ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನಿರ್ಮಿಸಲು ಉದ್ದೇಶಿಸಿರುವ ಡಾ.ಕೆ. ಶಿವರಾಮ ಕಾರಂತ ಬಡಾವಣೆಯಲ್ಲಿ ಶೀಘ್ರ ಸೈಟ್ ಹಂಚಿಕೆ ಆರಂಭವಾಗುವ ನಿರೀಕ್ಷೆ ಮೂಡಿದೆ. ಸುಪ್ರೀಂಕೋರ್ಟ್ ಮೇಲಿಂದ ಮೇಲೆ ಮೇಲೆ ಸೂಚನೆ ನೀಡುತ್ತಿರುವ ಹಿನ್ನೆಲೆಯಲ್ಲಿಇದೀಗ ಟೆಂಡರ್ ಪ್ರಕ್ರಿಯೆಗಳನ್ನು ಚುರುಕುಗೊಳಿಸಲು ಬಿಡಿಎ ಮುಂದಾಗಿದೆ. ಇದರಿಂದಾಗಿ ದಶಕದಿಂದ ನಿವೇಶನಕ್ಕೆ ಕಾಯುತ್ತಿರುವವರು ನಿರಾಳರಾಗುವಂತಾಗಿದೆ.
ಒಟ್ಟು ಒಂಬತ್ತು ಸೆಕ್ಟರ್ಗಳಲ್ಲಿಕಾರಂತ ಬಡಾವಣೆ ನಿರ್ಮಿಸಲಾಗುತ್ತಿದೆ. ನಾಲ್ಕು ಸೆಕ್ಟರ್ಗಳಲ್ಲಿ ಕಾಮಗಾರಿ ಕೈಗೊಳ್ಳಲು ಗುತ್ತಿಗೆದಾರರನ್ನು ಅಂತಿಮಗೊಳಿಸಲಾಗಿದೆ. ಏಕ ಬಿಡ್ದಾರರು ಭಾಗವಹಿಸಿದ್ದ ಹಿನ್ನೆಲೆ, ತಾಂತ್ರಿಕ ದಾಖಲೆ ಸಲ್ಲಿಸದ ಕಾರಣ ಐದು ಸೆಕ್ಟರ್ಗಳಲ್ಲಿ ಬಿಡ್ ಅಂತಿಮಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಮರು ಟೆಂಡರ್ ಕರೆಯುತ್ತಿದ್ದು, ಬಿಡ್ದಾರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನಾಲ್ಕು ಸೆಕ್ಟರ್ಗಳಲ್ಲಿ ತಾಂತ್ರಿಕ ಸುತ್ತು ಪೂರ್ಣಗೊಂಡಿದ್ದು, ಹಣಕಾಸು ಸುತ್ತನ್ನು ನಡೆಸಬೇಕಾಗಿದೆ. ಈ ಪ್ರಕ್ರಿಯೆಯು ಒಂದು ವಾರದಲ್ಲಿ ಪೂರ್ಣಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
2022ರ ಮಾರ್ಚ್ 22 ರಂದು ಮೊದಲ ಸುತ್ತಿನ ಟೆಂಡರ್ ನಡೆಸಲಾಗಿದ್ದು, ಇದಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಕ್ಟೋಬರ್ 11 ರಂದು ಎರಡನೇ ಟೆಂಡರ್ ಕರೆಯಲಾಗಿದ್ದು, ಆಗಲೂ ಕೆಲವು ಸೆಕ್ಟರ್ಗಳಿಗೆ ಏಕ ಬಿಡ್ದಾರರು ಪಾಲ್ಗೊಂಡಿದ್ದರು.
ಏನೇನು ಕಾಮಗಾರಿಗಳು ?
ನಿವೇಶನಗಳ ರಚನೆ, ರಸ್ತೆಗಳ ನಿರ್ಮಾಣ, ರಸ್ತೆ ಬದಿ ಚರಂಡಿ, ಅಡ್ಡ ಚರಂಡಿ ಕಾಮಗಾರಿ, ಮಳೆನೀರು ಚರಂಡಿ, ಮಳೆ ನೀರು ಕೊಯ್ಲು, ನೀರು ಪೂರೈಕೆ ಸೇರಿದಂತೆ ರಕ್ಷಣೆ ಕಾಮಗಾರಿ, ಯುಜಿಡಿ ಹಾಗೂ ವಿದ್ಯುತ್ ಕಾಮಗಾರಿಗಳನ್ನು ಪ್ರತಿ ಪ್ಯಾಕೇಜ್ ಒಳಗೊಂಡಿದೆ. ಇವುಗಳನ್ನು ಪೂರ್ಣಗೊಳಿಸಲು 18 ತಿಂಗಳ ಗಡುವು ನೀಡಲಾಗಿದೆ.
10 ಸಾವಿರ ನಿವೇಶನಗಳ ಹಂಚಿಕೆ : ರೈತರಿಗೆ ಆದ್ಯತೆ
ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ 17 ಗ್ರಾಮಗಳಿಂದ ಒಟ್ಟು 3,546 ಎಕರೆ ಭೂಮಿಯನ್ನು ಪಡೆಯುವ ಉದ್ದೇಶ ಹೊಂದಲಾಗಿದೆ. ಇದಕ್ಕಾಗಿ 5,337 ಕೋಟಿ ರೂ. ಮೊತ್ತವನ್ನು ಅಂದಾಜಿಸಲಾಗಿದೆ. ಇದೀಗ 2,600 ಎಕರೆ ಭೂಮಿ ಬಿಡಿಎಗೆ ಸಿಕ್ಕಿದೆ. 1,270 ಕೋಟಿ ರೂ. ಅಂದಾಜು ಮೊತ್ತದೊಂದಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶವನ್ನು ಬಿಡಿಎ ಹೊಂದಿದೆ. ಈ ಜಾಗವನ್ನು ಅಭಿವೃದ್ಧಿಪಡಿಸಿ, ಇದರಲ್ಲಿ 10 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡುವ ಉದ್ದೇಶವನ್ನು ಬಿಡಿಎ ಹೊಂದಿದೆ. ಹೀಗೆ ನಿವೇಶನ ಹಂಚಿಕೆ ಮಾಡುವಾಗ ಬಡಾವಣೆ ನಿರ್ಮಾಣಕ್ಕಾಗಿ ಭೂಮಿಯನ್ನು ಪಡೆದ ರೈತರಿಗೆ ಮೊದಲ ಆದ್ಯತೆ ನೀಡಲಾಗುವುದು. ನಂತರ ಗ್ರಾಹಕರಿಗೆ ವಿತರಿಸುವ ಉದ್ದೇಶವನ್ನು ಹೊಂದಲಾಗಿದೆ. ಒಟ್ಟಾರೆ 28 ಸಾವಿರ ನಿವೇಶನಗಳನ್ನು ಸಿದ್ಧಪಡಿಸಲಾಗುವುದು. ದೊಡ್ಡಬಳ್ಳಾಪುರ ಮತ್ತು ಹೆಸರಘಟ್ಟ ನಡುವಿನ 17 ಹಳ್ಳಿಗಳಲ್ಲಿ ಕಾರಂತ ಬಡಾವಣೆ ಮೈದಳೆಯಲಿದೆ.
ಒಟ್ಟು ಒಂಬತ್ತು ಸೆಕ್ಟರ್ಗಳಲ್ಲಿಕಾರಂತ ಬಡಾವಣೆ ನಿರ್ಮಿಸಲಾಗುತ್ತಿದೆ. ನಾಲ್ಕು ಸೆಕ್ಟರ್ಗಳಲ್ಲಿ ಕಾಮಗಾರಿ ಕೈಗೊಳ್ಳಲು ಗುತ್ತಿಗೆದಾರರನ್ನು ಅಂತಿಮಗೊಳಿಸಲಾಗಿದೆ. ಏಕ ಬಿಡ್ದಾರರು ಭಾಗವಹಿಸಿದ್ದ ಹಿನ್ನೆಲೆ, ತಾಂತ್ರಿಕ ದಾಖಲೆ ಸಲ್ಲಿಸದ ಕಾರಣ ಐದು ಸೆಕ್ಟರ್ಗಳಲ್ಲಿ ಬಿಡ್ ಅಂತಿಮಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಮರು ಟೆಂಡರ್ ಕರೆಯುತ್ತಿದ್ದು, ಬಿಡ್ದಾರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನಾಲ್ಕು ಸೆಕ್ಟರ್ಗಳಲ್ಲಿ ತಾಂತ್ರಿಕ ಸುತ್ತು ಪೂರ್ಣಗೊಂಡಿದ್ದು, ಹಣಕಾಸು ಸುತ್ತನ್ನು ನಡೆಸಬೇಕಾಗಿದೆ. ಈ ಪ್ರಕ್ರಿಯೆಯು ಒಂದು ವಾರದಲ್ಲಿ ಪೂರ್ಣಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
2022ರ ಮಾರ್ಚ್ 22 ರಂದು ಮೊದಲ ಸುತ್ತಿನ ಟೆಂಡರ್ ನಡೆಸಲಾಗಿದ್ದು, ಇದಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಕ್ಟೋಬರ್ 11 ರಂದು ಎರಡನೇ ಟೆಂಡರ್ ಕರೆಯಲಾಗಿದ್ದು, ಆಗಲೂ ಕೆಲವು ಸೆಕ್ಟರ್ಗಳಿಗೆ ಏಕ ಬಿಡ್ದಾರರು ಪಾಲ್ಗೊಂಡಿದ್ದರು.
ಏನೇನು ಕಾಮಗಾರಿಗಳು ?
ನಿವೇಶನಗಳ ರಚನೆ, ರಸ್ತೆಗಳ ನಿರ್ಮಾಣ, ರಸ್ತೆ ಬದಿ ಚರಂಡಿ, ಅಡ್ಡ ಚರಂಡಿ ಕಾಮಗಾರಿ, ಮಳೆನೀರು ಚರಂಡಿ, ಮಳೆ ನೀರು ಕೊಯ್ಲು, ನೀರು ಪೂರೈಕೆ ಸೇರಿದಂತೆ ರಕ್ಷಣೆ ಕಾಮಗಾರಿ, ಯುಜಿಡಿ ಹಾಗೂ ವಿದ್ಯುತ್ ಕಾಮಗಾರಿಗಳನ್ನು ಪ್ರತಿ ಪ್ಯಾಕೇಜ್ ಒಳಗೊಂಡಿದೆ. ಇವುಗಳನ್ನು ಪೂರ್ಣಗೊಳಿಸಲು 18 ತಿಂಗಳ ಗಡುವು ನೀಡಲಾಗಿದೆ.
10 ಸಾವಿರ ನಿವೇಶನಗಳ ಹಂಚಿಕೆ : ರೈತರಿಗೆ ಆದ್ಯತೆ
ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ 17 ಗ್ರಾಮಗಳಿಂದ ಒಟ್ಟು 3,546 ಎಕರೆ ಭೂಮಿಯನ್ನು ಪಡೆಯುವ ಉದ್ದೇಶ ಹೊಂದಲಾಗಿದೆ. ಇದಕ್ಕಾಗಿ 5,337 ಕೋಟಿ ರೂ. ಮೊತ್ತವನ್ನು ಅಂದಾಜಿಸಲಾಗಿದೆ. ಇದೀಗ 2,600 ಎಕರೆ ಭೂಮಿ ಬಿಡಿಎಗೆ ಸಿಕ್ಕಿದೆ. 1,270 ಕೋಟಿ ರೂ. ಅಂದಾಜು ಮೊತ್ತದೊಂದಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶವನ್ನು ಬಿಡಿಎ ಹೊಂದಿದೆ. ಈ ಜಾಗವನ್ನು ಅಭಿವೃದ್ಧಿಪಡಿಸಿ, ಇದರಲ್ಲಿ 10 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡುವ ಉದ್ದೇಶವನ್ನು ಬಿಡಿಎ ಹೊಂದಿದೆ. ಹೀಗೆ ನಿವೇಶನ ಹಂಚಿಕೆ ಮಾಡುವಾಗ ಬಡಾವಣೆ ನಿರ್ಮಾಣಕ್ಕಾಗಿ ಭೂಮಿಯನ್ನು ಪಡೆದ ರೈತರಿಗೆ ಮೊದಲ ಆದ್ಯತೆ ನೀಡಲಾಗುವುದು. ನಂತರ ಗ್ರಾಹಕರಿಗೆ ವಿತರಿಸುವ ಉದ್ದೇಶವನ್ನು ಹೊಂದಲಾಗಿದೆ. ಒಟ್ಟಾರೆ 28 ಸಾವಿರ ನಿವೇಶನಗಳನ್ನು ಸಿದ್ಧಪಡಿಸಲಾಗುವುದು. ದೊಡ್ಡಬಳ್ಳಾಪುರ ಮತ್ತು ಹೆಸರಘಟ್ಟ ನಡುವಿನ 17 ಹಳ್ಳಿಗಳಲ್ಲಿ ಕಾರಂತ ಬಡಾವಣೆ ಮೈದಳೆಯಲಿದೆ.