ಆ್ಯಪ್ನಗರ

ಯಲಹಂಕದಲ್ಲಿ ರಾಜ್ಯದ ಮೊದಲ ಜೈವಿಕ ಇಂಧನ ಬಂಕ್‌ ಆರಂಭ

ಪಳೆಯುಳಿಕೆ ಇಂಧನಗಳಾದ ಪೆಟ್ರೋಲ್‌, ಡೀಸೆಲ್‌ಗಳು ಮುಗಿದುಹೋಗುವ ಇಂಧನಗಳಾಗಿವೆ. ಜೈವಿಕ ಇಂಧನ ಭವಿಷ್ಯದ ಇಂಧನವಾಗಲಿದ್ದು, ರಾಜ್ಯದ ಮೊದಲ ಜೈವಿಕ ಇಂಧನ ಬಂಕ್‌ ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಬೇಗೂರಿನಲ್ಲಿ ಆರಂಭವಾಗಿದೆ.

Vijaya Karnataka 13 Sep 2019, 6:45 am
ಯಲಹಂಕ: ರಾಜ್ಯದ ಮೊದಲ ಜೈವಿಕ ಇಂಧನ ಬಂಕ್‌ಗೆ ಅಂತರರಾಷ್ಟ್ರೀಯ ವಿಮಾನನಿಲ್ದಾಣ ಸಮೀಪದ ಬೇಗೂರು ಗ್ರಾಮದಲ್ಲಿಗುರುವಾರ ಚಾಲನೆ ಸಿಕ್ಕಿದೆ. ಲಿಮಿಟ್‌ಲೆಸ್‌ ಎನರ್ಜಿ ಎಂಬ ಸಂಸ್ಥೆ ಈ ಬಂಕ್‌ಅನ್ನು ಆರಂಭಿಸಿದೆ. ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಅಂಕಿತ್‌ ರಾಮ ಬಾಬು ಮಾತನಾಡಿ, ''ತಾಳೆಎಣ್ಣೆ, ತ್ಯಾಜ್ಯದ ಎಣ್ಣೆ, ಗೊಬ್ಬರ, ಒಣಗಿದ ತರಗೆಲೆ ಮತ್ತಿತರ ತ್ಯಾಜ್ಯವಸ್ತುಗಳನ್ನು ಬಳಸಿ ಜೈವಿಕ ಇಂಧನವನ್ನು ಉತ್ಪಾದಿಸಲಾಗುತ್ತದೆ. 2020ರ ಅಂತ್ಯಕ್ಕೆ ಬೆಂಗಳೂರು ನಗರದಲ್ಲಿಇಂತಹ ಇನ್ನೂ 20 ಘಟಕಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ.,'' ಎಂದರು.
Vijaya Karnataka Web biofuel


'' ಶೇ.12ರಷ್ಟು ಜಿಎಸ್‌ಟಿ ತೆರಿಗೆ ವಿನಾಯಿತಿ ದೊರೆತಿರುವುದರಿಂದ ಗ್ರಾಹಕರಿಗೆ ಕಡಿಮೆ ದರದಲ್ಲಿಕೊಡಲು ಸಾಧ್ಯವಾಗುತ್ತಿದೆ. ಜೈವಿಕ ಇಂಧನ ದರ ಸಾಮಾನ್ಯ ಡೀಸೆಲ್‌ ದರಕ್ಕಿಂತ 1 ರೂ. ಕಡಿಮೆ ಇದೆ. ಪರಿಸರ ಸ್ನೇಹಿಯಾಗಿರುವ ಈ ಇಂಧನ ಬಳಸುವುದರಿಂದ ವಾಹನದ ಎಂಜಿನ್‌ ಉತ್ತಮ ರೀತಿಯಲ್ಲಿಕಾರ್ಯನಿರ್ವಹಿಸುವುದರ ಜೊತೆಗೆ ದೀರ್ಘಕಾಲ ಬಾಳಿಕೆ ಬರುತ್ತದೆ. ಜೊತೆಗೆ ರೈತರಿಗೂ ಇದರಿಂದ ನೆರವಾಗಲಿದೆ,'' ಎಂದರು.

ಘಟಕದ ವ್ಯವಸ್ಥಾಪಕ ನಿರ್ದೇಶಕ ರಾಮ್‌ಬಾಬು ಬಂಕ್‌ ಅನ್ನು ಉದ್ಘಾಟಿಸಿದರು. ಕರವೇ ಬೆಂಗಳೂರು ನಗರಜಿಲ್ಲಾಘಟಕದ ಅಧ್ಯಕ್ಷ ಸುರೇಶ್‌ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ