‘ಬಿ’ ಖರಾಬು: ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ಷೇಪ, ಬಿಲ್ಡರ್ ಲಾಬಿಗೆ ಮಣಿಯಿತೇ ಸರಕಾರ
ಸರಕಾರದ ಬೊಕ್ಕಸಕ್ಕೆ ಆದಾಯ ತುಂಬಿಸುವ ನೆಪದಲ್ಲಿ'ಬಿ' ಖರಾಬು ಜಮೀನನ್ನು ಭೂ ಮಾಲೀಕರ ಹೆಸರಿಗೆ ನೋಂದಾಯಿಸುವ ಸಚಿವ ಸಂಪುಟದ ನಿರ್ಧಾರಕ್ಕೆ ಭಾರಿ ಆಕ್ಷೇಪ ವ್ಯಕ್ತವಾಗಿದೆ. ರಾಜಕಾಲುವೆ ಸಹಿತ ಜಲತಾಣಗಳ ಕಣ್ಮರೆ ಸಾಧ್ಯತೆ
ಬೆಂಗಳೂರು: ಕೋವಿಡ್-19 ಹಿನ್ನೆಲೆಯಲ್ಲಿ ಸರಕಾರದ ಬೊಕ್ಕಸಕ್ಕೆ ಆದಾಯ ತುಂಬಿಸುವ ನೆಪದಲ್ಲಿ'ಬಿ' ಖರಾಬು ಜಮೀನನ್ನು ಭೂ ಮಾಲೀಕರ ಹೆಸರಿಗೆ ನೋಂದಾಯಿಸುವ ಸಚಿವ ಸಂಪುಟದ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ಷೇಪ ವ್ಯಕ್ತವಾಗಿದೆ.
ಬೆಂಗಳೂರು ಸಿಟಿ ಹಾಗೂ ನಗರ ಮಿತಿಯಿಂದ 18 ಕಿ.ಮೀ. ವ್ಯಾಪ್ತಿಯೊಳಗೆ ಬರುವಂತಹ 'ಬಿ' ಖರಾಬು ಜಮೀನುಗಳಿಗೆ ಇದು ಅನ್ವಯವಾಗುತ್ತದೆ. ಇದಕ್ಕಾಗಿ ಭೂಕಂದಾಯ ಕಾಯಿದೆ ಕಲಂ 64(2) ಹಾಗೂ 69ಕ್ಕೆ ತಿದ್ದುಪಡಿ ತರಲಾಗುತ್ತದೆ. ಇದರಿಂದ ಸರಕಾರಕ್ಕೆ ಕೋಟ್ಯಂತರ ರೂ. ಆದಾಯ ಬರುವುದೆಂದು ನಿರೀಕ್ಷಿಸಲಾಗಿದೆ. ಆದರೆ, ಸಾರ್ವಜನಿಕ ಉಪಯೋಗಕ್ಕೆ ಮೀಸಲಿದ್ದ ಈ ಭೂಮಿಯನ್ನು ಶಾಶ್ವತವಾಗಿ ಮಾರಾಟ ಮಾಡಲಾಗುತ್ತದೆ. ಸರಕಾರ ಬಿಲ್ಡರ್ಸ್ ಹಾಗೂ ಡೆವಲಪರ್ಸ್ ಲಾಬಿಗೆ ಮಣಿದಿದೆ ಎಂಬ ಅಪಸ್ವರ ಎದ್ದಿದೆ.
ಈಗಾಗಲೇ ನಗರ ಕಾಂಕ್ರೀಟ್ ಮಯವಾಗಿದೆ. ಸಾರ್ವಜನಿಕ ಉದ್ದೇಶಕ್ಕೆ ಮೀಸಲಾದ ಜಾಗಗಳು ಕಣ್ಮರೆಯಾಗುತ್ತಿವೆ. ಇವುಗಳ ಜತೆಗೆ ಮುಕ್ತ ಪ್ರದೇಶಗಳಾಗಿ ಉಳಿದುಕೊಂಡಿರುವ 'ಬಿ' ಖರಾಬು ಜಾಗಗಳು ಮಾರಾಟಗೊಂಡು ಕಟ್ಟಡಗಳು ಎದ್ದಲ್ಲಿ ಪರಿಸರದ ಮೇಲೆ ಪರಿಣಾಮ ಬೀರುವ ಆತಂಕ ಇದೆ. ಏಕೆಂದರೆ, ನೀರು ಹರಿಯುವ ಹಳ್ಳ-ಕೊಳ್ಳ, ರಾಜಕಾಲುವೆ 'ಬಿ' ಖರಾಬು ವ್ಯಾಪ್ತಿಗೆ ಸೇರುತ್ತದೆ. ಹಾಲಿ ನಗರದಲ್ಲಿ ಮಳೆಗಾಲದ ವೇಳೆ ತಗ್ಗು ಪ್ರದೇಶಕ್ಕೆ ನೀರು ನುಗ್ಗುವ ಪ್ರಕರಣಗಳು ಹೆಚ್ಚುತ್ತಿವೆ. ರಾಜಕಾಲುವೆ ಒತ್ತುವರಿಯಿಂದ ಇನ್ನಷ್ಟು ಸಮಸ್ಯೆಗಳು ಜನರನ್ನು ಹೈರಾಣ ಮಾಡಿದೆ. ಇದನ್ನು ಮನಗಾಣದೆ ಸರಕಾರ ಖರಾಬು ಜಮೀನನ್ನು ಮಾರಾಟ ಮಾಡಲು ಮುಂದಾಗಿರುವುದು ಹೆತ್ತವರೇ ಮಕ್ಕಳನ್ನು ಹಣಕ್ಕಾಗಿ ಬಿಕರಿ ಮಾಡಿದಂತೆ ಎಂಬ ಆರೋಪ ಕೇಳಿಬಂದಿದೆ.
ಕರಗಲಿದೆ ಸರಕಾರಿ ಭೂಮಿ?
ಬೆಂಗಳೂರು ನಗರ ಜಿಲ್ಲೆಯಲ್ಲಿ 10 ಸಾವಿರ ಎಕರೆ 'ಬಿ' ಖರಾಬು ಜಮೀನು ಇದೆ ಎಂದು ಅಂದಾಜಿಸಲಾಗಿದೆ. ಈ ಪೈಕಿ ಗ್ರಾಮಗಳಿರುವ ಕಡೆಗಳಲ್ಲಿ ಹೆಚ್ಚಿನ ವಿಸ್ತೀರ್ಣದಲ್ಲಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿನ ಜಮೀನುಗಳಲ್ಲಿರುವ 'ಬಿ' ಖರಾಬು ಜಾಗಗಳು ಬಡಾವಣೆ, ವಸತಿ ಸಮುಚ್ಚಯ, ವಿಲ್ಲಾಇತರೆಡೆ ಹಂಚಿಹೋಗಿವೆ. ಕಟ್ಟಡಗಳು ಮೇಲೆದ್ದಿರುವೆಡೆ 'ಬಿ' ಖರಾಬು ಜಾಗವನ್ನು ಬಳಸಿಕೊಳ್ಳಲಾಗಿದೆ. ಇದಕ್ಕೆ ಸಕ್ಷಮ ಪ್ರಾಧಿಕಾರದಿಂದ ಒಪ್ಪಿಗೆ ಪಡೆಯದೆ ಅಕ್ರಮವಾಗಿ ಬಳಸಿಕೊಳ್ಳಲಾಗುತ್ತಿದೆ. ಇದನ್ನು ಸರಕಾರ ವಾಪಸ್ ಪಡೆಯಲು ಸಾಧ್ಯವಾಗುತ್ತಿಲ್ಲ. ವಸ್ತುಸ್ಥಿತಿ ಹೀಗಿದ್ದರೂ, ಭವಿಷ್ಯದಲ್ಲಿ ನಾನಾ ಇಲಾಖೆಗಳಿಗೆ ಸರಕಾರಿ ಜಮೀನಿನ ಅಭಾವ ಎದುರಾಗಲಿದೆ. ಈಗಾಗಲೇ ಒತ್ತುವರಿಯಾಗಿರುವ ಸರಕಾರಿ ಜಮೀನನ್ನು ಹರಾಜು ಹಾಕಿರುವಂತೆ 'ಬಿ' ಖರಾಬು ಜಾಗವನ್ನು ಸಕ್ರಮಗೊಳಿಸಿದರೆ ಭೂ ಬಳಕೆ ಹಾಗೂ ಹಸಿರು ವಲಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ ಎಂಬ ಆತಂಕವನ್ನು ಪರಿಸರವಾದಿಗಳು ವ್ಯಕ್ತಪಡಿಸಿದ್ದಾರೆ.
‘ಬಿ’ ಖರಾಬು ಜಮೀನು ಸಕ್ರಮಕ್ಕೆ ಸಂಪುಟ ಅಸ್ತು, ಸರ್ಕಾರದ ಕ್ರಮಕ್ಕೆ ಕಾಂಗ್ರೆಸ್ ಕಿ
'ಬಿ' ಖರಾಬು ಏಕೆ ಪ್ರಾಮುಖ್ಯ?
ಜಮೀನುಗಳಲ್ಲಿ ಪ್ರಕೃತಿದತ್ತವಾಗಿ ಹರಿಯುವ ಹಳ್ಳ-ಕೊಳ್ಳ, ರಾಜಕಾಲುವೆ, ಸಾರ್ವಜನಿಕ ಬಳಕೆಗೆ ಉಪಯೋಗವಾಗುವ ಕಾಲುದಾರಿ 'ಬಿ' ಖರಾಬು ಭೂಮಿ ಎನಿಸಿದೆ. ಜತೆಗೆ ಉಳುಮೆ ಮಾಡಲಾಗದ ಪಾಳು ಭೂಮಿ ಕೂಡ ಈ ವರ್ಗಕ್ಕೆ ಸೇರಿದೆ. ಇಂತಹ ಭೂಮಿ ಆಯಾ ಸರ್ವೆ ನಂಬರ್ಗಳ ವ್ಯಾಪ್ತಿಯಲ್ಲಿಕೆಲ ಗುಂಟೆಗಳಷ್ಟು ಪ್ರಮಾಣದಲ್ಲಿಇವೆ. ಇವುಗಳ ಸ್ವರೂಪ ಬದಲಿಸಲು ಕಾನೂನಿನಲ್ಲಿಅವಕಾಶ ಇಲ್ಲ.
ಆನ್ಲೈನ್ ಮೂಲಕ 300ಕ್ಕೂ ಹೆಚ್ಚು ನಿವೇಶನ ಮಾರಾಟ ಮಾಡಲು ಮುಡಾ ಸಿದ್ಧತೆ, ಜನರಿಂದ ಉತ್ತಮ ಪ್ರತಿಕ್ರಿಯೆ
ಕೃಷಿ ಭೂಮಿ ಸಕ್ರಮ ಮಾಡುವುದಿಲ್ಲ
ಒತ್ತುವರಿ ಪ್ರದೇಶಕ್ಕೂ ಸಕ್ರಮ ಭಾಗ್ಯ?
ಹಳ್ಳಿಗಳಿಂದ ಕೂಡಿದ್ದ ಬೆಂಗಳೂರು ಸಿಟಿ ಕ್ರಮೇಣ ನಗರೀಕರಣಗೊಂಡು 'ಬಿ' ಖರಾಬು ಜಮೀನಿನ ಮೇಲೆ ಪಟ್ಟಭದ್ರರ ಕಣ್ಣು ಬಿದ್ದಿತ್ತು. ಈಗ ಸರಕಾರ ಈ ಭೂಮಿಯನ್ನು ಮಾರಾಟ ಮಾಡಲು ಮುಂದಾಗಿರುವುದು ಸರಕಾರದ ಜಮೀನು ಕೂಡ ಸಕ್ರಮಗೊಳ್ಳುವ ಸಾಧ್ಯತೆ ಇದೆ. ಈ ಅಪಾಯವನ್ನು ಅರಿಯದೆ ಮುಂದಡಿ ಇಟ್ಟಲ್ಲಿರಾಜಕಾಲುವೆಗಳು ಕೂಡ ಸಕ್ರಮಗೊಂಡರೂ ಅಚ್ಚರಿ ಇಲ್ಲ. ಅಪಾರ್ಟ್ಮೆಂಟ್, ಬಹುಮಹಡಿ ಕಟ್ಟಡಗಳು ನಿರ್ಮಾಣಗೊಂಡಿರುವ ಪ್ರದೇಶಗಳ ಆಸುಪಾಸಿನಲ್ಲಿ ಬಿ ಖರಾಬು ಜಮೀನು ಉಳಿದುಕೊಂಡಿದೆ. ಅದನ್ನು ಬೇರೆಯವರಿಗೆ ಮಾರಾಟ ಮಾಡಲು ಆಗುವುದಿಲ್ಲ. ಬೇರೆಯವರು ತೆಗೆದುಕೊಂಡರೂ ಉಪಯೋಗಕ್ಕೆ ಬರುವುದಿಲ್ಲ. ಹಾಗೆಯೇ ಬಿಟ್ಟರೆ ಒತ್ತುವರಿ ಆಗುವ ಅಪಾಯ ಇದೆ. ಇದರ ಬದಲು ಕಟ್ಟಡ ಮಾಲೀಕರಿಗೆ ಮಾರ್ಗಸೂಚಿ ದರಕ್ಕಿಂತ ಎರಡು ಪಟ್ಟು ಮಾರಾಟ ಮಾಡಿದರೆ ಸರಕಾರಕ್ಕೆ ಆದಾಯ ಬರುತ್ತದೆ ಎಂಬ ವಾದವನ್ನು ಸರಕಾರ ಮಂಡಿಸಿದೆ. ಆದರೆ ಈ ನಿರ್ಧಾರದ ಹಿಂದೆ ಭಾರಿ ಲಾಬಿ ಕೆಲಸ ಮಾಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.