಮತ್ತು ಇತರೆ ಇಲಾಖೆಗಳು 12453 ಕಿ.ಮೀ ಉದ್ದದ 85310 ವಾರ್ಡ್ ರಸ್ತೆಗಳ ಪೈಕಿ 11237 ರಸ್ತೆಗಳಲ್ಲಿ2790 ಕಿ.ಮೀ ಉದ್ದದಷ್ಟು ರಸ್ತೆಗಳನ್ನು ಕುಡಿಯುವ ನೀರು, ಒಳಚರಂಡಿ ಕೊಳವೆ, ಅನಿಲ ಪೂರೈಕೆ ಕೊಳವೆ, ವಿದ್ಯುತ್ ಕೇಬಲ್ ಅಳವಡಿಕೆಗಾಗಿ ಅಗೆದು ಹಾಕಿವೆ. ಇದಲ್ಲದೇ 5631 ರಸ್ತೆಗಳಲ್ಲಿ928 ಕಿ.ಮೀ ಮಾರ್ಗವು ಗುಂಡಿ ಬಿದ್ದು ಹಾಳಾಗಿದೆ. ಪಾಲಿಕೆಯ 474 ಆರ್ಟೀರಿಯಲ್, ಸಬ್ ಆರ್ಟೀರಿಯಲ್ ರಸ್ತೆಗಳ ಪೈಕಿ 357 ರಸ್ತೆಗಳು ರಸ್ತೆಗಳು ಗುಂಡಿಮುಕ್ತವಾಗಿದ್ದು, ಇನ್ನು 117 ರಸ್ತೆಗಳ ದುರಸ್ತಿ ಕಾರ್ಯ ಮುಗಿದಿಲ್ಲ. ಈವರೆಗೆ 138 ಲೋಡ್ನಷ್ಟು ಡಾಂಬರನ್ನು ಘಟಕದಿಂದ ತರಿಸಿಕೊಂಡು 47274 ಚ.ಮೀ ನಷ್ಟು ರಸ್ತೆಯನ್ನು ದುರಸ್ತಿಪಡಿಸಲಾಗಿದೆ