ಆ್ಯಪ್ನಗರ

ಲೋಕೋ ಪೈಲಟ್‌ ಮೇಲೆ ಹಲ್ಲೆ

ಮೈಸೂರಿನ ವಿದ್ಯಾರಣ್ಯಪುರ ನಿವಾಸಿ ರಾಜೇಶ್‌ ಕಣ್ಣನ್‌(42) ಹಲ್ಲೆಗೊಳಗಾದವರು. ಮೇ 4ರಂದು ಬೆಳಗ್ಗೆ 5.45ರ ಸುಮಾರಿಗೆ ರೈಲು ನಿಲ್ದಾಣದ ಸಿಬ್ಬಂದಿ ವಿಶ್ರಾಂತಿ ಕೊಠಡಿ ಬಳಿ ಈ ಘಟನೆ ನಡೆದಿದೆ.

Vijaya Karnataka 11 May 2019, 5:00 am
ವಿಕ ಸುದ್ದಿಲೋಕ ಬೆಂಗಳೂರು
Vijaya Karnataka Web loco pilot attacked by unknown
ಲೋಕೋ ಪೈಲಟ್‌ ಮೇಲೆ ಹಲ್ಲೆ


ಹಣಕ್ಕಾಗಿ ದುಷ್ಕರ್ಮಿಯೊಬ್ಬ ರೈಲ್ವೆ ಲೋಕೋ ಪೈಲಟ್‌ ತಲೆಗೆ ಕಲ್ಲಿನಿಂದ ಹಲ್ಲೆ ಮಾಡಿರುವ ಘಟನೆ ನಗರ ರೈಲು ನಿಲ್ದಾಣದಲ್ಲಿ ನಡೆದಿದೆ.

ಮೈಸೂರಿನ ವಿದ್ಯಾರಣ್ಯಪುರ ನಿವಾಸಿ ರಾಜೇಶ್‌ ಕಣ್ಣನ್‌(42) ಹಲ್ಲೆಗೊಳಗಾದವರು. ಮೇ 4ರಂದು ಬೆಳಗ್ಗೆ 5.45ರ ಸುಮಾರಿಗೆ ರೈಲು ನಿಲ್ದಾಣದ ಸಿಬ್ಬಂದಿ ವಿಶ್ರಾಂತಿ ಕೊಠಡಿ ಬಳಿ ಈ ಘಟನೆ ನಡೆದಿದೆ. ತಲೆಗೆ ಪೆಟ್ಟುಬಿದ್ದು ತೀವ್ರ ರಕ್ತಸ್ರಾವವಾದ ಹಿನ್ನೆಲೆಯಲ್ಲಿ ರೈಲ್ವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ರಾಜೇಶ್‌ ಅವರು ನಂತರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

''ಮೇ 4ರಂದು ಬೆಳಗ್ಗೆ ಬೆಂಗಳೂರು-ಹುಬ್ಬಳ್ಳಿ ಫಾಸ್ಟ್‌ ಪ್ಯಾಸೆಂಜರ್‌ ರೈಲಿನಲ್ಲಿ ಕರ್ತವ್ಯಕ್ಕೆ ತೆರಳಲು ನಿಲ್ದಾಣದ ರೈಲ್ವೆ ಚಾಲಕರ ವಿಶ್ರಾಂತಿ ಗೃಹದಿಂದ ಸಿಬ್ಬಂದಿ ಕೊಠಡಿ ಕಡೆಗೆ ಹೋಗುತ್ತಿದ್ದೆ. ಈ ವೇಳೆ ಏಕಾಏಕಿ ಕಲ್ಲು ಹಿಡಿದುಕೊಂಡು ಬಂದ ಅಪರಿಚಿತ ವ್ಯಕ್ತಿಯೊಬ್ಬ ಪರ್ಸ್‌ ಎಲ್ಲಿ? ಹಣ ಕೊಡು ಎಂದು ತಮಿಳಿನಲ್ಲಿ ಕೇಳಿದ. ಆಗ ಹಣ ಕೊಡುವವನಂತೆ ನಟಿಸಿ ಮುಂದಕ್ಕೆ ಹೋದೆ. ಕೂಡಲೇ ಹಣ ಕೇಳಿದ ವ್ಯಕ್ತಿ ತನ್ನ ಕೈಯಲ್ಲಿದ್ದ ಕಲ್ಲಿನಿಂದ ಹಲ್ಲೆ ಮಾಡಿದ್ದಾನೆ,'' ಎಂದು ರಾಜೇಶ್‌ ವಿವರಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ನಗರ ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ