ಬೆಂಗಳೂರು: ಸ್ನೇಹಿತನ ಹುಟ್ಟುಹಬ್ಬವೆಂದು ಹೇಳಿ ರಾತ್ರಿ ಹೋದವನು ಬೆಳಗ್ಗೆ ಮನೆ ಸೇರಲಿಲ್ಲ.. ಬೈಕ್ ತಾಗಿದೆ ಎಂಬ ಸಣ್ಣ ವಿಷಯಕ್ಕೆ ದುರುಳರು ನನ್ನ ಮಗನನ್ನು ಕೊಂದುಬಿಟ್ಟರು ಎಂದು ನಗರದ ಜೆಜೆ ನಗರದಲ್ಲಿ ಕ್ಷುಲ್ಲಕ ವಿಚಾರಕ್ಕೆ ಕೊಲೆಯಾದ ಮೃತ ಚಂದ್ರುವಿನ ತಾಯಿ ಕಣ್ಣೀರು ಹಾಕಿದ್ದಾರೆ.
ಹೆತ್ತ ಮನಗನ್ನು ಕಳೆದುಕೊಂಡ ಸಂಕಟಲ್ಲಿ ಚಂದ್ರುವಿನ ತಾಯಿ ಅಸಹಾಯಕರಾಗಿ ಕಣ್ಣೀರಿಡುತ್ತಿದ್ದರೆ, ಅಲ್ಲಿದ್ದವರ ಕಣ್ಣ ಬಟ್ಟಲು ತುಂಬಿ ಹನಿಗಳು ಕಪೋಲದಲ್ಲಿ ಜಾರಿ ಗಲ್ಲ ಸೇರಿ ಮಾಯವಾಗುತ್ತಿದ್ದವು.
ಐಟಿಐ ಮುಗಿಸಿದ್ದ ನನ್ನ ಮಗ ಯಾರ ತಂಟೆಗೂ ಹೋಗದೇ ತನ್ನ ಕೆಲಸವಷ್ಟೇ ಮಾಡುತ್ತಿದ್ದ. ಕಳೆದ ಒಂದು ತಿಂಗಳಿಂದ ಅಂಪ್ರೆಟಿಸ್ ರೈಲ್ವೆ ಇಲಾಖೆ ವಿಭಾಗದಲ್ಲೂ ಕೆಲಸ ಮಾಡುತ್ತಿದ್ದ. ಆತನಿಗೆ ರಾತ್ರಿ ಪಾಳಿಯಲ್ಲಿ ಕೆಲಸಕ್ಕೆ ನಿಯೋಜಿಸಿದ್ದರಿಂದ ಏನಾದರೂ ತೊಂದರೆಯಾಗಬಹುದು ಎಂದು ಕೆಲಸ ಬಿಡಿಸಿದ್ದು, ಹತ್ತು ದಿನಗಳಿಂದ ಮನೆಯಲ್ಲಿದ್ದ ಎಂದು ಹೇಳಿದರು.
ಇನ್ನು ಚಂದ್ರುವಿನ ಸಂಬಂಧಿಕರೊಬ್ಬರು ಮಾತನಾಡಿ, 'ಕರ್ನಾಟಕದಲ್ಲಿ ಕನ್ನಡ ತಾನೆ ಮಾತಾಡಬೇಕು. ಉರ್ದು ಬರಲಿಲ್ಲಅಂತ ಅವನನ್ನು ಸಾಯಿಸಿಬಿಡೋದಾ? ಇನ್ಯಾವ ತಾಯಿಗೂ ಈ ಸ್ಥಿತಿ ಬರಬಾರದು. ನಮಗೆ ನ್ಯಾಯ ಕೊಡಿಸಬೇಕು ಎಂದು ಕಣ್ಣೀರು ಹಾಕಿದರು.
ಚಿಕನ್ ರೋಲ್ ತರಲು ಹೋದಾಗ ಕೊಲೆ
ಗೂಡ್ಸ್ ಶೆಡ್ ರಸ್ತೆಯಲ್ಲಿರುವ ರೈಲ್ವೆ ವಿಭಾಗ ಕೇಂದ್ರದಲ್ಲಿ ಒಂದು ತಿಂಗಳಿಂದ ಉದ್ಯೋಗ ತರಬೇತಿ ಪಡೆಯುತ್ತಿದ್ದ ಚಂದ್ರು, ಸ್ನೇಹಿತ ಸೈಮನ್ನ ಹುಟ್ಟುಹಬ್ಬ ಆಚರಿಸಲೆಂದು ರಾತ್ರಿ ಆತನ ಮನೆಗೆ ಹೋಗಿದ್ದ. ಅಲ್ಲಿ ಮೂರ್ನಾಲ್ಕು ಮಂದಿ ಸ್ನೇಹಿತರು ಒಟ್ಟಾಗಿ ಮದ್ಯದ ಪಾರ್ಟಿ ಮಾಡಿದ್ದರು. ಈ ವೇಳೆ ಚಿಕನ್ ರೋಲ್ ಕೊಡಿಸುವಂತೆ ಸೈಮನ್ ಬಳಿ ಚಂದ್ರು ಕೇಳಿದ್ದ. ಹಾಗಾಗಿ, ಇಬ್ಬರು ಚಿಕನ್ ರೋಲ್ ಹುಡುಕಿಕೊಂಡು ತಡರಾತ್ರಿ ಬೈಕ್ನಲ್ಲಿ ಜೆಜೆನಗರದ ಬಳಿ ತಿರುಗಾಡಿದ್ದರು.
ಹಳೇಗುಡ್ಡದ ಹಳ್ಳಿಯ ಕಾವೇರಿ ಆಶ್ರಮ ಶಾಲೆ ಸಮೀಪ ಬೈಕ್ ಚಲಾಯಿಸುತ್ತಿದ್ದ ಚಂದ್ರು ನಿಯಂತ್ರಣ ತಪ್ಪಿ ಮುಂದಿನಿಂದ ಬರುತ್ತಿದ್ದ ಆರೋಪಿ ಶಾಹೀದ್ ಬೈಕ್ಗೆ ಡಿಕ್ಕಿ ಹೊಡೆದಿದ್ದ. ಆದರೆ, ಯಾರಿಗೂ ಗಾಯಗಳಾಗಿರಲಿಲ್ಲ. ಈ ನಡುವೆ, ಸರಿಯಾಗಿ ಬೈಕ್ ಚಲಾಯಿಸುವಂತೆ ಶಾಹೀದ್ಗೆ ಚಂದ್ರು ಬೆದರಿಸಿದ್ದ. ಇದರಿಂದ ಕೆರಳಿದ ಶಾಹೀದ್, ತನ್ನ ಸ್ನೇಹಿತರನ್ನು ಸ್ಥಳಕ್ಕೆ ಕರೆಸಿ ಚಂದ್ರು ಹಾಗೂ ಸೈಮನ್ ಜತೆ ಜಗಳ ಮಾಡಿದ್ದ. ಜಗಳ ತಾರಕಕ್ಕೆ ಹೋದಾಗ ಶಾಹೀದ್ ತನ್ನ ಬಳಿಯಿದ್ದ ಚೂರಿಯಿಂದ ಚಂದ್ರು ತೊಡೆಗೆ ಇರಿದು ಪರಾರಿಯಾಗಿದ್ದ.
ಇತ್ತ ಗಂಭೀರವಾಗಿ ಗಾಯಗೊಂಡಿದ್ದ ಚಂದ್ರುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದರೂ, ತೀವ್ರ ರಕ್ತಸ್ರಾವ ಉಂಟಾದ ಪರಿಣಾಮ ತಡರಾತ್ರಿ 3.15 ಕ್ಕೆ ಮೃತಪಟ್ಟಿದ್ದಾನೆ.
ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ
ಜೆಜೆ ನಗರ ಪೊಲೀಸರು ಕೃತ್ಯ ನಡೆದ ಸ್ಥಳಕ್ಕೆ ಧಾವಿಸಿ ಸಿಸಿಕ್ಯಾಮೆರಾ ಪರಿಶೀಲಿಸಿದಾಗ ಆರೋಪಿಗಳು ಕೊಲೆ ಮಾಡಿರುವ ದೃಶ್ಯ ಪತ್ತೆಯಾಗಿತ್ತು. ಈ ಆಧಾರದ ಮೇಲೆ ಶಾಹೀದ್ ಹಾಗೂ ಆತನ ಇಬ್ಬರು ಸ್ನೇಹಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಾಧಿಹೀದ್ ಚಪ್ಪಲಿ ಅಂಗಡಿ ಇಟ್ಟುಕೊಂಡಿದ್ದು, ವ್ಯಾಪಾರ ಮುಗಿಸಿ ಎಂದಿನಂತೆ ಮನೆಗೆ ವಾಪಸಾಗುತ್ತಿದ್ದ ಎಂದು ತಿಳಿದು ಬಂದಿದೆ. ಜೆಜೆನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆತ್ತ ಮನಗನ್ನು ಕಳೆದುಕೊಂಡ ಸಂಕಟಲ್ಲಿ ಚಂದ್ರುವಿನ ತಾಯಿ ಅಸಹಾಯಕರಾಗಿ ಕಣ್ಣೀರಿಡುತ್ತಿದ್ದರೆ, ಅಲ್ಲಿದ್ದವರ ಕಣ್ಣ ಬಟ್ಟಲು ತುಂಬಿ ಹನಿಗಳು ಕಪೋಲದಲ್ಲಿ ಜಾರಿ ಗಲ್ಲ ಸೇರಿ ಮಾಯವಾಗುತ್ತಿದ್ದವು.
ಐಟಿಐ ಮುಗಿಸಿದ್ದ ನನ್ನ ಮಗ ಯಾರ ತಂಟೆಗೂ ಹೋಗದೇ ತನ್ನ ಕೆಲಸವಷ್ಟೇ ಮಾಡುತ್ತಿದ್ದ. ಕಳೆದ ಒಂದು ತಿಂಗಳಿಂದ ಅಂಪ್ರೆಟಿಸ್ ರೈಲ್ವೆ ಇಲಾಖೆ ವಿಭಾಗದಲ್ಲೂ ಕೆಲಸ ಮಾಡುತ್ತಿದ್ದ. ಆತನಿಗೆ ರಾತ್ರಿ ಪಾಳಿಯಲ್ಲಿ ಕೆಲಸಕ್ಕೆ ನಿಯೋಜಿಸಿದ್ದರಿಂದ ಏನಾದರೂ ತೊಂದರೆಯಾಗಬಹುದು ಎಂದು ಕೆಲಸ ಬಿಡಿಸಿದ್ದು, ಹತ್ತು ದಿನಗಳಿಂದ ಮನೆಯಲ್ಲಿದ್ದ ಎಂದು ಹೇಳಿದರು.
ಇನ್ನು ಚಂದ್ರುವಿನ ಸಂಬಂಧಿಕರೊಬ್ಬರು ಮಾತನಾಡಿ, 'ಕರ್ನಾಟಕದಲ್ಲಿ ಕನ್ನಡ ತಾನೆ ಮಾತಾಡಬೇಕು. ಉರ್ದು ಬರಲಿಲ್ಲಅಂತ ಅವನನ್ನು ಸಾಯಿಸಿಬಿಡೋದಾ? ಇನ್ಯಾವ ತಾಯಿಗೂ ಈ ಸ್ಥಿತಿ ಬರಬಾರದು. ನಮಗೆ ನ್ಯಾಯ ಕೊಡಿಸಬೇಕು ಎಂದು ಕಣ್ಣೀರು ಹಾಕಿದರು.
ಚಿಕನ್ ರೋಲ್ ತರಲು ಹೋದಾಗ ಕೊಲೆ
ಗೂಡ್ಸ್ ಶೆಡ್ ರಸ್ತೆಯಲ್ಲಿರುವ ರೈಲ್ವೆ ವಿಭಾಗ ಕೇಂದ್ರದಲ್ಲಿ ಒಂದು ತಿಂಗಳಿಂದ ಉದ್ಯೋಗ ತರಬೇತಿ ಪಡೆಯುತ್ತಿದ್ದ ಚಂದ್ರು, ಸ್ನೇಹಿತ ಸೈಮನ್ನ ಹುಟ್ಟುಹಬ್ಬ ಆಚರಿಸಲೆಂದು ರಾತ್ರಿ ಆತನ ಮನೆಗೆ ಹೋಗಿದ್ದ. ಅಲ್ಲಿ ಮೂರ್ನಾಲ್ಕು ಮಂದಿ ಸ್ನೇಹಿತರು ಒಟ್ಟಾಗಿ ಮದ್ಯದ ಪಾರ್ಟಿ ಮಾಡಿದ್ದರು. ಈ ವೇಳೆ ಚಿಕನ್ ರೋಲ್ ಕೊಡಿಸುವಂತೆ ಸೈಮನ್ ಬಳಿ ಚಂದ್ರು ಕೇಳಿದ್ದ. ಹಾಗಾಗಿ, ಇಬ್ಬರು ಚಿಕನ್ ರೋಲ್ ಹುಡುಕಿಕೊಂಡು ತಡರಾತ್ರಿ ಬೈಕ್ನಲ್ಲಿ ಜೆಜೆನಗರದ ಬಳಿ ತಿರುಗಾಡಿದ್ದರು.
ಹಳೇಗುಡ್ಡದ ಹಳ್ಳಿಯ ಕಾವೇರಿ ಆಶ್ರಮ ಶಾಲೆ ಸಮೀಪ ಬೈಕ್ ಚಲಾಯಿಸುತ್ತಿದ್ದ ಚಂದ್ರು ನಿಯಂತ್ರಣ ತಪ್ಪಿ ಮುಂದಿನಿಂದ ಬರುತ್ತಿದ್ದ ಆರೋಪಿ ಶಾಹೀದ್ ಬೈಕ್ಗೆ ಡಿಕ್ಕಿ ಹೊಡೆದಿದ್ದ. ಆದರೆ, ಯಾರಿಗೂ ಗಾಯಗಳಾಗಿರಲಿಲ್ಲ. ಈ ನಡುವೆ, ಸರಿಯಾಗಿ ಬೈಕ್ ಚಲಾಯಿಸುವಂತೆ ಶಾಹೀದ್ಗೆ ಚಂದ್ರು ಬೆದರಿಸಿದ್ದ. ಇದರಿಂದ ಕೆರಳಿದ ಶಾಹೀದ್, ತನ್ನ ಸ್ನೇಹಿತರನ್ನು ಸ್ಥಳಕ್ಕೆ ಕರೆಸಿ ಚಂದ್ರು ಹಾಗೂ ಸೈಮನ್ ಜತೆ ಜಗಳ ಮಾಡಿದ್ದ. ಜಗಳ ತಾರಕಕ್ಕೆ ಹೋದಾಗ ಶಾಹೀದ್ ತನ್ನ ಬಳಿಯಿದ್ದ ಚೂರಿಯಿಂದ ಚಂದ್ರು ತೊಡೆಗೆ ಇರಿದು ಪರಾರಿಯಾಗಿದ್ದ.
ಇತ್ತ ಗಂಭೀರವಾಗಿ ಗಾಯಗೊಂಡಿದ್ದ ಚಂದ್ರುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದರೂ, ತೀವ್ರ ರಕ್ತಸ್ರಾವ ಉಂಟಾದ ಪರಿಣಾಮ ತಡರಾತ್ರಿ 3.15 ಕ್ಕೆ ಮೃತಪಟ್ಟಿದ್ದಾನೆ.
ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ
ಜೆಜೆ ನಗರ ಪೊಲೀಸರು ಕೃತ್ಯ ನಡೆದ ಸ್ಥಳಕ್ಕೆ ಧಾವಿಸಿ ಸಿಸಿಕ್ಯಾಮೆರಾ ಪರಿಶೀಲಿಸಿದಾಗ ಆರೋಪಿಗಳು ಕೊಲೆ ಮಾಡಿರುವ ದೃಶ್ಯ ಪತ್ತೆಯಾಗಿತ್ತು. ಈ ಆಧಾರದ ಮೇಲೆ ಶಾಹೀದ್ ಹಾಗೂ ಆತನ ಇಬ್ಬರು ಸ್ನೇಹಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಾಧಿಹೀದ್ ಚಪ್ಪಲಿ ಅಂಗಡಿ ಇಟ್ಟುಕೊಂಡಿದ್ದು, ವ್ಯಾಪಾರ ಮುಗಿಸಿ ಎಂದಿನಂತೆ ಮನೆಗೆ ವಾಪಸಾಗುತ್ತಿದ್ದ ಎಂದು ತಿಳಿದು ಬಂದಿದೆ. ಜೆಜೆನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.