ಆ್ಯಪ್ನಗರ

ಮದುವೆ ನಿರಾಕರಿಸಿ ಮನೆ ತೊರೆದಿದ್ದ ಬೆಂಗಳೂರಿನ ಬಾಲಕಿಯ ನೆರವಿಗೆ ಬಂದ ಹೈಕೋರ್ಟ್

ನ್ಯಾಯಪೀಠ ಆಗ ಬಾಲಕಿಯ ನಿಲುವನ್ನು ಕೇಳಿದಾಗ, ಪೋಷಕರೊಂದಿಗೆ ಮನೆಗೆ ಹೋಗಲು ಆಕೆ ನಿರಾಕರಿಸಿ, ಬಾಲ ಮಂದಿರದಲ್ಲಿ ನೆಲೆಸುವುದಾಗಿ ಸ್ಪಷ್ಟಪಡಿಸಿದಳು. ಕೊನೆಗೆ ನ್ಯಾಯಪೀಠ ‘ಈ ವಿಚಾರದಲ್ಲಿ ಬಾಲಕಿಯ ರಕ್ಷಣೆಯೇ ಪ್ರಮುಖವಾಗಿದೆ. ಆಕೆಯ ಸುರಕ್ಷತೆ ಮತ್ತು ಕಲ್ಯಾಣ ಉದ್ದೇಶದಿಂದ ಗದಗದ ಸಂಗೊಳ್ಳಿ ರಾಯಣ್ಣ ಸರ್ಕಲ್‌ ಸಮೀಪದ ಬಾಲಕಿಯರ ಮಂದಿರದಲ್ಲಿಟ್ಟು ಆಕೆಯನ್ನು ಓದಿಸುವುದೇ ಸೂಕ್ತ’ ಎಂದು ಅಭಿಪ್ರಾಯಪಟ್ಟಿತು.

Vijaya Karnataka 27 Nov 2021, 10:17 am
ಬೆಂಗಳೂರು: ಶಿಕ್ಷಣ ಮೊಟಕುಗೊಳಿಸಿ ಮದುವೆಯಾಗುವಂತೆ ಪೋಷಕರು ಒತ್ತಡ ಹೇರಿದ್ದಕ್ಕೆ ಮನೆಬಿಟ್ಟು ಹೋಗಿದ್ದ ಬಾಲಕಿಗೆ ಬಾಲಕಿಯರ ಮಂದಿರದಲ್ಲಿ ಇದ್ದುಕೊಂಡು ವ್ಯಾಸಂಗ ಮುಂದುವರಿಸಲು ಅವಕಾಶ ಮಾಡಿಕೊಡುವ 'ಮಾನವೀಯತೆ'ಯ ಪ್ರಕರಣಕ್ಕೆ ಹೈಕೋರ್ಟ್‌ ಶುಕ್ರವಾರ ಸಾಕ್ಷಿಯಾಗಿದೆ.
Vijaya Karnataka Web Karnataka High Court


ಬಾಲಕಿ ಪೋಷಕರ ಒತ್ತಡಕ್ಕೆ ಹೆದರಿ ಮನೆಬಿಟ್ಟು ಗೋವಾಗೆ ತೆರಳಿ ಸಹೋದರನ ಮನೆಯಲ್ಲಿ ನೆಲೆಸಿದ್ದಳು. ಆದರೆ ಅದನ್ನು ಅರಿಯದ ಪೋಷಕರು, ತಮ್ಮ ಪುತ್ರಿ ಅಪಹರಣಕ್ಕೆ ಒಳಗಾಗಿರುವ ಸಾಧ್ಯತೆ ಇದ್ದು, ಆಕೆಯನ್ನು ಹುಡುಕಿಕೊಡುವಂತೆ ಕೋರಿ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್‌ ನಿರ್ದೇಶನದ ಮೇರೆಗೆ ಗದಗದ ಲಕ್ಷ್ಮೇಶ್ವರ ಠಾಣಾ ಪೊಲೀಸರು ಬಾಲಕಿಯನ್ನು ಪತ್ತೆ ಹಚ್ಚಿ ನ್ಯಾಯಮೂರ್ತಿಗಳಾದ ಎಸ್‌.ಸುನೀಲ್‌ ಯಾದವ್‌ ಮತ್ತು ಎಸ್‌.ರಾಚಯ್ಯ ಅವರಿದ್ದ ವಿಭಾಗೀಯ ಪೀಠದ ಮುಂದೆ ಹಾಜರುಪಡಿಸಿದ್ದರು.
ಸರಕಾರ ಸರಿಯಾಗಿ ಕೆಲಸ ಮಾಡಿದ್ದಿದ್ರೆ ಇಷ್ಟೊಂದು ಕೇಸ್‌ಗಳು ಬರುತ್ತಿರಲಿಲ್ಲ; ಹೈಕೋರ್ಟ್‌ ಕಿಡಿ
ಆಗ ವಿಚಾರಣೆ ವೇಳೆ ಸರಕಾರಿ ವಕೀಲರು ‘ಬಾಲಕಿಗೆ ಹದಿನೇಳೂವರೆ ವರ್ಷ. ಆಕೆಗೆ ಶಿಕ್ಷಣ ಮುಂದುವರಿಸುವ ಇಚ್ಛೆ ಇದೆ. ಪೋಷಕರು ವ್ಯಾಸಂಗ ಮೊಟಕುಗೊಳಿಸಿ ಮದುವೆಯಾಗಲು ಒತ್ತಾಯಿಸಿದ್ದರು. ಹಾಗಾಗಿ ಆಕೆ ಸ್ವಯಂಪ್ರೇರಿತಳಾಗಿ ಮನೆ ತೊರೆದು ಗೋವಾಗೆ ತೆರಳಿ ಸೋದರ ಮನೆಯಲ್ಲಿ ನೆಲೆಸಿದ್ದಳು’ ಎಂದು ವಿವರಿಸಿದರು. ಆದರೆ ತಾಯಿ ಪರ ವಕೀಲರು ‘ಆಕೆಯನ್ನು ಅಪಹರಿಸಲಾಗಿದೆ. ಈ ವಿಚಾರವನ್ನು ಪೋಲೀಸರು ಮರೆಮಾಚಿದ್ದಾರೆ. ಮದುವೆಯಾಗಲು ಹಾಗೂ ಶಿಕ್ಷಣ ಮೊಟಕುಗೊಳಿಸಲು ಆಕೆಗೆ ತಂದೆ- ತಾಯಿ ಒತ್ತಾಯಿಸಿಲ್ಲ. ಹಾಗಾಗಿ ಆಕೆಯನ್ನು ಪೋಷಕರೊಂದಿಗೆ ಕಳುಹಿಸಿಕೊಡಬೇಕು’ ಎಂದು ಕೋರಿದರು.

ನ್ಯಾಯಪೀಠ ಆಗ ಬಾಲಕಿಯ ನಿಲುವನ್ನು ಕೇಳಿದಾಗ, ಪೋಷಕರೊಂದಿಗೆ ಮನೆಗೆ ಹೋಗಲು ಆಕೆ ನಿರಾಕರಿಸಿ, ಬಾಲ ಮಂದಿರದಲ್ಲಿ ನೆಲೆಸುವುದಾಗಿ ಸ್ಪಷ್ಟಪಡಿಸಿದಳು. ಕೊನೆಗೆ ನ್ಯಾಯಪೀಠ ‘ಈ ವಿಚಾರದಲ್ಲಿ ಬಾಲಕಿಯ ರಕ್ಷಣೆಯೇ ಪ್ರಮುಖವಾಗಿದೆ. ಆಕೆಯ ಸುರಕ್ಷತೆ ಮತ್ತು ಕಲ್ಯಾಣ ಉದ್ದೇಶದಿಂದ ಗದಗದ ಸಂಗೊಳ್ಳಿ ರಾಯಣ್ಣ ಸರ್ಕಲ್‌ ಸಮೀಪದ ಬಾಲಕಿಯರ ಮಂದಿರದಲ್ಲಿಟ್ಟು ಆಕೆಯನ್ನು ಓದಿಸುವುದೇ ಸೂಕ್ತ’ ಎಂದು ಅಭಿಪ್ರಾಯಪಟ್ಟಿತು.
ಸಂತಾನೋತ್ಪತ್ತಿ ಮಹಿಳೆಯ ವೈಯಕ್ತಿಕ ಆಯ್ಕೆ, ಇಚ್ಛೆಗೆ ವಿರುದ್ಧವಾಗಿ ನಡೆಯುವಂತಿಲ್ಲ; ಹೈಕೋರ್ಟ್‌
‘ಆಕೆ ವಯಸ್ಕಳಾಗುವವರೆಗೆ ಅಥವಾ ಪೋಷಕರೊಂದಿಗೆ ಹೋಗಲು ಒಪ್ಪುವವರೆಗೂ ಬಾಲಕಿಯರ ಮಂದಿರದಲ್ಲಿ ಇರಿಸಬೇಕು. ಆಕೆಯ ವ್ಯಾಸಂಗ ಮುಂದುವರಿಕೆ ಖಾತರಿಪಡಿಸಬೇಕು. ಆಕೆ ಪೋಷಕರೊಂದಿಗೆ ಹೋಗಲು ಬಯಸಿದರೆ, ಆಕೆಯ ಸುರಕ್ಷತೆ ಮತ್ತು ಭವಿಷ್ಯಕ್ಕೆ ತೊಂದರೆ ಉಂಟು ಮಾಡುವುದಿಲ್ಲವೆಂದು ಮುಚ್ಚಳಿಕೆ ಪಡೆದು ಕಳುಹಿಸಬೇಕು. ಬಾಲಕಿಯರ ಮಂದಿರದಲ್ಲಿ ಇರುವ ವೇಳೆ ಪೋಷಕರನ್ನು ಕಾಣಲು ಆಕೆ ಬಯಸಿದರೆ ಅದಕ್ಕೆ ಅವಕಾಶ ಮಾಡಿಕೊಡಬೇಕು’ ಎಂದು ಆದೇಶದಲ್ಲಿ ಹೈಕೋರ್ಟ್‌ ಸೂಚಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ