ಮೈತ್ರಿ ಪಕ್ಷಗಳ ಕಿತ್ತಾಟದ ನಡುವೆ ನೀರಸ ಮತದಾನ
ಬಿಬಿಎಂಪಿಯ ಬಿನ್ನಿಪೇಟೆ ವಾರ್ಡ್ನ ಉಪ ಚುನಾವಣೆ ಮತದಾನಕ್ಕೆ ಮತದಾರರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಕೇವಲ ಶೇ. 43.54ರಷ್ಟು ಮತದಾನದ ಪ್ರಮಾಣ ದಾಖಲಾಯಿತು. ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ, ಮಾತಿನ ಚಕಮಕಿಗೂ ಉಪ ಚುನಾವಣೆ ಸಾಕ್ಷಿಯಾಯಿತು. ಪೊಲೀಸರು ಎರಡೂ ಪಕ್ಷಗಳ ಕಾರ್ಯಕರ್ತರನ್ನು ಚದುರಿಸಿ ಮತದಾನಕ್ಕೆ ಅವಕಾಶ ಮಾಡಿಕೊಟ್ಟರು.
Vijaya Karnataka 19 Jun 2018, 10:06 am
ಬೆಂಗಳೂರು: ಬಿಬಿಎಂಪಿಯ ಬಿನ್ನಿಪೇಟೆ ವಾರ್ಡ್ನ ಉಪ ಚುನಾವಣೆ ಮತದಾನಕ್ಕೆ ಮತದಾರರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಕೇವಲ ಶೇ. 43.54ರಷ್ಟು ಮತದಾನದ ಪ್ರಮಾಣ ದಾಖಲಾಯಿತು. ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ, ಮಾತಿನ ಚಕಮಕಿಗೂ ಉಪ ಚುನಾವಣೆ ಸಾಕ್ಷಿಯಾಯಿತು. ಪೊಲೀಸರು ಎರಡೂ ಪಕ್ಷಗಳ ಕಾರ್ಯಕರ್ತರನ್ನು ಚದುರಿಸಿ ಮತದಾನಕ್ಕೆ ಅವಕಾಶ ಮಾಡಿಕೊಟ್ಟರು.
ಕಾರ್ಪೋರೇಟರ್ ಮಹದೇವಮ್ಮ ನಾಗರಾಜ್ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಸೋಮವಾರ ಮತದಾನ ನಡೆಯಿತು. ವಾರ್ಡ್ ವ್ಯಾಪ್ತಿಯ 34,572 ಮತದಾರರ ಪೈಕಿ 15,051 ಮಂದಿ ಮಾತ್ರ ಮತ ಚಲಾಯಿಸಿದರು. ಬಿಜೆಪಿಯಿಂದ ಜಿ.ಚಾಮುಂಡೇಶ್ವರಿ, ಕಾಂಗ್ರೆಸ್ನಿಂದ ವಿದ್ಯಾ ಶಶಿಕುಮಾರ್ ಮತ್ತು ಜೆಡಿಎಸ್ ಅಭ್ಯರ್ಥಿಯಾಗಿ ಮಹದೇವಮ್ಮ ಅವರ ಪುತ್ರಿ ಬಿ.ಎನ್.ಐಶ್ವರ್ಯಾ ಸ್ಪರ್ಧಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಮಹದೇವಮ್ಮ ಅವರು ಕಾಂಗ್ರೆಸ್ ಪಕ್ಷದಿಂದ ಗೆದ್ದಿದ್ದರು. ಅವರು ಹೃದಯಾಘಾತದಿಂದ ಮೃತಪಟ್ಟ ಬಳಿಕ ಅವರ ಪತಿ ಬಿಟಿಎಸ್ ನಾಗರಾಜ್ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾದರು. ಹೀಗಾಗಿ, ಅವರು ತಮ್ಮ ಪುತ್ರಿ ಐಶ್ವರ್ಯಾ ಅವರನ್ನು ಕಣಕ್ಕಿಳಿಸಿದ್ದಾರೆ.
ಮಾರಾಮಾರಿ :
ಹಣ ಹಂಚಿಕೆ ಆರೋಪದ ವಿಚಾರವಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಭಾನುವಾರ ರಾತ್ರಿಯೂ ಮಾರಾಮಾರಿ ನಡೆದಿದೆ. ನಾಗರಾಜ್ ಬೆಂಬಲಿಗರು ಕಾಂಗ್ರೆಸ್ ಕಾರ್ಯಕರ್ತ ಸುರೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಇದೇ ವಿಚಾರವಾಗಿ ಸೋಮವಾರ ಬೆಳಗ್ಗೆಯೂ ಗಲಾಟೆ ನಡೆಯಿತು. ಕೆ.ಪಿ.ಅಗ್ರಹಾರದ ಎಸ್.ಎಂ ಶಾಲೆಯ ಮತಗಟ್ಟೆ ಬಳಿ ನಾಗರಾಜ್ ಮತ್ತು ಅವರ ಬೆಂಬಲಿಗರು ಕಾಂಗ್ರೆಸ್ ಅಭ್ಯರ್ಥಿ ವಿದ್ಯಾ ಶಶಿಕುಮಾರ್ ಅವರ ಆಪ್ತ ಸುಧಾಕರ್ ಮೇಲೆ ಹಲ್ಲೆ ಮಾಡಿದರು. ಇದರಿಂದ ಕೆಲಕಾಲ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಖಂಡಿಸಿ ಪ್ರತಿಭಟನೆ ನಡೆಸಿದರು. ಪೊಲೀಸರು ತಕ್ಷಣ ಮಧ್ಯ ಪ್ರವೇಶಿಸಿ ಪ್ರತಿಭಟನಾನಿರತರನ್ನು ಚದುರಿಸಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಮತಗಟ್ಟೆಗಳಿಗೆ ಆಗಮಿಸಿದ ಮತದಾರರನ್ನು ತಮ್ಮ ಅಭ್ಯರ್ಥಿ ಪರವಾಗಿ ಮತ ಚಲಾಯಿಸುವಂತೆ ಎಳೆದಾಡಿ ಕಿರಿಕಿರಿಯನ್ನುಂಟು ಮಾಡಿದ ಘಟನೆಗಳು ಅಲ್ಲಲ್ಲಿ ಜರುಗಿದವು. ಎರಡೂ ಪಕ್ಷಗಳ ನಡುವಿನ ಕಿತ್ತಾಟ, ಮಾತಿನ ಚಕಮಕಿಯಿಂದ ಮತದಾರರು ಮತ ಹಾಕಲು ಮನೆ ಬಿಟ್ಟು ಹೊರಗೆ ಬಂದಿರಲಿಲ್ಲ. ಹೀಗಾಗಿ, ಬೆಳಗ್ಗೆ 7 ರಿಂದ 11ರವರೆಗೆ ಶೇ 11.03 ಮತ್ತು ಮಧ್ಯಾಹ್ನ 1 ರವರೆಗೆ ಶೇ 20.54, 3 ಗಂಟೆವರೆಗೆ ಶೇ 26.45 ರಷ್ಟು ಮಾತ್ರ ಮತದಾನವಾಗಿತ್ತು. ಮಧ್ಯಾಹ್ನ 3ರ ಬಳಿಕ ಮತದಾನ ಕೊಂಚ ಚುರುಕು ಪಡೆದುಕೊಂಡಿತು. ಅಂತಿಮವಾಗಿ ಶೇ 43.54ರಷ್ಟು ಮತದಾನವಾಯಿತು. ನಗರದ ಗೃಹ ವಿಜ್ಞಾನ ಕಾಲೇಜಿನಲ್ಲಿ ಜೂ. 20ರಂದು ಬೆಳಗ್ಗೆ 8 ರಿಂದ ಮತ ಎಣಿಕೆ ನಡೆಯಲಿದೆ.
''ಜೆಡಿಎಸ್ ಅಭ್ಯರ್ಥಿ ತಂದೆ ಬಿಟಿಎಸ್ ನಾಗರಾಜ್ ಅವರು ಸೋಲಿನ ಭೀತಿಯಿಂದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಆದರೆ, ಈವರೆಗೆ ಪೊಲೀಸರು ನಾಗರಾಜ್ ಅವರನ್ನು ಬಂಧಿಸಿಲ್ಲ. ಕಾಂಗ್ರೆಸ್ ಕಾರ್ಯಕರ್ತರು ಮತದಾರರಿಗೆ ಯಾವುದೇ ರೀತಿಯ ಆಮಿಷವೊಡ್ಡಿಲ್ಲ. ವಿನಾಕಾರಣ ಹಲ್ಲೆ ನಡೆಸಲಾಗಿದೆ,'' ಎಂದು ಶಾಸಕ ದಿನೇಶ್ ಗುಂಡೂರಾವ್ ಕಿಡಿಕಾರಿದರು.
ಮತ ಚಲಾಯಿಸಿದವರ ಸಂಖ್ಯೆ:
ಪುರುಷರು- 7647
ಮಹಿಳೆಯರು- 7404
ಕಾರ್ಪೋರೇಟರ್ ಮಹದೇವಮ್ಮ ನಾಗರಾಜ್ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಸೋಮವಾರ ಮತದಾನ ನಡೆಯಿತು. ವಾರ್ಡ್ ವ್ಯಾಪ್ತಿಯ 34,572 ಮತದಾರರ ಪೈಕಿ 15,051 ಮಂದಿ ಮಾತ್ರ ಮತ ಚಲಾಯಿಸಿದರು. ಬಿಜೆಪಿಯಿಂದ ಜಿ.ಚಾಮುಂಡೇಶ್ವರಿ, ಕಾಂಗ್ರೆಸ್ನಿಂದ ವಿದ್ಯಾ ಶಶಿಕುಮಾರ್ ಮತ್ತು ಜೆಡಿಎಸ್ ಅಭ್ಯರ್ಥಿಯಾಗಿ ಮಹದೇವಮ್ಮ ಅವರ ಪುತ್ರಿ ಬಿ.ಎನ್.ಐಶ್ವರ್ಯಾ ಸ್ಪರ್ಧಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಮಹದೇವಮ್ಮ ಅವರು ಕಾಂಗ್ರೆಸ್ ಪಕ್ಷದಿಂದ ಗೆದ್ದಿದ್ದರು. ಅವರು ಹೃದಯಾಘಾತದಿಂದ ಮೃತಪಟ್ಟ ಬಳಿಕ ಅವರ ಪತಿ ಬಿಟಿಎಸ್ ನಾಗರಾಜ್ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾದರು. ಹೀಗಾಗಿ, ಅವರು ತಮ್ಮ ಪುತ್ರಿ ಐಶ್ವರ್ಯಾ ಅವರನ್ನು ಕಣಕ್ಕಿಳಿಸಿದ್ದಾರೆ.
ಮಾರಾಮಾರಿ :
ಹಣ ಹಂಚಿಕೆ ಆರೋಪದ ವಿಚಾರವಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಭಾನುವಾರ ರಾತ್ರಿಯೂ ಮಾರಾಮಾರಿ ನಡೆದಿದೆ. ನಾಗರಾಜ್ ಬೆಂಬಲಿಗರು ಕಾಂಗ್ರೆಸ್ ಕಾರ್ಯಕರ್ತ ಸುರೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಇದೇ ವಿಚಾರವಾಗಿ ಸೋಮವಾರ ಬೆಳಗ್ಗೆಯೂ ಗಲಾಟೆ ನಡೆಯಿತು. ಕೆ.ಪಿ.ಅಗ್ರಹಾರದ ಎಸ್.ಎಂ ಶಾಲೆಯ ಮತಗಟ್ಟೆ ಬಳಿ ನಾಗರಾಜ್ ಮತ್ತು ಅವರ ಬೆಂಬಲಿಗರು ಕಾಂಗ್ರೆಸ್ ಅಭ್ಯರ್ಥಿ ವಿದ್ಯಾ ಶಶಿಕುಮಾರ್ ಅವರ ಆಪ್ತ ಸುಧಾಕರ್ ಮೇಲೆ ಹಲ್ಲೆ ಮಾಡಿದರು. ಇದರಿಂದ ಕೆಲಕಾಲ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಖಂಡಿಸಿ ಪ್ರತಿಭಟನೆ ನಡೆಸಿದರು. ಪೊಲೀಸರು ತಕ್ಷಣ ಮಧ್ಯ ಪ್ರವೇಶಿಸಿ ಪ್ರತಿಭಟನಾನಿರತರನ್ನು ಚದುರಿಸಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಮತಗಟ್ಟೆಗಳಿಗೆ ಆಗಮಿಸಿದ ಮತದಾರರನ್ನು ತಮ್ಮ ಅಭ್ಯರ್ಥಿ ಪರವಾಗಿ ಮತ ಚಲಾಯಿಸುವಂತೆ ಎಳೆದಾಡಿ ಕಿರಿಕಿರಿಯನ್ನುಂಟು ಮಾಡಿದ ಘಟನೆಗಳು ಅಲ್ಲಲ್ಲಿ ಜರುಗಿದವು. ಎರಡೂ ಪಕ್ಷಗಳ ನಡುವಿನ ಕಿತ್ತಾಟ, ಮಾತಿನ ಚಕಮಕಿಯಿಂದ ಮತದಾರರು ಮತ ಹಾಕಲು ಮನೆ ಬಿಟ್ಟು ಹೊರಗೆ ಬಂದಿರಲಿಲ್ಲ. ಹೀಗಾಗಿ, ಬೆಳಗ್ಗೆ 7 ರಿಂದ 11ರವರೆಗೆ ಶೇ 11.03 ಮತ್ತು ಮಧ್ಯಾಹ್ನ 1 ರವರೆಗೆ ಶೇ 20.54, 3 ಗಂಟೆವರೆಗೆ ಶೇ 26.45 ರಷ್ಟು ಮಾತ್ರ ಮತದಾನವಾಗಿತ್ತು. ಮಧ್ಯಾಹ್ನ 3ರ ಬಳಿಕ ಮತದಾನ ಕೊಂಚ ಚುರುಕು ಪಡೆದುಕೊಂಡಿತು. ಅಂತಿಮವಾಗಿ ಶೇ 43.54ರಷ್ಟು ಮತದಾನವಾಯಿತು. ನಗರದ ಗೃಹ ವಿಜ್ಞಾನ ಕಾಲೇಜಿನಲ್ಲಿ ಜೂ. 20ರಂದು ಬೆಳಗ್ಗೆ 8 ರಿಂದ ಮತ ಎಣಿಕೆ ನಡೆಯಲಿದೆ.
''ಜೆಡಿಎಸ್ ಅಭ್ಯರ್ಥಿ ತಂದೆ ಬಿಟಿಎಸ್ ನಾಗರಾಜ್ ಅವರು ಸೋಲಿನ ಭೀತಿಯಿಂದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಆದರೆ, ಈವರೆಗೆ ಪೊಲೀಸರು ನಾಗರಾಜ್ ಅವರನ್ನು ಬಂಧಿಸಿಲ್ಲ. ಕಾಂಗ್ರೆಸ್ ಕಾರ್ಯಕರ್ತರು ಮತದಾರರಿಗೆ ಯಾವುದೇ ರೀತಿಯ ಆಮಿಷವೊಡ್ಡಿಲ್ಲ. ವಿನಾಕಾರಣ ಹಲ್ಲೆ ನಡೆಸಲಾಗಿದೆ,'' ಎಂದು ಶಾಸಕ ದಿನೇಶ್ ಗುಂಡೂರಾವ್ ಕಿಡಿಕಾರಿದರು.
ಮತ ಚಲಾಯಿಸಿದವರ ಸಂಖ್ಯೆ:
ಪುರುಷರು- 7647
ಮಹಿಳೆಯರು- 7404