ಬೆಂಗಳೂರು: ರಾಜಧಾನಿ ಬೆಂಗಳೂರಿನ ಜೆ. ಪಿ. ನಗರದಲ್ಲಿ ಇರುವ ರಂಗ ಶಂಕರದಲ್ಲಿ ಅಕ್ಟೋಬರ್ 28 ಗುರುವಾರದಂದು ‘ಲಾಕ್ಡೌನ್’ ಎಂಬ ಹೆಸರಿನ ಕನ್ನಡ ನಾಟಕವೊಂದು ಪ್ರದರ್ಶನ ಕಾಣಲಿದೆ. ಗುರುವಾರ ಸಂಜೆ 7 ಗಂಟೆಗೆ ನಾಟಕ ಪ್ರದರ್ಶನ ಆಗಲಿದೆ.
ಲಾಕ್ಡೌನ್ ಕಥಾವಸ್ತು
ಕೊರೊನಾ ವೈರಸ್ ಸೋಂಕು ತೀವ್ರ ಸ್ವರೂಪದಲ್ಲಿ ಹರಡುತ್ತಿದ್ದಾಗ ಲಾಕ್ಡೌನ್ ಅನ್ನೇ ಕಥಾವಸ್ತುವನ್ನಾಗಿ ಈ ನಾಟಕದಲ್ಲಿ ಬಳಸಿಕೊಳ್ಳಲಾಗಿದೆ. ಇದೆಂದೂ ಕಂಡು ಕೇಳರಿಯದ ಲಾಕ್ಡೌನ್ ವೇಳೆ ಎದುರಾದ ಸಾಮಾಜಿಕ, ಆರ್ಥಿಕ ಸಂಕಷ್ಟಗಳನ್ನು ಈ ನಾಟಕದಲ್ಲಿ ವಿಶಿಷ್ಠವಾಗಿ ಬಿಂಬಿಸಲಾಗಿದೆ.
ಈ ವಿಶಿಷ್ಠ ರಂಗ ಪ್ರಯೋಗದಲ್ಲಿ ನಾಲ್ಕು ವಿವಿಧ ಸಾಮಾಜಿಕ ಹಾಗೂ ಆರ್ಥಿಕ ಸ್ಥರಗಳಿಗೆ ಸೇರಿರುವ ಜನರ ಜೀವನದ ಮೇಲೆ ಲಾಕ್ಡೌನ್ನಿಂದ ಎದುರಾದ ಸನ್ನಿವೇಶಗಳು, ಸವಾಲುಗಳನ್ನು ಬಗೆಹರಿಸುವ ನಾಲ್ಕು ಉಪಕಥೆಗಳ ಸಂಕಲನವೇ ಈ ನಾಟಕದ ಕಥಾ ವಸ್ತು.
ಬೇರೆ ಬೇರೆ ದೇಶದಲ್ಲಿ ವಾಸವಾಗಿರುವ ಮಲತಾಯಿ ಮತ್ತು ಮಲಮಗಳು, ಕೆಲಸದ ಕಾರಣದಿಂದಾಗಿ ಬೇರೆ ಊರುಗಳಲ್ಲಿ ಸಿಲುಕಿರುವ ನವ ದಂಪತಿ, ಅಜ್ಜಿಯನ್ನು ಕಳೆದುಕೊಂಡು ದುಃಖಿಸುತ್ತಿರುವ ಮಗನಿಗೆ ಆಧಾರವಾಗಿ ನಿಲ್ಲಲು ಹೆಣಗಾಡುತ್ತಿರುವ ಎನ್ಆರ್ಐ ದಂಪತಿ, ಕೂಳಿಗಾಗಿ ಹೆಂಡತಿಯನ್ನು ಊರಿನಲ್ಲಿ ಬಿಟ್ಟು ಬಂದು ಪಟ್ಟಣದಲ್ಲಿ ತುತ್ತಿಗಾಗಿ ಪರಿತಪಿಸುವ ಗಂಡ ಹೀಗೆ ಹಲವು ಪಡಿಪಾಟಲುಗಳು, ಪರೀಕ್ಷೆಗಳಿಗೆ ಜನರು ಒಳಗಾದ ನಂತರದ ಪರಿಣಾಮಗಳೇನು..? ಸಂಬಂಧಗಳು ಯಥಾಸ್ಥಿತಿಗೆ ಮರಳುತ್ತವೆಯೇ? ಅಥವಾ ಹೊಸ ಆಯಾಮ ಪಡೆದುಕೊಳ್ಳುತ್ತವೆಯೇ? ಈ ಎಲ್ಲಾ ಪ್ರಶ್ನೆಗಳಿಗೆ ನಾಟಕದಲ್ಲಿ ಉತ್ತರವಿದೆ.
ಲಾಕ್ಡೌನ್ ವೇಳೆ ಜಗತ್ತಿನ ಎಲ್ಲ ವ್ಯವಸ್ಥೆಗಳೂ ಪರ್ಯಾಯ ಮಾರ್ಗಗಳನ್ನು ಹುಡುಕಿಕೊಂಡವು. ಆದರೆ, ಮಾನವ ಸಂಬಂಧಗಳನ್ನು ನಿರ್ವಹಿಸುವ, ಪೋಷಿಸುವ ಮಾರ್ಗಗಳು ಸವಾಲಾಗಿಯೇ ಉಳಿದವು. ಲಾಕ್ಡೌನ್ ಎಂಬ ಅಗ್ನಿ ಪರೀಕ್ಷೆ ಮಾನವರ ಅಭಿವ್ಯಕ್ತಿ, ಸಂಬಂಧಗಳು, ಭಾವನೆಗಳಿಗೆ ಸವಾಲೊಡ್ಡಿದಾಗ ಅದನ್ನು ಭೇದಿಸಿ ಸಂಬಂಧಗಳ ಅಸ್ತಿತ್ವವನ್ನು ಉಳಿಸಿಕೊಳ್ಳಲು ಜನ ಸಾಮಾನ್ಯರು ಹೋರಾಡುವ ಕಥಾನಕವೇ ಈ ‘ಲಾಕ್ಡೌನ್’ ನಾಟಕ.
ಅಚಾನಕ್ ಆಗಿ ವಿಧಿಸಲಾದ ಲಾಕ್ಡೌನ್ನಿಂದ ಯಥಾಪ್ರಕಾರವಾಗಿ ನಡೆಯುತ್ತಿದ್ದ ಜನ ಜೀವನದಲ್ಲಿ ಕಣಿವೆಗಳು ಸೃಷ್ಟಿಯಾಗಿ ಬಿರುಕು ಉಂಟಾಯ್ತು. ಕೆಲ ಸಮಯದವರೆಗೆ ಇಡೀ ಜಗತ್ತೇ ಸ್ಥಬ್ಧಗೊಂಡಿತು. ನಮ್ಮೆಲ್ಲರ ಸಾಮಾಜಿಕ, ಸಮುದಾಯ ಜೀವನ ರಾತ್ರೋರಾತ್ರಿ ಬದಲಾಯ್ತು. ಅದರೊಂದಿಗೆ ನಮ್ಮ ಜೀವನದಲ್ಲಿ ಯಾವುದು ಮುಖ್ಯ, ಯಾವುದು ಅಮುಖ್ಯ ಅನ್ನೋದನ್ನು ಮನವರಿಕೆ ಮಾಡಿಕೊಳ್ಳಲು ಸಮಯಾವಕಾಶ ಒದಗಿ ಬಂತು. ಈ ಎಲ್ಲಾ ವಿಚಾರಗಳನ್ನು ‘ಲಾಕ್ಡೌನ್’ ಎಂಬ ರಂಗ ಪ್ರಯೋಗದಲ್ಲಿ ಮನೋಜ್ಞವಾಗಿ ಕಟ್ಟಿಕೊಡಲಾಗಿದೆ.
ಲಾಕ್ಡೌನ್ ಕಥಾವಸ್ತು
ಕೊರೊನಾ ವೈರಸ್ ಸೋಂಕು ತೀವ್ರ ಸ್ವರೂಪದಲ್ಲಿ ಹರಡುತ್ತಿದ್ದಾಗ ಲಾಕ್ಡೌನ್ ಅನ್ನೇ ಕಥಾವಸ್ತುವನ್ನಾಗಿ ಈ ನಾಟಕದಲ್ಲಿ ಬಳಸಿಕೊಳ್ಳಲಾಗಿದೆ. ಇದೆಂದೂ ಕಂಡು ಕೇಳರಿಯದ ಲಾಕ್ಡೌನ್ ವೇಳೆ ಎದುರಾದ ಸಾಮಾಜಿಕ, ಆರ್ಥಿಕ ಸಂಕಷ್ಟಗಳನ್ನು ಈ ನಾಟಕದಲ್ಲಿ ವಿಶಿಷ್ಠವಾಗಿ ಬಿಂಬಿಸಲಾಗಿದೆ.
ಈ ವಿಶಿಷ್ಠ ರಂಗ ಪ್ರಯೋಗದಲ್ಲಿ ನಾಲ್ಕು ವಿವಿಧ ಸಾಮಾಜಿಕ ಹಾಗೂ ಆರ್ಥಿಕ ಸ್ಥರಗಳಿಗೆ ಸೇರಿರುವ ಜನರ ಜೀವನದ ಮೇಲೆ ಲಾಕ್ಡೌನ್ನಿಂದ ಎದುರಾದ ಸನ್ನಿವೇಶಗಳು, ಸವಾಲುಗಳನ್ನು ಬಗೆಹರಿಸುವ ನಾಲ್ಕು ಉಪಕಥೆಗಳ ಸಂಕಲನವೇ ಈ ನಾಟಕದ ಕಥಾ ವಸ್ತು.
ಬೇರೆ ಬೇರೆ ದೇಶದಲ್ಲಿ ವಾಸವಾಗಿರುವ ಮಲತಾಯಿ ಮತ್ತು ಮಲಮಗಳು, ಕೆಲಸದ ಕಾರಣದಿಂದಾಗಿ ಬೇರೆ ಊರುಗಳಲ್ಲಿ ಸಿಲುಕಿರುವ ನವ ದಂಪತಿ, ಅಜ್ಜಿಯನ್ನು ಕಳೆದುಕೊಂಡು ದುಃಖಿಸುತ್ತಿರುವ ಮಗನಿಗೆ ಆಧಾರವಾಗಿ ನಿಲ್ಲಲು ಹೆಣಗಾಡುತ್ತಿರುವ ಎನ್ಆರ್ಐ ದಂಪತಿ, ಕೂಳಿಗಾಗಿ ಹೆಂಡತಿಯನ್ನು ಊರಿನಲ್ಲಿ ಬಿಟ್ಟು ಬಂದು ಪಟ್ಟಣದಲ್ಲಿ ತುತ್ತಿಗಾಗಿ ಪರಿತಪಿಸುವ ಗಂಡ ಹೀಗೆ ಹಲವು ಪಡಿಪಾಟಲುಗಳು, ಪರೀಕ್ಷೆಗಳಿಗೆ ಜನರು ಒಳಗಾದ ನಂತರದ ಪರಿಣಾಮಗಳೇನು..? ಸಂಬಂಧಗಳು ಯಥಾಸ್ಥಿತಿಗೆ ಮರಳುತ್ತವೆಯೇ? ಅಥವಾ ಹೊಸ ಆಯಾಮ ಪಡೆದುಕೊಳ್ಳುತ್ತವೆಯೇ? ಈ ಎಲ್ಲಾ ಪ್ರಶ್ನೆಗಳಿಗೆ ನಾಟಕದಲ್ಲಿ ಉತ್ತರವಿದೆ.
ಲಾಕ್ಡೌನ್ ವೇಳೆ ಜಗತ್ತಿನ ಎಲ್ಲ ವ್ಯವಸ್ಥೆಗಳೂ ಪರ್ಯಾಯ ಮಾರ್ಗಗಳನ್ನು ಹುಡುಕಿಕೊಂಡವು. ಆದರೆ, ಮಾನವ ಸಂಬಂಧಗಳನ್ನು ನಿರ್ವಹಿಸುವ, ಪೋಷಿಸುವ ಮಾರ್ಗಗಳು ಸವಾಲಾಗಿಯೇ ಉಳಿದವು. ಲಾಕ್ಡೌನ್ ಎಂಬ ಅಗ್ನಿ ಪರೀಕ್ಷೆ ಮಾನವರ ಅಭಿವ್ಯಕ್ತಿ, ಸಂಬಂಧಗಳು, ಭಾವನೆಗಳಿಗೆ ಸವಾಲೊಡ್ಡಿದಾಗ ಅದನ್ನು ಭೇದಿಸಿ ಸಂಬಂಧಗಳ ಅಸ್ತಿತ್ವವನ್ನು ಉಳಿಸಿಕೊಳ್ಳಲು ಜನ ಸಾಮಾನ್ಯರು ಹೋರಾಡುವ ಕಥಾನಕವೇ ಈ ‘ಲಾಕ್ಡೌನ್’ ನಾಟಕ.
ಅಚಾನಕ್ ಆಗಿ ವಿಧಿಸಲಾದ ಲಾಕ್ಡೌನ್ನಿಂದ ಯಥಾಪ್ರಕಾರವಾಗಿ ನಡೆಯುತ್ತಿದ್ದ ಜನ ಜೀವನದಲ್ಲಿ ಕಣಿವೆಗಳು ಸೃಷ್ಟಿಯಾಗಿ ಬಿರುಕು ಉಂಟಾಯ್ತು. ಕೆಲ ಸಮಯದವರೆಗೆ ಇಡೀ ಜಗತ್ತೇ ಸ್ಥಬ್ಧಗೊಂಡಿತು. ನಮ್ಮೆಲ್ಲರ ಸಾಮಾಜಿಕ, ಸಮುದಾಯ ಜೀವನ ರಾತ್ರೋರಾತ್ರಿ ಬದಲಾಯ್ತು. ಅದರೊಂದಿಗೆ ನಮ್ಮ ಜೀವನದಲ್ಲಿ ಯಾವುದು ಮುಖ್ಯ, ಯಾವುದು ಅಮುಖ್ಯ ಅನ್ನೋದನ್ನು ಮನವರಿಕೆ ಮಾಡಿಕೊಳ್ಳಲು ಸಮಯಾವಕಾಶ ಒದಗಿ ಬಂತು. ಈ ಎಲ್ಲಾ ವಿಚಾರಗಳನ್ನು ‘ಲಾಕ್ಡೌನ್’ ಎಂಬ ರಂಗ ಪ್ರಯೋಗದಲ್ಲಿ ಮನೋಜ್ಞವಾಗಿ ಕಟ್ಟಿಕೊಡಲಾಗಿದೆ.