ಆ್ಯಪ್ನಗರ

'ಅಂಬೇಡ್ಕರ್ ಒಬ್ಬರೇ ಸಂವಿಧಾನ ರಚಿಸಿಲ್ಲ' ಶಿಕ್ಷಣ ಇಲಾಖೆ ಕೈಪಿಡಿ ವಿರೋಧಿಸಿ ಐಕ್ಯತಾ ರ‍್ಯಾಲಿಗೆ ಕರೆ

ರಾಜ್ಯ ಸರಕಾರದ ಶಿಕ್ಷಣ ಇಲಾಖೆಯು ಅಂಬೇಡ್ಕರ್ ಒಬ್ಬರೇ ಸಂವಿಧಾನ ರಚಿಸಿಲ್ಲ ಎಂಬ ಹೆಸರಿನ ಮಾರ್ಗದರ್ಶಿ ಕೈಪಿಡಿ ಈಗ ವಿವಾದ ಸೃಷ್ಟಿಸಿದೆ. ಇದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ಐಕ್ಯತಾ ಸಮಿತಿಯು ಬೃಹತ್‌ ಐಕ್ಯತಾ ರ‍್ಯಾಲಿಗೆ ಕರೆ ನೀಡಿದೆ.

Vijaya Karnataka Web 25 Nov 2019, 11:47 pm
ಬೆಂಗಳೂರು: ದೇಶದ ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್‌ ಅವರ ಕೊಡುಗೆ ಎಂತಹದು ಎಂಬುದು ತಿಳಿಯದೇ ಇರುವ ವಿಚಾರವೇನಲ್ಲ. ಆದರೆ ಈ ವಿಷಯವಾಗಿ ಇದೀಗ ವಿವಾದವೊಂದು ತಲೆದೋರಿದೆ.
Vijaya Karnataka Web ambedkar
ಡಾ. ಬಿ.ಆರ್‌ . ಅಂಬೇಡ್ಕರ್‌


ರಾಜ್ಯ ಸರ್ಕಾರ ಹೊರಡಿಸಿರುವ "ಅಂಬೇಡ್ಕರ್ ಒಬ್ಬರೇ ಸಂವಿಧಾನ ರಚಿಸಿಲ್ಲ" ಕೈಪಿಡಿಯು ಈ ವಿವಾದದ ಕೇಂದ್ರಬಿಂದುವಾಗಿದೆ. ರಾಜ್ಯ ಸರಕಾರದ ಶಿಕ್ಷಣ ಇಲಾಖೆಯು ಅಂಬೇಡ್ಕರ್ ಒಬ್ಬರೇ ಸಂವಿಧಾನ ರಚಿಸಿಲ್ಲ ಎಂಬ ಹೆಸರಿನ ಮಾರ್ಗದರ್ಶಿ ಕೈಪಿಡಿಯನ್ನು ಪ್ರಕಟಿಸಿ ಸುತ್ತೋಲೆ ಹೊರಡಿಸಿತ್ತು.

ರಾಜ್ಯ ಸರಕಾರದ ಈ ಕ್ರಮವನ್ನು ರಾಜ್ಯದ ವಿವಿಧ ಸಂಘನೆಗಳು ತೀವ್ರವಾಗಿ ವಿರೋಧಿಸಿವೆ. ಅಲ್ಲದೆ, ರಾಷ್ಟ್ರೀಯ ಸಂವಿಧಾನ ದಿನವಾದ ಮಂಗಳವಾರ (ನ.26) ಬೃಹತ್‌ ಐಕ್ಯತಾ ರ‍್ಯಾಲಿ ಹಮ್ಮಿಕೊಂಡಿವೆ. ಈ ರ‍್ಯಾಲಿಯಲ್ಲಿ ರಾಜ್ಯದ ಸಂವಿಧಾನಪರ ಎಲ್ಲ ದಲಿತ ಸಂಘಟನೆಗಳು, ಹಿಂದುಳಿದ, ಅಲ್ಪಸಂಖ್ಯಾತ, ಮಹಿಳಾ ಮತ್ತು ವಿದ್ಯಾರ್ಥಿ ಸಂಘಟನೆಗಳು, ನೌಕರರು, ಗುತ್ತಿಗೆದಾರರು, ವಕೀಲರು ಭಾಗವಹಿಸಲಿದ್ದಾರೆ.



ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ಮೆಜೆಸ್ಟಿಕ್‌ ರೈಲು ನಿಲ್ದಾಣದಿಂದ ಫ್ರೀಡಂ ಪಾರ್ಕ್‌ವರೆಗೆ ರ‍್ಯಾಲಿ ನಡೆಯಲಿದೆ. ನಂತರ ಫ್ರೀಂಡಂ ಪಾರ್ಕ್‌ನಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಕ್ಷಣಾ ಐಕ್ಯತಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ