ಆ್ಯಪ್ನಗರ

ಕೆಲಸ ಕೊಡಿಸುವುದಾಗಿ ನಂಬಿಸಿ 24 ಲಕ್ಷ ರೂ. ಪಡೆದು ವಂಚನೆ ಆರೋಪ

ಎಫ್‌ಡಿಎ ಕೆಲಸ ಕೊಡಿಸುವುದಾಗಿ ನಂಬಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಪ ಕಾರ್ಯದರ್ಶಿ ರಾಮಚಂದ್ರಯ್ಯ ಎಂಬುವರು 24 ಲಕ್ಷ ರೂ. ಪಡೆದಿದ್ದಾರೆಂದು ಆರೋಪಿಸಿ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Vijaya Karnataka 13 Jan 2019, 5:00 am
Vijaya Karnataka Web job offer 24 lack fraud
ಕೆಲಸ ಕೊಡಿಸುವುದಾಗಿ ನಂಬಿಸಿ 24 ಲಕ್ಷ ರೂ. ಪಡೆದು ವಂಚನೆ ಆರೋಪ

ಬೆಂಗಳೂರು: ಎಫ್‌ಡಿಎ ಕೆಲಸ ಕೊಡಿಸುವುದಾಗಿ ನಂಬಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಪ ಕಾರ್ಯದರ್ಶಿ ರಾಮಚಂದ್ರಯ್ಯ ಎಂಬುವರು 24 ಲಕ್ಷ ರೂ. ಪಡೆದಿದ್ದಾರೆಂದು ಆರೋಪಿಸಿ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಮನಗರದ ಚನ್ನಪಟ್ಟಣ ಮೂಲದ ಶ್ರೀಕಂಠಯ್ಯ ಎಂಬುವರು ಜ.11ರಂದು ದೂರು ದಾಖಲಿಸಿದ್ದಾರೆ.

''ನನ್ನ ಸಹೋದರಿ ಅಂಜನಾ ಅವರಿಗೆ ಅಂಬೇಡ್ಕರ್‌ ನಿಗಮ ಮತ್ತು ದೇವರಾಜ ಅರಸು ನಿಗಮದಲ್ಲಿ ಎಫ್‌ಡಿಎ ಹುದ್ದೆ ಕೊಡಿಸುವುದಾಗಿ ನಂಬಿಸಿ, ನನ್ನಿಂದ ಹಾಗೂ ಸಂಬಂಧಿಕರಾದ ಸತೀಶ, ಪುಟ್ಟತಾಯಮ್ಮ ಮತ್ತು ಅಭಿಷೇಕ್‌ ಅವರಿಂದ ಮಧ್ಯವರ್ತಿ ಲಕ್ಷ್ಮೇನಾರಾಯಣ ಎಂಬುವರ ಮೂಲಕ ವಿಕಾಸಸೌಧಲ್ಲಿ ಕೆಲಸ ಮಾಡುತ್ತಿದ್ದ ಉಪ ಕಾರ್ಯದರ್ಶಿ ರಾಮಚಂದ್ರಯ್ಯ, ತಲಾ 6 ಲಕ್ಷ ರೂ.ನಂತೆ ಒಟ್ಟು 24 ಲಕ್ಷ ರೂ. ಪಡೆದಿದ್ದಾರೆ. ಆದರೆ, ಕೆಲಸ ಕೊಡಿಸದೇ ಮೋಸ ಮಾಡಿದ್ದಾರೆ,'' ಎಂದು ಶ್ರೀಕಂಠಯ್ಯ ದೂರಿನಲ್ಲಿ ಕೋರಿದ್ದಾರೆ.

''ಅಧಿಕಾರಿ ಈಗ ವಿಕಾಸಸೌಧದಲ್ಲಿ ಕೆಲಸ ಮಾಡುತ್ತಿಲ್ಲ. ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ,'' ಎಂದು ವಿಧಾನಸೌಧ ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ