ಆ್ಯಪ್ನಗರ

ಜೆಡಿಎಸ್‌ಗೆ ಅಧಿಕಾರ: ಮಹಿಳೆಗೆ ಭರಪೂರ ಮಾಸಾಶನ

ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಭರಪೂರ ಮಾಶಾಸನ ಸಿಗಲಿದೆಯಂತೆ.

ವಿಕ ಸುದ್ದಿಲೋಕ 20 Jul 2017, 3:37 pm
ಬೆಂಗಳೂರು: ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಭರಪೂರ ಮಾಶಾಸನ ಸಿಗಲಿದೆಯಂತೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ 70 ವರ್ಷ ಮೇಲ್ಪಟ್ಟವರಿಗೆ 5 ಸಾವಿರ ರೂ., ಅಂಗವಿಕಲರಿಗೆ ಮತ್ತು ವಿಧವೆಯರಿಗೆ 2 ಸಾವಿರ ರೂ., 6ನೇ ತಿಂಗಳ ಗರ್ಭಿಣಿಗೆ 6 ಸಾವಿರ ರೂ. ಮಾಸಾಶನ ನೀಡಲಾಗುವುದು ಎಂದು ಜೆಡಿಎಸ್‌ ಮುಖಂಡ ಕುಮಾರಸ್ವಾಮಿ ಹೇಳಿದ್ದಾರೆ.
Vijaya Karnataka Web jds women conference
ಜೆಡಿಎಸ್‌ಗೆ ಅಧಿಕಾರ: ಮಹಿಳೆಗೆ ಭರಪೂರ ಮಾಸಾಶನ


ಜೆಡಿಎಸ್‌ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಕುಮಾರಸ್ವಾಮಿ, ಹೆರಿಗೆಯಾಗಿ ಮೂರು ತಿಂಗಳವರೆಗೆ ಮಹಿಳೆಗೆ ಮಾಸಾಶನ ನೀಡಲಾಗುವುದು.
ಪ್ರತಿ ವರ್ಷ 10 ಕೋಟಿ ಗಿಡ ನೆಡುವ ಜತೆಗೆ ಗಿಡ ನೆಟ್ಟು ಬೆಳೆಸುವವರಿಗೆ 6 ಸಾವಿರ ಸಂಬಳ ನೀಡುವ ಮೂಲಕ 5 ಲಕ್ಷ ಉದ್ಯೋಗ ಸೃಷ್ಟಿ ಮಾಡುವುದಾಗಿ ಅವರು ಹೇಳಿದರು.

ದಲಿತರ ಮತ್ತು ಹಿಂದುಳಿದ ವರ್ಗದವರ ಶಿಕ್ಷಣಕ್ಕೆ 85 ಸಾವಿರ ಕೋಟಿ ರೂ. ಖರ್ಚು ಮಾಡಿರುವುದಾಗಿ ಸಿಎಂ ಹೇಳುತ್ತಾರೆ. ಆದರೆ ಪ್ರತಿಭಾವಂತರ ಸ್ಥಿತಿಗತಿ ಏನಿದೆ ಅನ್ನುವುದನ್ನು ಸಿಎಂ ಸರ್ವೆ ಮಾಡಿಸಿ ನೋಡಬೇಕು. ಸರಕಾರ ಕೊಟ್ಟ ಕಾರ್ಯಕ್ರಮ ಎಷ್ಟರ ಮಟ್ಟಿಗೆ ಬಡವರನ್ನು ತಲುಪಿದೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಖಾಸಗಿ ಶಾಲೆಗಳ ಮಟ್ಟಕ್ಕೆ ಸರಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯ ಒದಗಿಸುವುದಾಗಿ ಹೇಳಿದರು.

ಮಹಿಳಾ ಮೀಸಲು ಜಾರಿಗೆ ದೇವೇಗೌಡ ಆಗ್ರಹ

ನಿರೀಕ್ಷೆಗೆ ಮೀರಿ ಇವತ್ತು ಮಹಿಳೆಯರು ಸಮಾವೇಶಕ್ಕೆ ಬಂದಿದ್ದಾರೆ. ರಾಜಕೀಯದಲ್ಲಿ ಮಹಿಳೆಯರಿಗೆ ಶೇಕಡ 33ರಷ್ಟು ಮೀಸಲು ನೀಡಬೇಕು. 1996 ರಲ್ಲಿ ಮಹಿಳಾ ಮೀಸಲು ಮಸೂದೆ ಮಂಡಿಸಿದ್ದೆ. ಅದು ಐತಿಹಾಸಿಕ ದಿನ. ರಾಜ್ಯಸಭೆಯಲ್ಲಿ ಮಸೂದೆ ಪಾಸ್ ಆದರೂ ಲೋಕಸಭೆಯಲ್ಲಿ ಪಾಸ್ ಆಗಿರಲಿಲ್ಲ. ಈಗ ನರೇಂದ್ರ ಮೋದಿ ಮಸೂದೆ ಜಾರಿಗೆ ಮುಂದಾಗಬೇಕು. ಎಲ್ಲ ಸಮುದಾಯದವರಿಗೆ ಅಧಿಕಾರ ಹಂಚಿಕೆಯಾಗಬೇಕು ಎಂದು ಜೆಡಿಎಸ್‌ ವರಿಷ್ಠ ದೇವೇಗೌಡ ಹೇಳಿದರು.

ಕುಮಾರಣ್ಣ ಮುಖ್ಖಮಂತ್ರಿಯಾಗಲೇಬೇಕೆಂದು ನೀವೆಲ್ಲರೂ ಬಯಿಸಿದ್ದೀರಿ. ಕುಮಾರಣ್ಣ ಮುಖ್ಖಮಂತ್ರಿಯಾಗಲೇಬೇಕು. ತಮಿಳುನಾಡನಲ್ಲಿ ಜಯಲಲಿತಾ ಮುಖ್ಯಮಂತ್ರಿಯಾಗಿದ್ದರು. ನಮ್ಮ ರಾಜ್ಯದಲ್ಲಿ ಆ ರೀತಿ ಪರಿಸ್ಥಿತಿ ಬರಬಹುದು. ಆ ನಿಟ್ಟಿನಲ್ಲಿ ರಾಜ್ಯದಲ್ಲಿ ಮಹಿಳೆಯರು ಹೋರಾಟ ಮಾಡಬೇಕು ಎಂದರು.

ಜೆಡಿಎಸ್ ಬಂಡಾಯ ಶಾಸಕರ ವಿರುದ್ಧ ಮಾಜಿ ಸಚಿವೆ ಲೀಲಾದೇವಿ ಆರ್ ಪ್ರಸಾದ್ ವಾಗ್ದಾಳಿ ನಡೆಸಿದರು.ಈ ಮನೆಯಲ್ಲಿ ಊಟ ಮಾಡಿಇವರ ಹೆಸರು ಹೇಳಿ ಹೇಳಿ ದುಡ್ಡು ಮಾಡಿಕೊಂಡು ಈಗ ಇವರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಪಕ್ಷ ಬಿಟ್ಟು ಹೋಗುತ್ತಿದ್ದಾರೆ, ಮುಂದಿನ ಚುನಾವಣೆಯಲ್ಲಿ ಅವಗೆ ಯಾರು ಮತ ಹಾಕಬೇಡಿ.
ಮಹಿಳೆಯರಂತೂ ಅವರಿಗೆ ಮತ ಹಾಕಲೇಬೇಡಿ. ಗಂಡನನ್ನು ಬಿಟ್ಟು ಹೋಗಿದ್ದಾರೆ ಎನ್ನುವಂತಾಗಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ