ಆ್ಯಪ್ನಗರ

ಬೆಂಗಳೂರು: ಕಾಣೆಯಾಗಿದ್ದ ಲ್ಯಾಪ್‌ಟಾಪ್‌ ಮೂರು ಗಂಟೆಗಳಲ್ಲಿ ಪತ್ತೆ

ತಮ್ಮ ಊರಿಗೆ ತೆರಳಲೆಂದು ಅವರಿಬ್ಬರು ತಾವು ಉಳಿದುಕೊಂಡಿದ್ದ ಕೆಂಚಾಂಬ ಲಾಡ್ಜ್‌ನಿಂದ ಆಟೋ ಹತ್ತಿದ್ದಾರೆ. ಮಾರ್ಗಮಧ್ಯೆ ಕೆ.ಆರ್‌. ವೃತ್ತದಲ್ಲಿರುವ ಕಾಂತಿ ಸ್ವೀಟ್ಸ್‌ ಬೇಕರಿಯಲ್ಲಿ ಸ್ವೀಟ್‌ ಖರೀದಿಸಲೆಂದು ಲ್ಯಾಪ್‌ಟಾಪ್‌ ಬ್ಯಾಗ್‌ ಆಟೋದಲ್ಲಿ ಬಿಟ್ಟು ಇಬ್ಬರು ಕೆಳಗಿಳಿದಿದ್ದಾರೆ.

Vijaya Karnataka 14 Oct 2021, 9:49 pm
ಬೆಂಗಳೂರು: ಆಟೋದಲ್ಲಿ ರೈಲ್ವೆ ನಿಲ್ದಾಣಕ್ಕೆ ಬರುತ್ತಿದ್ದ ಪ್ರಯಾಣಿಕರ ಲ್ಯಾಪ್‌ಟಾಪ್‌ ಬ್ಯಾಗ್‌ ಸಹಿತ ಪರಾರಿಯಾಗಿದ್ದ ಆಟೋ ಚಾಲಕನನ್ನು ಮೂರು ಗಂಟೆಗಳಲ್ಲಿ ಪತ್ತೆ ಹಚ್ಚಿರುವ ಉಪ್ಪಾರಪೇಟೆ ಠಾಣೆ ಪೊಲೀಸರು, ಲ್ಯಾಪ್‌ಟಾಪ್‌ ಅನ್ನು ಮಾಲೀಕರಿಗೆ ಒಪ್ಪಿಸಿದ್ದಾರೆ.
Vijaya Karnataka Web ಪೊಲೀಸ್‌
ಪೊಲೀಸ್‌


ಸುರಪುರದ ಗುರುರಾಜ್‌ (37) ಲ್ಯಾಪ್‌ಟಾಪ್‌ ಕಳೆದುಕೊಂಡಿದ್ದವರು. ಲ್ಯಾಪ್‌ಟಾಪ್‌ ಬ್ಯಾಗ್‌ ಸಹಿತ ಪರಾರಿಯಾಗಿದ್ದ ಆಟೋ ಚಾಲಕ ಕೆ.ಪಿ. ಅಗ್ರಹಾರದ ಮಹದೇವ್‌ (45) ಎಂಬುವರನ್ನು ಪತ್ತೆಹಚ್ಚಿ ಲ್ಯಾಪ್‌ಟಾಪ್‌ ಪಡೆದಿದ್ದಾರೆ.

ಏನಿದು ಘಟನೆ?

ಗುರುರಾಜ್‌ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಬರುವ ಆಹಾರವನ್ನು ಅಂಗನವಾಡಿಗಳಿಗೆ ಸರಬರಾಜು ಮಾಡುವ ಕೆಲಸ ಮಾಡುತ್ತಿದ್ದರು. ಇದೇ ಕೆಲಸದ ಸಂಬಂಧ ಬೆಂಗಳೂರಿನಲ್ಲಿ ಕರೆದಿದ್ದ ಸಭೆಯಲ್ಲಿ ಗುರುರಾಜ್‌ ಮತ್ತು ಅವರ ಸ್ನೇಹಿತ ಕೂಡ ಭಾಗವಹಿಸಿದ್ದರು.

ಐಎಎಸ್‌ ಅಧಿಕಾರಿ ಸೋಗಿನಲ್ಲಿ 20ಕ್ಕೂ ಹೆಚ್ಚು ಜನರಿಗೆ ವಂಚಿಸಿದ್ದ ವ್ಯಕ್ತಿ ಬಂಧನ!

ಮಂಗಳವಾರ ರಾತ್ರಿ ತಮ್ಮ ಊರಿಗೆ ತೆರಳಲೆಂದು ಅವರಿಬ್ಬರು ತಾವು ಉಳಿದುಕೊಂಡಿದ್ದ ಕೆಂಚಾಂಬ ಲಾಡ್ಜ್‌ನಿಂದ ಆಟೋ ಹತ್ತಿದ್ದಾರೆ. ಮಾರ್ಗಮಧ್ಯೆ ಕೆ. ಆರ್‌. ವೃತ್ತದಲ್ಲಿರುವ ಕಾಂತಿ ಸ್ವೀಟ್ಸ್‌ ಬೇಕರಿಯಲ್ಲಿ ಸ್ವೀಟ್‌ ಖರೀದಿಸಲೆಂದು ಲ್ಯಾಪ್‌ಟಾಪ್‌ ಬ್ಯಾಗ್‌ ಆಟೋದಲ್ಲಿ ಬಿಟ್ಟು ಇಬ್ಬರು ಕೆಳಗಿಳಿದಿದ್ದಾರೆ.

ಸ್ವೀಟ್‌ ತರುವವರೆಗೂ ಕಾಯುವುದಾಗಿ ಹೇಳಿದ ಆಟೋ ಚಾಲಕ ಇವರು ಅತ್ತ ಹೋಗುತ್ತಿದ್ದಂತೆ ಲ್ಯಾಪ್‌ಟಾಪ್‌ ಬ್ಯಾಗ್‌ ಸಮೇತ ಪರಾರಿಯಾಗಿದ್ದ. ಇತ್ತ ಗಂಟೆಗಟ್ಟಲೇ ಕಾದರೂ ಆಟೋ ಚಾಲಕ ಪತ್ತೆಯಾಗದಿದ್ದಾಗ ಉಪ್ಪಾರಪೇಟೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ದಾಖಲೆ ಮಳೆಗೆ ಬೆಚ್ಚಿದ ಬೆಂಗಳೂರು: ಮುಳುಗಿದ ರಸ್ತೆಯಲ್ಲಿ ಟ್ರಾಕ್ಟರ್‌ನಲ್ಲಿ ಏರ್ಪೋರ್ಟ್‌ಗೆ ತೆರೆಳಿದ ಪ್ರಯಾಣಿಕರು

ಕೂಡಲೇ ಠಾಣೆ ನಿರೀಕ್ಷಕ ಶಿವಸ್ವಾಮಿ ಮಾರ್ಗದರ್ಶನದಲ್ಲಿಉಪ ನಿರೀಕ್ಷಕ ಮಾರುತಿ ಅಕ್ಷಿಬಾಗಿಲು, ಎಎಸ್‌ಐ ನಂದೀಶ್‌ ಹಾಗೂ ಸಿಬ್ಬಂದಿಗಳು ಆರೋಪಿಯ ಪತ್ತೆಗಾಗಿ ಕಾರ್ಯಾಚರಣೆಗೆ ಸಿದ್ಧರಾದರು. ಮೊದಲು ತಂಡ ಕೆಂಚಾಂಬ ಲಾಡ್ಜ್‌ ಬಳಿ ಸಿಸಿ ಟಿವಿ ದೃಶ್ಯಾವಳಿ ಪರಿಶೀಲಿಸಿತು.

ಆದರೆ, ಆಟೋ ನಂಬರ್‌ ಸ್ಪಷ್ಟವಾಗಿಲ್ಲದ ಕಾರಣ ಕಾಂತಿ ಸ್ವೀಟ್ಸ್‌ ಬೇಕರಿ ಬಳಿ ಬಂದು ಅಲ್ಲಿನ ಸಿಸಿಟಿವಿ ಪರಿಶೀಲಿಸಿತು. ಈ ವೇಳೆ ಎರಡು ನಂಬರ್‌ಗಳು ಹೊಂದಾಣಿಕೆಯಾಗುವುದು ಕಂಡುಬಂದ ಕೂಡಲೇ ಆ ಆಟೋ ವಿಳಾಸ ಬೆನ್ನತ್ತಿದಾಗ ಮಹದೇವ್‌ ಪತ್ತೆಯಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ