ಆ್ಯಪ್ನಗರ

ಅನುದಾನ ತಾರತಮ್ಯ; ಅಮರಣಾಂತ ಉಪವಾಸ ಸತ್ಯಾಗ್ರಹದ ಎಚ್ಚರಿಕೆ ಕೊಟ್ಟ ಡಾ ಅನ್ನದಾನಿ

ಸರಕಾರ ‌ಕೊಟ್ಟ ಭರವಸೆಯನ್ನು ಈಡೇರಿಸಬೇಕು, ನನ್ನ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಕೊಟ್ಟ 200 ಕೋಟಿ ಎಲ್ಲಿ ಹೋಯಿತು? ಜನರಿಗೆ ಏನು ಉತ್ತರ ಕೊಡಬೇಕು, ಮಾತೆತ್ತಿದರೆ ಕೊರೊನಾ ಅಂತೀರಾ ಆದರೆ ಈ ಸಂದರ್ಭದಲ್ಲಿ ಊಟ, ನಿದ್ದೆ ಯಾವುದೇ ಮಾಡಿಲ್ವಾ?

Vijaya Karnataka Web 21 Sep 2021, 11:02 pm
ಬೆಂಗಳೂರು: ಕ್ಷೇತ್ರಕ್ಕೆ ಅನುದಾನ ನೀಡಿಲ್ಲ ಎಂದು ಆರೋಪಿಸಿ ಮಳವಳ್ಳಿ ಜೆ ಡಿ ಎಸ್ ಶಾಸಕ ಡಾ. ಕೆ ಅನ್ನದಾನಿ ಆಕ್ರೋಶ ವ್ಯಕ್ತಪಡಿಸಿ ಅಮರಣಾಂತ ಉಪವಾಸ ಸತ್ಯಾಗ್ರಹದ ಎಚ್ಚರಿಕೆ ನೀಡಿದರು. ‌ವಿಧಾನಸಭೆಯಲ್ಲಿ ನಿಯಮ 69ರ ಅಡಿಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ಅನುದಾನ ತಾರತಮ್ಯ ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು. ‌
Vijaya Karnataka Web ಡಾ ಕೆ ಅನ್ನದಾನಿ
ಡಾ ಕೆ ಅನ್ನದಾನಿ


ಸಿಎಂ ಇಡೀ ರಾಜ್ಯವನ್ನು ಅಭಿವೃದ್ಧಿ ಮಾಡಬೇಕೇ ಹೊರತು ತಮ್ಮ ಪಕ್ಷದ ಶಾಸಕರ ಕ್ಷೇತ್ರದ್ದು ಮಾತ್ರ ಅಲ್ಲ. ಮುಖ್ಯಮಂತ್ರಿಗಳು ಯಾವುದೇ ರೀತಿಯಲ್ಲಿ ತಾರತಮ್ಯ ಮಾಡಬಾರದು ಎಂದು ಮನವಿ ಮಾಡಿದರು.

ಸರಕಾರ ‌ಕೊಟ್ಟ ಭರವಸೆಯನ್ನು ಈಡೇರಿಸಬೇಕು, ನನ್ನ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಕೊಟ್ಟ 200 ಕೋಟಿ ಎಲ್ಲಿ ಹೋಯಿತು? ಜನರಿಗೆ ಏನು ಉತ್ತರ ಕೊಡಬೇಕು, ಮಾತೆತ್ತಿದರೆ ಕೊರೊನಾ ಅಂತೀರಾ ಆದರೆ ಈ ಸಂದರ್ಭದಲ್ಲಿ ಊಟ, ನಿದ್ದೆ ಯಾವುದೇ ಮಾಡಿಲ್ವಾ? ಎಂದು ಪ್ರಶ್ನಿಸಿದರು.

ಬೇರೆ ಕ್ಷೇತ್ರಗಳಿಗೆ ಅನುದಾನ ಕೊಟ್ಟಿದ್ದೀರಿ, ನಮಗೂ ಕೊಡಿ ಎಂದ ಅವರು, ನಮ್ಮ ರಕ್ಷಣೆಯನ್ನು ನೀವು ಮಾಡಬೇಕು ಎಂದು ಸ್ಪೀಕರ್ ಗೆ ಮನವಿ ಮಾಡಿದ ಅವರು, ಇಲ್ಲಾಂದ್ರೆ ವಿರೋಧ ಪಕ್ಷದವರಿಗೆ ಅನುದಾನ ಕೊಡಲ್ಲ ಎಂದು ಹೇಳಿ. ಬಜೆಟ್ ನಲ್ಲಿ ಮೀಸಲಿಟ್ಟ 200 ಕೋಟಿ ಎಲ್ಲಿ ಹೋಯಿತು? ಈ ಬಗ್ಗೆ ಭರವಸೆ ಕೊಡಬೇಕು. ಮೀಸಲು ಕ್ಷೇತ್ರದ ಎಂದು ಕಡಗಣನೆ ಮಾಡಬಾರದು. ಇಲ್ಲಾಂದ್ರೆ ಬಾವಿಗೆ ಇಳಿದು ಅಮರಣಾಂತ ಉಪವಾಸ ಸತ್ಯಾಗ್ರಹದ ಎಚ್ಚರಿಕೆಯನ್ನು ಡಾ. ಅನ್ನದಾನಿ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ