ಆ್ಯಪ್ನಗರ

ರಸ್ತೆ ಗುಂಡಿಯಿಂದ ಮತ್ತೊಂದು ಅನಾಹುತ: ಹೊಂಡ ತಪ್ಧಿಸಲು ಹೋಗಿ ಮೆಟ್ರೋ ಪಿಲ್ಲರ್‌ಗೆ ಡಿಕ್ಕಿ ಹೊಡೆದ ಬಸ್‌

ಮೆಟ್ರೋ ಮಾರ್ಗ ನಿರ್ಮಾಣವಾಗಿರುವ ರಸ್ತೆಯುದ್ದಕ್ಕೂ ಹೊಂಡಗಳು ನಿರ್ಮಾಣವಾಗಿವೆ. ಗುಂಡಿ ತಪ್ಪಿಸಲು ಹೋಗಿ ಅಪಘಾತ ನಡೆದಿದೆ ಎನ್ನಲಾಗಿದೆ. ಇದರ ಬೆನ್ನಲ್ಲೇ ‘ಗುಂಡಿ’ಗೆ ಜವಾಬ್ದಾರಿ ಎಂಬುದರ ಕುರಿತು ಚರ್ಚೆ ಶುರುವಾಗಿದೆ.

Vijaya Karnataka Web 9 May 2022, 10:51 pm
ಬೆಂಗಳೂರು: ನಗರದಲ್ಲಿ ಮಳೆಯ ಆರ್ಭಟ ಜೋರಾಗುತ್ತಿರುವಂತೆಯೇ ನರಕಸದೃಶ ರಸ್ತೆ ಗುಂಡಿಗಳ ದರ್ಶನವಾಗುತ್ತಿದ್ದು, ಅನಾಹುತಗಳ ಸರಣಿ ಶುರುವಾಗಿದೆ. ಮೈಸೂರು ರಸ್ತೆಯಲ್ ಲಿಗುಂಡಿ ತಪ್ಪಿಸಲು ಹೋಗಿ ಕೆಎಸ್‌ಆರ್‌ಟಿಸಿ ಬಸ್‌ ಅಪಘಾತಕ್ಕೀಡಾಗಿದ್ದು, 26 ಮಂದಿ ಗಾಯಗೊಂಡಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ.
Vijaya Karnataka Web ಸಂಗ್ರಹ
ಸಂಗ್ರಹ


ಬೆಂಗಳೂರಿನ ಎನ್‌.ಆರ್‌.ಕಾಲೋನಿ ಬಳಿ ಶನಿವಾರ ರಾತ್ರಿ ನಟಿ ಸುನೇತ್ರಾ ಪಂಡಿತ್‌ ಅವರು ರಸ್ತೆ ಗುಂಡಿ ತಪ್ಪಿಸಲು ಹೋಗಿ ದ್ವಿಚಕ್ರ ವಾಹನದಿಂದ ಆಯತಪ್ಪಿ ಬಿದ್ದು, ತೀವ್ರವಾಗಿ ಗಾಯಗೊಂಡಿದ್ದಾರೆ. ಇದರ ಬೆನ್ನಲ್ಲೇ ಮತ್ತೊಂದು ಅನಾಹುತ ಸಂಭವಿಸಿದೆ.

ರಾಜ್ಯ ಶಾಂತವಾಗಿರಲು ಪ್ರಮೋದ್ ಮುತಾಲಿಕ್ ಅವರನ್ನು ಬಂಧಿಸಬೇಕು: ವಾಟಾಳ್ ಆಗ್ರಹ!

ಮೆಟ್ರೋ ಮಾರ್ಗ ನಿರ್ಮಾಣವಾಗಿರುವ ರಸ್ತೆಯುದ್ದಕ್ಕೂ ಹೊಂಡಗಳು ನಿರ್ಮಾಣವಾಗಿವೆ. ಗುಂಡಿ ತಪ್ಪಿಸಲು ಹೋಗಿ ಅಪಘಾತ ನಡೆದಿದೆ ಎನ್ನಲಾಗಿದೆ. ಇದರ ಬೆನ್ನಲ್ಲೇ ‘ಗುಂಡಿ’ಗೆ ಜವಾಬ್ದಾರಿ ಎಂಬುದರ ಕುರಿತು ಚರ್ಚೆ ಶುರುವಾಗಿದೆ. ಇದರ ಬೆನ್ನಲ್ಲೇ ಸ್ಪಷ್ಟೀಕರಣ ನೀಡಿರುವ ಬಿಬಿಎಂಪಿಯು, ನಾಯಂಡಹಳ್ಳಿ ಜಂಕ್ಷನ್‌ನಿಂದ ನೈಸ್‌ ಜಂಕ್ಷನ್‌ವರೆಗಿನ ರಸ್ತೆಯನ್ನು ಬಿಎಂಆರ್‌ಸಿಎಲ್‌ ಈವರೆಗೆ ಹಸ್ತಾಂತರಿಸಿಲ್ಲ. ಆ ರಸ್ತೆಯ ನಿರ್ವಹಣೆಯನ್ನು ಬಿಎಂಆರ್‌ಸಿಎಲ್‌ ಸಂಸ್ಥೆಯೇ ಕೈಗೊಳ್ಳಬೇಕಿರುತ್ತದೆ ಎಂದು ಹೇಳಿದೆ.


ನಡೆದಿದ್ದೇನು?

ಮೈಸೂರು ವಿಭಾಗದ ಕೆ.ಆರ್‌.ನಗರ ಘಟಕಕ್ಕೆ ಸೇರಿದ ಕೆಎಸ್‌ಆರ್‌ಟಿಸಿ ಬಸ್‌ (ಕೆ.ಎ.09, ಎಫ್‌-5230) ಭಾನುವಾರ ತಡರಾತ್ರಿ 1.30ರ ಸುಮಾರಿಗೆ ಕೆಂಗೇರಿ ಸಮೀಪವಿರುವ ಜ್ಞಾನಭಾರತಿ ಮತ್ತು ಪಟ್ಟಣಗೆರೆ ನಡುವಿನ 545 ಮೆಟ್ರೋ ಪಿಲ್ಲರ್‌ಗೆ ಗುದ್ದಿದೆ.

ಮೈಸೂರಿನ ಸಣ್ಣಿಯಮ್ಮ (71) , ಕೆ.ಆರ್‌. ನಗರದ ಮಲ್ಲಿಕಾರ್ಜುನ (31) ಕೇರಳದ ಈರ್ಶಾನ್‌ (27), ಮಡೂಸಾ (24), ಚಾಮರಾಜನಗರದ ಶಶಿಕಲಾ (38) ಹಾಗೂ ಲಿಂಗರಾಜು (42) ಚಾಮರಾಜನಗರ ಗಂಭೀರ ಸ್ಥಿತಿಯಲ್ಲಿದ್ದಾರೆ. ಬಸ್ಸಿನಲ್ಲಿ45 ಮಂದಿ ಪ್ರಯಾಣಿಕರಿದ್ದರು. ಡಿಕ್ಕಿಯ ಪರಿಣಾಮ ವಿಭಜಕ, ಪಿಲ್ಲರ್‌ಗೆ ಅಳವಡಿಸಿದ್ದ ಕ್ರ್ಯಾಶ್‌ ಬ್ಯಾರಿಯರ್‌ ಹಾನಿಯಾಗಿದೆ.

ಚಾಲಕ ವೆಂಕಟರಾಮ ಅವರಿಗೆ ಹೊಟ್ಟೆಯ ಭಾಗಕ್ಕೆ ಸ್ಟೇರಿಂಗ್‌ ತಗುಲಿ ಗಾಯವಾಗಿದೆ. ಮತ್ತೊಬ್ಬ ಹೆಚ್ಚುವರಿ ಚಾಲಕ ಮಂಜುನಾಥ್‌ ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಕೆಂಗೇರಿಯ ಸುಪ್ರಾ ಆಸ್ಪತ್ರೆ, ಮೈಸೂರು ರಸ್ತೆಯ ಪಿನಾಕಲ್‌ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆಯಲ್ಲಿಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಐವರಿಗೆ ಶಸ್ತ್ರಚಿಕಿತ್ಸೆ ಅಗತ್ಯ

ಕೆಂಗೇರಿ ಸುಪ್ರಾ ಆಸ್ಪತ್ರೆಗೆ ದಾಖಲಾಗಿದ್ದ 12 ಮಂದಿ ಗಾಯಾಳುಗಳ ಪೈಕಿ ಐವರಿಗೆ ತೀವ್ರ ಪೆಟ್ಟಾಗಿದ್ದು, ಶಸ್ತ್ರಚಿಕಿತ್ಸೆ ಮಾಡಬೇಕಿದೆ. ಉಳಿದ ಏಳು ಮಂದಿಯನ್ನು ವಾರ್ಡ್‌ಗೆ ವರ್ಗಾಯಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಪಿನಾಕಲ್‌ ಆಸ್ಪತ್ರೆಗೆ ಆರು ಮಂದಿ ಗಾಯಾಳುಗಳು ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಆರು ಮಂದಿ ಪ್ರಯಾಣಿಕರು ವಿಕ್ಟೋರಿಯಾ ಆಸ್ಪತ್ರೆ ಹೊರರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. ಆಸ್ಪತ್ರೆಗೆ ದಾಖಲಾಗಿರುವ ಎಲ್ಲ ಗಾಯಾಳುಗಳಿಗೆ ಪೂರ್ಣ ಪ್ರಮಾಣದ ಚಿಕಿತ್ಸಾ ವೆಚ್ಚವನ್ನು ನಿಗಮದಿಂದ ಭರಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

ಬೆಂಗಳೂರು: ಗಾಳಿ, ಮಳೆ ಅಬ್ಬರಕ್ಕೆ ಹಲವೆಡೆ ಹಾನಿ, ವಿದ್ಯುತ್ ವ್ಯತ್ಯಯ

ಪಿಲ್ಲರ್‌ಗೆ ಹಾನಿಯಾಗಿಲ್ಲ

ಅಪಘಾತ ನಡೆದ ಸ್ಥಳಕ್ಕೆ ಭೇಟಿ ಕೊಟ್ಟು ಬಿಎಂಆರ್‌ಸಿಎಲ್‌ ಹಿರಿಯ ಅಧಿಕಾರಿಗಳು ಪರಿಶೀಲಿಸಿದರು. ‘‘ಕ್ರ್ಯಾಶ್‌ ಬ್ಯಾರಿಯರ್‌ ಅಳವಡಿಸಿರುವುದರಿಂದ ಪಿಲ್ಲರ್‌ಗೆ ಯಾವುದೇ ಹಾನಿಯಾಗಿಲ್ಲ. ಉಕ್ಕಿನ ರೇಲಿಂಗ್‌ ಮುರಿದು ಹೋಗಿದೆ. ಪಿಲ್ಲರ್‌ ಮೇಲೆ ಕೇವಲ ಗೀರುಗಳು ಮಾತ್ರ ಕಂಡು ಬಂದಿವೆ. ಪಿಲ್ಲರ್‌ಗೆ ಹಾನಿಯಾಗಿಲ್ಲ’’ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ