ಆ್ಯಪ್ನಗರ

Kempegowda Jayanti: ವಿಧಾನಸೌಧದಲ್ಲಿ ಕೆಂಪೇಗೌಡ ಪ್ರತಿಮೆ ನಿರ್ಮಾಣ: ಸಿಎಂ ಬೊಮ್ಮಾಯಿ ಭರವಸೆ

Kempegowda Jayanti: 'ಕೆಂಪೇಗೌಡ ಕಟ್ಟಿರುವ ನಾಡನ್ನು ಯಾವ ರೀತಿಯಲ್ಲಿ ಮುಂದುವರಿಸಿದ್ದೇವೆ ಎಂಬ ಆತ್ಮಾವಲೋಕನ ಮಾಡುವ ದಿನ ಇದಾಗಿದೆ. ಕೆಂಪೇಗೌಡರು ಪ್ರಜಾಪ್ರಭುತ್ವ ರೀತಿಯಲ್ಲಿ ಆಡಳಿತ ನೀಡಿದರು ಎಂಬುದಕ್ಕೆ ಹಲವು ಕುರುಹುಗಳಿವೆ. ಕೆಂಪೇಗೌಡ ಬೆಂಗಳೂರು ನಗರ ಮಾತ್ರ ಕಟ್ಟಿಲ್ಲ, ಅವರ ವ್ಯಾಪ್ತಿಯಲ್ಲಿದ್ದ ಪ್ರದೇಶಗಳಲ್ಲಿ ಕೆರೆ ಕಟ್ಟಡಗಳನ್ನು ಕಟ್ಟಿದ್ದಾರೆ‌. ಸಣ್ಣ ಸಣ್ಣ ಗ್ರಾಮ ಕಟ್ಟಿದ್ದಾರೆ. ಹಲವಾರು ಸಮುದಾಯಗಳಿಗೆ ಅವಕಾಶ ನೀಡಿದ್ದಾರೆ. ವ್ಯಾಪಾರ ವ್ಯವಹಾರ ಮಾಡಿದ್ದಾರೆ. ಇದು ದೂರ ದೃಷ್ಟಿ ಇರುವ ಆಡಳಿತಗಾರರ ಚಿಂತನೆಯಾಗಿದೆ' -ಸಿಎಂ ಬೊಮ್ಮಾಯಿ

Edited byದಿಲೀಪ್ ಡಿ. ಆರ್. | Reported byಇರ್ಷಾದ್ ಉಪ್ಪಿನಂಗಡಿ | Vijaya Karnataka Web 27 Jun 2022, 3:24 pm

ಹೈಲೈಟ್ಸ್‌:

  • ವಿಧಾನಸೌಧದಲ್ಲಿ ಕೆಂಪೇಗೌಡ ಪ್ರತಿಮೆ ಸ್ಥಾಪಿಸುವ ಪ್ರಸ್ತಾಪ ಈ ಹಿಂದೆಯೇ ನಿರ್ಣಯವಾಗಿತ್ತು
  • 2001ರಲ್ಲಿ ಬಿಬಿಎಂಪಿಯಲ್ಲಿ ಈ ಕುರಿತು ನಿರ್ಣಯ ಆಗಿತ್ತು
  • 12 ಲಕ್ಷ ರೂ. ಮೀಸಲಿಟ್ಟಿದ್ದರೂಪ್ರತಿಮೆ ನಿರ್ಮಾಣ ಆಗಿರಲಿಲ್ಲ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web CM basavaraj bommai
Kempegowda Jayanti: ವಿಧಾನಸೌಧದಲ್ಲಿ ಕೆಂಪೇಗೌಡ ಪ್ರತಿಮೆ ನಿರ್ಮಾಣ: ಸಿಎಂ ಬೊಮ್ಮಾಯಿ ಭರವಸೆ
ಬೆಂಗಳೂರು: ಮುಂದಿನ ವರ್ಷದ ಕೆಂಪೇಗೌಡ ಜಯಂತಿಗೂ ಮೊದಲು ವಿಧಾನಸೌಧದಲ್ಲಿ ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮಾಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸೋಮವಾರ ನಡೆದ ಕೆಂಪೇಗೌಡರ 513 ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಧಾನಸೌಧದಲ್ಲಿ ಕೆಂಪೇಗೌಡ ಪ್ರತಿಮೆ ಬೇಡಿಕೆ ಸೂಕ್ತವಾಗಿದೆ. ಬೆಂಗಳೂರನ್ನು ಕಟ್ಟಿದವರ ಪ್ರತಿಮೆ ನನ್ನ ಪ್ರಕಾರ ಈಗಾಗಲೇ ನಿರ್ಮಾಣ ಆಗಬೇಕಿತ್ತು, ಆದರೆ ಆಗಿಲ್ಲ. ಇವತ್ತು ಸರಿಪಡಿಸಿ ಆ ಕೆಲಸವನ್ನು ಪೂರ್ಣಗೊಳಿಸಲಾಗುವುದು ಎಂದರು.

ಎಸ್.ಎಂ.ಕೃಷ್ಣ, ನಾರಾಯಣಮೂರ್ತಿ, ಪಡುಕೋಣೆಗೆ ಚೊಚ್ಚಲ 'ಕೆಂಪೇಗೌಡ ಅಂತರಾಷ್ಟ್ರೀಯ ಪ್ರಶಸ್ತಿ'
ಮುಂದಿನ ಕೆಂಪೇಗೌಡ ಜಯಂತಿಗೂ ಮೊದಲು ವಿಧಾನಸೌಧದಲ್ಲಿ ಪ್ರತಿಮೆ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು‌.

ವಿಧಾನಸೌಧದಲ್ಲಿ ಕೆಂಪೇಗೌಡ ಪ್ರತಿಮೆ ಸ್ಥಾಪಿಸುವ ಕುರಿತಾಗಿ 2001ರಲ್ಲಿ ಬಿಬಿಎಂಪಿಯಲ್ಲಿ ನಿರ್ಣಯ ಆಗಿತ್ತು. 12 ಲಕ್ಷ ಮೀಸಲಿಡಲಾಗಿತ್ತು. ಆದರೆ ಪ್ರತಿಮೆ ನಿರ್ಮಾಣ ಆಗಿರಲಿಲ್ಲ ಎಂದರು.

ಕೆಂಪೇಗೌಡ ಕಟ್ಟಿರುವ ನಾಡನ್ನು ಯಾವ ರೀತಿಯಲ್ಲಿ ಮುಂದುವರಿಸಿದ್ದೇವೆ ಎಂಬ ಆತ್ಮಾವಲೋಕನ ಮಾಡುವ ದಿನ ಇದಾಗಿದೆ ಎಂದ ಸಿಎಂ ಬೊಮ್ಮಾಯಿ ಅವರು, ಕೆಂಪೇಗೌಡರು ಪ್ರಜಾಪ್ರಭುತ್ವ ರೀತಿಯಲ್ಲಿ ಆಡಳಿತ ನೀಡಿದರು ಎಂಬುದಕ್ಕೆ ಹಲವು ಕುರುಹುಗಳಿವೆ ಎಂದರು‌.


ಕೆಂಪೇಗೌಡ ಬೆಂಗಳೂರು ನಗರ ಮಾತ್ರ ಕಟ್ಟಿಲ್ಲ, ಅವರ ವ್ಯಾಪ್ತಿಯಲ್ಲಿದ್ದ ಪ್ರದೇಶಗಳಲ್ಲಿ ಕೆರೆ ಕಟ್ಟಡಗಳನ್ನು ಕಟ್ಟಿದ್ದಾರೆ‌. ಸಣ್ಣ ಸಣ್ಣ ಗ್ರಾಮ ಕಟ್ಟಿದ್ದಾರೆ. ಹಲವಾರು ಸಮುದಾಯಗಳಿಗೆ ಅವಕಾಶ ನೀಡಿದ್ದಾರೆ. ವ್ಯಾಪಾರ ವ್ಯವಹಾರ ಮಾಡಿದ್ದಾರೆ. ಇದು ದೂರ ದೃಷ್ಟಿ ಇರುವ ಆಡಳಿತಗಾರರ ಚಿಂತನೆಯಾಗಿದೆ ಎಂದರು.

ಬೆಂಗಳೂರಿನಲ್ಲಿ ಜನರಿಗಿಂತ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಪ್ರತಿ ದಿನ‌ ಐದು ಸಾವಿರ ವಾಹನಗಳು ಹೊಸತಾಗಿ ರಸ್ತೆಗಿಳಿಯುತ್ತಿವೆ. ಬೆಂಗಳೂರು ದಿನನಿತ್ಯ ಬೆಳೆಯುತ್ತಿದ್ದು, ಸಮಸ್ಯೆ ಗುರುತಿಸಿ ಅದಕ್ಕೆ ಪರಿಹಾರ ಕಲ್ಪಿಸಬೇಕಾಗಿದೆ ಎಂದರು.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ ಪ್ರತಿಮೆ, ದಿಲ್ಲಿಯಿಂದ ಬಂದ 4,000 ಕೆಜಿ ತೂಕದ ಖಡ್ಗ
ಕಾರ್ಯಕ್ರಮದಲ್ಲಿ ಆದಿ ಚುಂಚನಗಿರಿ ನಿರ್ಮಲಾನಂದ‌ ಶ್ರೀ ಮಾತನಾಡಿ, ಕೆಂಪೇಗೌಡರು ಸರ್ವ ಜನಾಂಗದ ಶಾಂತಿಯ ತೋಟದಂತೆ. ಎಲ್ಲರನ್ನೂ ಸರ್ವ ಸಮಾನರಾಗಿ‌ ನೋಡಿದವರು. ಕೇವಲ ಒಂದು ಜಾತಿಯಿಂದ ಸಮಾಜ ಕಟ್ಟಲು ಸಾಧ್ಯವಿಲ್ಲ ಎಂದರು.

ಬೆಂಗಳೂರಿನಲ್ಲಿ‌ ಜನಸಂಖ್ಯೆ ಹೆಚ್ಚಳಕ್ಕೆ ಆತಂಕ ವ್ಯಕ್ತಪಡಿಸಿದ ಶ್ರೀಗಳು, ಮುಂದಿನ ಇಪ್ಪತ್ತು ಮೂವತ್ತು ವರ್ಷಗಳಲ್ಲಿ ಮೂರರಿಂದ‌ ನಾಲ್ಕು ಕೋಟಿಯಷ್ಟು‌ ಜನಸಂಖ್ಯೆ ಏರಲಿದೆ. ಈ‌ ಹಿಂದೆ ‌ಬೆಂಗಳೂರಿನ‌ ಲ್ಯಾಂಡ್ ಲಾರ್ಡ್ಸ್ ಗಳು ಇಂದು ಸ್ಲಂಗಳಲ್ಲಿ‌ ವಾಸವಿದ್ದಾರೆ ಎಂದರು.

ಕೆಂಪೇಗೌಡರ ದಿನಾಚರಣೆಗೆ ಕೇವಲ ಸಮುದಾಯದ ‌ಶ್ರೀಗಳ ಆಹ್ವಾನ ಅಷ್ಟೇ‌‌ ಬೇಡ, ಸರ್ಕಾರದ‌ ಈ ರೀತಿಯ ಕಾರ್ಯಕ್ರಮಗಳಿಗೆ ಎಲ್ಲಾ ಸಮುದಾಯದ ಸ್ವಾಮೀಜಿಗಳನ್ನು ಆಹ್ವಾನಿಸುವಂತೆ ಸರ್ಕಾರಕ್ಕೆ‌ ಆದಿ ಚುಂಚನಗಿರಿ ನಿರ್ಮಲಾನಂದ‌ ಶ್ರೀ ಸಲಹೆ‌ ನೀಡಿದರು.
ಲೇಖಕರ ಬಗ್ಗೆ
ದಿಲೀಪ್ ಡಿ. ಆರ್.
ವಿಜಯ ಕರ್ನಾಟಕದ ಡಿಜಿಟಲ್ ಪತ್ರಕರ್ತನಾಗಿ 2019ರ ಆಗಸ್ಟ್‌ನಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡ ಟಿವಿ ನ್ಯೂಸ್ ವಾಹಿನಿಗಳಲ್ಲಿ 14 ವರ್ಷಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕಾಡು, ಹಸಿರು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ