ಆ್ಯಪ್ನಗರ

ಸಂಪ್ರದಾಯ ಮುರಿಯೋದು ಬೇಡ. ಸಾಂಕೇತಿಕವಾಗಿ ಬೆಂಗಳೂರು ಕರಗ ನಡೆಯಲಿ

ಯಾರ ಕಾಲದಲ್ಲಿಯೂ ಕರಗ ನಿಂತಿಲ್ಲ, ಟಿಪ್ಪು ಸುಲ್ತಾನ ಕಾಲದಲ್ಲೂ ನಿಂತಿಲ್ಲ, ಪ್ಲೇಗ್ ಬಂದಾಗಲೂ ಕರಗ ನಿಂತಿಲ್ಲ ನಾಲ್ಕು ಜನರು ಸೇರಿಸಿ ಕರಗ ಆಚರಿಸುವಂತೆ ಮಾಡಿ ಎಂದು ಪ್ರತಿಪಕ್ಷದ ಕೆಲವು ಸದಸ್ಯರು ಒತ್ತಾಯಿಸಿದರು.

Vijaya Karnataka Web 4 Apr 2020, 9:41 pm
ಬೆಂಗಳೂರು: ಕೊರೊನಾ ಲಾಕ್‌ಡೌನ್‌ ನಡುವೆ ಸರಳವಾಗಿ ಬೆಂಗಳೂರು ಕರಗ ಆಚರಿಸಲು ಸರಕಾರ ನಿರ್ಧರಿಸಿದೆ.
Vijaya Karnataka Web ಕರಗ
ಕರಗ



ಕೇವಲ ನಾಲ್ಕೈದು ಜನರು ಕೂಡಿ ಕರಗ ಆಚರಿಸಲು ತೀರ್ಮಾನಿಸಲಾಗಿದೆ. ಬೆಂಗಳೂರಿನ ಕರಗ ಸಂಪ್ರದಾಯ ಮುರಿಯಬಾರದು ಅಂತ ರಾಜ್ಯ ಸರಕಾರ ಈ ನಿರ್ಧಾರ ಕೈಗೊಂಡಿದೆ.

ಬೆಂಗಳೂರು ಶಾಸಕರ, ಸಚಿವರ ಸಭೆಯಲ್ಲಿ ಈ ವಿಷಯವನ್ನು ಸಚಿವ ಆರ್ ಅಶೋಕ್ ಹಾಗೂ ಸೋಮಣ್ಣ ತಿಳಿಸಿದರು.

ಬೆಂಗಳೂರಿನ ಕರಗ ಉತ್ಸವ ಆಚರಣೆಗೆ ಸರಕಾರ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದ ಕಾಂಗ್ರೆಸ್ ಸದಸ್ಯ ಪಿ.ಆರ್. ರಮೇಶ್, ಯಾರ ಕಾಲದಲ್ಲಿಯೂ ಕರಗ ನಿಂತಿಲ್ಲ, ಟಿಪ್ಪು ಸುಲ್ತಾನ ಕಾಲದಲ್ಲೂ ನಿಂತಿಲ್ಲ, ಪ್ಲೇಗ್ ಬಂದಾಗಲೂ ಕರಗ ನಿಂತಿಲ್ಲ ನಾಲ್ಕು ಜನರು ಸೇರಿಸಿ ಕರಗ ಆಚರಿಸುವಂತೆ ಮಾಡಿ ಎಂದು ಪಿಆರ್ ರಮೇಶ್ ಒತ್ತಾಯಿಸಿದರು.

ಈ ವೇಳೆ ಕರಗ ಪೂಜೆಗೆ ಅನುವು ಮಾಡಲು ಅಧಿಕಾರಿಗಳಿಗೆ ಮುಖ್ಯಮಂತ್ರಿ ಹಾಗೂ ಸಚಿವರು ಸೂಚನೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ