ಕೆಂಗೇರಿ ಉಪನಗರ: ಕೆಂಗೇರಿಯ ಗ್ರಾಮದೇವತೆ ಮಾರಮ್ಮದೇವಿಯ ಊರಹಬ್ಬಕ್ಕೆ ಕಳೆಗಟ್ಟಿದ್ದು, ಸುತ್ತಲಿನ ಗ್ರಾಮಗಳಾದ ಕೋಡಿಪಾಳ್ಯ, ಮೈಲಸಂದ್ರ, ಹರ್ಷಬಡಾವಣೆ, ಕಸ್ತೂರಮ್ಮ ಬಡಾವಣೆ, ಶ್ರೀರಾಮ ಬಡಾವಣೆ ಸೇರಿದಂತೆ ಮತ್ತಿತರ ಕಡೆಯಿಂದ ಭಕ್ತರು ವಿವಿಧ ರೂಪದ ಆರತಿಯನ್ನು ಹೊತ್ತು ಮೆರವಣಿಗೆಯಲ್ಲಿ ದೇವಾಲಯಕ್ಕೆ ತಲುಪಿ ಆರತಿ ಸಹಿತ ಕೊಂಡವನ್ನು ಹಾದು ದೇವಿಗೆ ಹರಕೆ ಅರ್ಪಿಸಿದರು.
ವಿವಿಧ ರೂಪದ ಆರತಿ: ನೂರಾರು ಮಹಿಳೆಯರು ಶೃಂಗರಿಸಿದ ನಾಗಮಂಡಲ, ಕರಗ, ಗೋಪುರ, ನವಿಲುಮಂಟಪ, ಮಲ್ಲಿಗೆ ಹೂ ಮತ್ತು ಇನ್ನಿತರ ಹೂಗಳಿಂದ ವಿಶೇಷವಾಗಿ ಆರತಿಯನ್ನು ಅಲಂಕಾರ ಮಾಡಲಾಗಿತ್ತು.
''ಬಾಯಿಗೆ ತಂತಿಯಿಂದ ಚುಚ್ಚಿ ಬೀಗಹಾಕಿ ಹರಕೆಯನ್ನು ಕೆಲವು ಭಕ್ತರು ತೀರಿಸಿದ್ದಾರೆ. ತಮ್ಮ ಇಷ್ಟಾರ್ಥಗಳನ್ನು ದೇವಿ ಈಡೇರಿಸುವಳು ಎಂಬ ನಂಬಿಕೆಯಿಂದ ಅಗ್ನಿಕೊಂಡೋತ್ಸವದಲ್ಲೂ ತಮ್ಮ ಮಕ್ಕಳನ್ನು ಎತ್ತಿಕೊಂಡು ತೆರಳಿ ಹರಕೆ ತೀರಿಸಿದರು,'' ಎಂದು ಅರ್ಚಕ ಕೃಷ್ಣಪ್ಪ ಹೇಳಿದರು.
ಪಾಲಿಕೆ ಸದಸ್ಯ ಆರ್ಯ ಶ್ರೀನಿವಾಸ್, ದೇವಾಲಯ ಸಮಿತಿಯ ಅಧ್ಯಕ್ಷ ಅಂಜಿನಪ್ಪ, ಕಾರ್ಯದರ್ಶಿ ರಾಮಮೂರ್ತಿ, ಜಂಟಿ ಕಾರ್ಯದರ್ಶಿ ಮಾರುತಿ, ಕೆ. ಗೊಲ್ಲಹಳ್ಳಿ ಪಂಚಾಯಿತಿ ಅಧ್ಯಕ್ಷ ಮುನಿಸ್ವಾಮಿ, ಧನಂಜಯ, ಮಾರುತಿ, ಹಾಲು ರಮೇಶ್, ಪೂಜರಿ ಕೃಷ್ಣಪ್ಪ, ಮೈಲಸಂದ್ರ ಮುನಿರಾಜು ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿದ್ದರು.
ಆಟೋರಿಕ್ಷಾ ಸಂಘದ ಪದಾಧಿಕಾರಿಗಳು ಪಾನಕ, ಕೊಸಂಬರಿ, ಮಜ್ಜಿಗೆ ವಿತರಣೆಯ ಸೇವೆಯನ್ನು ಮಾಡಿದರು.
ವಿವಿಧ ರೂಪದ ಆರತಿ: ನೂರಾರು ಮಹಿಳೆಯರು ಶೃಂಗರಿಸಿದ ನಾಗಮಂಡಲ, ಕರಗ, ಗೋಪುರ, ನವಿಲುಮಂಟಪ, ಮಲ್ಲಿಗೆ ಹೂ ಮತ್ತು ಇನ್ನಿತರ ಹೂಗಳಿಂದ ವಿಶೇಷವಾಗಿ ಆರತಿಯನ್ನು ಅಲಂಕಾರ ಮಾಡಲಾಗಿತ್ತು.
''ಬಾಯಿಗೆ ತಂತಿಯಿಂದ ಚುಚ್ಚಿ ಬೀಗಹಾಕಿ ಹರಕೆಯನ್ನು ಕೆಲವು ಭಕ್ತರು ತೀರಿಸಿದ್ದಾರೆ. ತಮ್ಮ ಇಷ್ಟಾರ್ಥಗಳನ್ನು ದೇವಿ ಈಡೇರಿಸುವಳು ಎಂಬ ನಂಬಿಕೆಯಿಂದ ಅಗ್ನಿಕೊಂಡೋತ್ಸವದಲ್ಲೂ ತಮ್ಮ ಮಕ್ಕಳನ್ನು ಎತ್ತಿಕೊಂಡು ತೆರಳಿ ಹರಕೆ ತೀರಿಸಿದರು,'' ಎಂದು ಅರ್ಚಕ ಕೃಷ್ಣಪ್ಪ ಹೇಳಿದರು.
ಪಾಲಿಕೆ ಸದಸ್ಯ ಆರ್ಯ ಶ್ರೀನಿವಾಸ್, ದೇವಾಲಯ ಸಮಿತಿಯ ಅಧ್ಯಕ್ಷ ಅಂಜಿನಪ್ಪ, ಕಾರ್ಯದರ್ಶಿ ರಾಮಮೂರ್ತಿ, ಜಂಟಿ ಕಾರ್ಯದರ್ಶಿ ಮಾರುತಿ, ಕೆ. ಗೊಲ್ಲಹಳ್ಳಿ ಪಂಚಾಯಿತಿ ಅಧ್ಯಕ್ಷ ಮುನಿಸ್ವಾಮಿ, ಧನಂಜಯ, ಮಾರುತಿ, ಹಾಲು ರಮೇಶ್, ಪೂಜರಿ ಕೃಷ್ಣಪ್ಪ, ಮೈಲಸಂದ್ರ ಮುನಿರಾಜು ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿದ್ದರು.
ಆಟೋರಿಕ್ಷಾ ಸಂಘದ ಪದಾಧಿಕಾರಿಗಳು ಪಾನಕ, ಕೊಸಂಬರಿ, ಮಜ್ಜಿಗೆ ವಿತರಣೆಯ ಸೇವೆಯನ್ನು ಮಾಡಿದರು.