ಆ್ಯಪ್ನಗರ

ಕರ್ನಾಟಕಕ್ಕೆ ಬರುವ ಎಲ್ಲ ಪ್ರಯಾಣಿಕರಿಗೂ ಬರಲಿದೆ ಸ್ವಯಂ ಕ್ವಾರಂಟೈನ್‌, ಸರಕಾರಿ ಕ್ವಾರಂಟೈನ್‌ಗೆ ಗುಡ್‌ಬೈ?

ಈ ಮೊದಲು ಇದ್ದ ನಿಯಮವೇ ಬೇರೆ ಆಗಿತ್ತು. ಒಂದು ವೇಳೆ ರಾಜ್ಯಕ್ಕೆ ಬರುವ ಪ್ರಯಾಣಿಕನ ವಿಳಾಸ ಆರೋಗ್ಯ ಸೇತು ಆ್ಯಪ್‌ನಲ್ಲಿ ರೆಡ್‌ ಝೋನ್‌ ಎಂದು ತೋರಿಸಿದರೆ ಕೂಡಲೇ ಅವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿತ್ತು.

Vijaya Karnataka Web 22 May 2020, 5:41 pm
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮಹಾಮಾರಿಯ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಲಾಕ್‌ಡೌನ್‌ 3.0, 4.0 ವೇಳೆ ನಿಯಮಗಳನ್ನು ರಿಲ್ಯಾಕ್ಸ್‌ ಮಾಡಿದ ನಂತರ ಪಾಸಿಟಿವ್‌ ಪ್ರಕರಣಗಳು ಗಗನಮುಖಿಯಾಗಿವೆ.
Vijaya Karnataka Web ಕ್ವಾರಂಟೈನ್‌
ಕ್ವಾರಂಟೈನ್‌


ಕಳೆದ ಒಂದು ವಾರದಲ್ಲಿ ಕೊರೊನಾ ಸೆಂಚುರಿಯ ಮೇಲೆ ಸೆಂಚುರಿ ಬಾರಿಸುತ್ತಿದೆ. ಇದು ಸರಕಾರಕ್ಕೆ ತೀವ್ರ ಎಚ್ಚರಿಕೆಯ ಗಂಟೆಯಾಗಿದೆ.

ಆರ್ಥಿಕತೆಗೆ ಒತ್ತು ನೀಡಬೇಕೆಂದು ವಿನಾಯಿತಿಗಳನ್ನು ಬೇಕಾಬಿಟ್ಟಿ ಜಾರಿಗೆ ಮಾಡಿದ್ದೇ ಪಾಸಿಟಿವ್‌ ಪ್ರಕರಣ ಹೆಚ್ಚಾಗಲು ಕಾರಣವಾಗಿದೆಯೇ ಎಂಬ ಚರ್ಚೆ ಜೋರಾಗಿ ಸಾಗಿದೆ.

ಇವುಗಳ ಬೆನ್ನಲ್ಲೇ ರಾಜ್ಯ ಸರಕಾರ ಕೆಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಇದರಲ್ಲಿ ಪ್ರಮುಖವಾಗಿರುವುದು ಸೆಲ್ಫ್‌ ಕ್ವಾರಂಟೈನ್‌.

ಹೌದು ಇಂಥವೊಂದು ನಿಯಮವನ್ನು ಕಡ್ಡಾಯವಾಗಿ ಜಾರಿಗೆ ತರಲು ರಾಜ್ಯ ಸರಕಾರ ಚಿಂತನೆ ನಡೆಸಿದೆ. ಇದುವರೆಗೆ ಸರಕಾರದ ನಿಗಾದಲ್ಲಿಯೇ ಪ್ರಯಾಣಿಕರಿಗೆ ಕ್ವಾರಂಟೈನ್‌ ಮಾಡಲಾಗುತ್ತಿತ್ತು. ಅಂದರೆ ಯಾವುದಾದರೂ ನಿಗದಿತ ಸ್ಥಳದಲ್ಲಿ ಪ್ರಯಾಣಿಕರು ಕ್ವಾರಂಟೈನ್‌ ಆಗಬೇಕಾಗಿತ್ತು. ಇದರ ಸಂಪೂರ್ಣ ಸರಕಾರದ ಜವಾಬ್ದಾರಿಯಾಗಿತ್ತು. ಈಗ ಸರಕಾರ ಇದನ್ನು ಕೈ ಬಿಡುವ ಸಾಧ್ಯತೆ ಇದೆ.

ಹೀಗಾಗಿಯೇ ಜೂನ್‌ 1ರಿಂದ ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರು ಸ್ವಯಂ ಕ್ವಾರಂಟೈನ್‌ ಮಾಡಿಕೊಳ್ಳಬೇಕು. ಇವರನ್ನು ಸ್ಥಳೀಯ ಆಡಳಿತ ನಿಗಾ ವಹಿಸುತ್ತದೆ ಎಂದು ಹೇಳಲಾಗಿದೆ. ಆದರೆ ಇದು ಸಾಧ್ಯವೇ ಎಂಬುದು ಇಲ್ಲಿ ಮಿಲಿಯನ್‌ ಡಾಲರ್‌ ಪ್ರಶ್ನೆಯಾಗಿದೆ.

ಮುಂದಿನ ವಾರದಿಂದ ದೇಶೀಯ ವಿಮಾನಗಳ ಹಾರಾಟಕ್ಕೂ ಸರಕಾರ ಅನುಮತಿ ನೀಡಿದೆ. ಹೀಗಾಗಿ ಪ್ರತಿವಾರ ಅಂದಾಜು 1.9 ಲಕ್ಷ ಮಂದಿ ರಾಜ್ಯಕ್ಕೆ ಆಗಮಿಸುವ ಸಾಧ್ಯತೆ ಇದೆ. ಇವರೆಲ್ಲರೂ ಸ್ವಯಂ ಕ್ವಾರಂಟೈನ್‌ಗೆ ಒಳಪಡಬೇಕು. ಎಲ್ಲರೂ ಆರೋಗ್ಯ ಸೇತು ಮೊಬೈಲ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡಿರಬೇಕು.

ಈ ಮೊದಲು ಇದ್ದ ನಿಯಮವೇ ಬೇರೆ ಆಗಿತ್ತು. ಒಂದು ವೇಳೆ ರಾಜ್ಯಕ್ಕೆ ಬರುವ ಪ್ರಯಾಣಿಕನ ವಿಳಾಸ ಆರೋಗ್ಯ ಸೇತು ಆ್ಯಪ್‌ನಲ್ಲಿ ರೆಡ್‌ ಝೋನ್‌ ಎಂದು ತೋರಿಸಿದರೆ ಕೂಡಲೇ ಅವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿತ್ತು. ಆದರೆ ಈಗ ಅವರೇ ಕ್ವಾರಂಟೈನ್‌ಗೆ ಒಳಗಾಗಬೇಕು. ಕ್ವಾರಂಟೈನ್‌ನಲ್ಲಿ ಇದ್ದವರೇ ನಿಯಮಗಳನ್ನು ಪಾಲಿಸುತ್ತಿಲ್ಲ ಎಂಬ ದೂರುಗಳು ಕೇಳಿಬಂದಿದ್ದವು. ಇನ್ನು ಸ್ವಯಂ ಕ್ವಾರಂಟೈನ್‌ ಅನ್ನು ಕಡ್ಡಾಯವಾಗಿ ಪಾಲಿಸುತ್ತಾರೆಯೇ ಎಂಬ ಪ್ರಶ್ನೆ ಉದ್ಭವವಾಗುತ್ತದೆ.

ಈ ಕುರಿತು ಸಚಿವ ಡಾ. ಸುಧಾಕರ್‌ ಕೂಡ ಸ್ಪಷ್ಟನೆ ನೀಡಿದ್ದಾರೆ. ಸರಕಾರ ಅತಿ ಶೀಘ್ರದಲ್ಲೇ ಸ್ವಯಂ ಕ್ವಾರಂಟೈನ್‌ ಕುರಿತು ಘೋಷಣೆ ಮಾಡುವ ನಿರೀಕ್ಷೆ ಇದೆ. ಇದಕ್ಕೆ ಕಠಿಣ ಹಾಗೂ ಕಡ್ಡಾಯ ನಿಯಮಗಳನ್ನು ಪಾಲಿಸಬೇಕಾದ ಅಗತ್ಯವಿರುತ್ತದೆ. ಸರಕಾರದ ನಿಗಾ ಕೂಡ ಇರುತ್ತದೆ ಎಂದು ಸಚಿವ ಡಾ. ಸುಧಾಕರ್‌ ತಿಳಿಸಿದ್ದರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ