ಆ್ಯಪ್ನಗರ

ಟೆಸ್ಟ್‌ ಡ್ರೈವ್‌ ಮಾಡುವುದಾಗಿ ನಂಬಿಸಿ ಕಾರುಗಳನ್ನು ಪಡೆದು ಪರಾರಿಯಾಗುತ್ತಿದ್ದ ವಂಚಕನ ಬಂಧನ

ಮಹಾಲಕ್ಷ್ಮಿ ಲೇಔಟ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆಯಲ್ಲಿನ ಮಾರಾಟಗಾರರೊಬ್ಬರಿಗೆ ಕಾರು ಖರೀದಿಸುವುದಾಗಿ ನಂಬಿಸಿ, ಟೆಸ್ಟ್‌ ಡ್ರೈವ್‌ ಮಾಡಲೆಂದು ತೆಗೆದುಕೊಂಡು ಹೋಗಿದ್ದ. ಬಳಿಕ ಸಂಜೆಯಾದರೂ ವಾಪಸ್‌ ಬರದಿದ್ದಾಗ ಮಾಲೀಕರು ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆಗಿಳಿದ ಇನ್ಸ್‌ಪೆಕ್ಟರ್‌ ಎಚ್‌.ಎಂ.ಕಾಂತರಾಜ್‌ ಹಾಗೂ ಸಿಬ್ಬಂದಿ ಆರೋಪಿಯನ್ನು ಬಂಧಿಸಿದ್ದಾರೆ.

Vijaya Karnataka 26 Nov 2021, 12:51 pm
ಬೆಂಗಳೂರು: ಟೆಸ್ಟ್‌ ಡ್ರೈವ್‌ಗೆ ಹೋಗಿ ಬರುವುದಾಗಿ ನಂಬಿಸಿ ಕಾರುಗಳನ್ನು ಪಡೆದು ಪರಾರಿಯಾಗುತ್ತಿದ್ದ ವಂಚಕನೊಬ್ಬನನ್ನು ಬಂಧಿಸಿರುವ ಮಹಾಲಕ್ಷ್ಮಿ ಲೇಔಟ್‌ ಠಾಣೆ ಪೊಲೀಸರು, 35 ಲಕ್ಷ ರೂ. ಮೌಲ್ಯದ ಏಳು ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.
Vijaya Karnataka Web Police case


ದೇವನಹಳ್ಳಿಯ ಶ್ರೀನಿವಾಸ್‌(32) ಬಂಧಿತ. ಆರೋಪಿಯು ಕಾರು ಮಾರಾಟಗಾರರ ಬಳಿ ತೆರಳಿ ಕಾರು ಖರೀದಿಸುವುದಾಗಿ ಮಾತನಾಡುತ್ತಿದ್ದ. ಬಳಿಕ ಕಾರು ಪರೀಕ್ಷಿಸಲು ಟೆಸ್ಟ್‌ ಡ್ರೈವ್‌ಗೆ ಹೋಗುವುದಾಗಿ ಹೇಳಿ ಮಾಲೀಕರಿಂದ ಕಾರನ್ನು ಪಡೆದು ಪರಾರಿಯಾಗುತ್ತಿದ್ದ. ಈ ರೀತಿ ಕದ್ದ ಕಾರುಗಳನ್ನು ಬೇರೆಯವರಿಗೆ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ರೀತಿ ಮಹಾಲಕ್ಷ್ಮಿ ಲೇಔಟ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆಯಲ್ಲಿನ ಮಾರಾಟಗಾರರೊಬ್ಬರಿಗೆ ಕಾರು ಖರೀದಿಸುವುದಾಗಿ ನಂಬಿಸಿ, ಟೆಸ್ಟ್‌ ಡ್ರೈವ್‌ ಮಾಡಲೆಂದು ತೆಗೆದುಕೊಂಡು ಹೋಗಿದ್ದ. ಬಳಿಕ ಸಂಜೆಯಾದರೂ ವಾಪಸ್‌ ಬರದಿದ್ದಾಗ ಮಾಲೀಕರು ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆಗಿಳಿದ ಇನ್ಸ್‌ಪೆಕ್ಟರ್‌ ಎಚ್‌.ಎಂ.ಕಾಂತರಾಜ್‌ ಹಾಗೂ ಸಿಬ್ಬಂದಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಶ್ರೀನಿವಾಸ್‌ ಈ ಹಿಂದೆ ರಾಜಗೋಪಾಲ ನಗರ, ದೊಡ್ಡಬಳ್ಳಾಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಕಳವು ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಸೇರಿದ್ದ. ಜಾಮೀನಿನ ಮೇಲೆ ಹೊರಬಂದು ಮತ್ತೆ ತನ್ನ ಹಳೇ ಚಾಳಿ ಮುಂದುವರಿಸಿದ್ದ.
ಹಣ ದ್ವಿಗುಣಗೊಳಿಸುವ ಆಸೆಯೊಡ್ಡಿ ಕೋಟ್ಯಂತರ ರೂಪಾಯಿ ಪಂಗನಾಮ ಹಾಕಿದ ಕಿರಾತಕನ ಬಂಧನ
ಮದ್ಯವರ್ತಿಯಾಗಿದ್ದ ಆರೋಪಿ
ಆರೋಪಿ ಶ್ರೀನಿವಾಸ್‌ ಪಿಯುಸಿ ವ್ಯಾಸಂಗ ಮಾಡಿದ ಬಳಿಕ ವಿದ್ಯಾಭ್ಯಾಸ ಮೊಟಕುಗೊಳಿಸಿ ಸೆಕೆಂಡ್‌ ಹ್ಯಾಂಡ್‌ ಕಾರು ವ್ಯಾಪಾರದಲ್ಲಿ ಮದ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದ. ಇದರಿಂದಾಗಿ ಹಲವಾರು ಗ್ರಾಹಕರು ಪರಿಚಯವಾಗಿದ್ದರು. ಇದನ್ನೇ ದಾಳವಾಗಿ ಬಳಸಿಕೊಂಡು ಹೆಚ್ಚಿನ ಹಣದಾಸೆಗೆ ಕಾರು ಕದಿಯಲು ಪ್ರಾರಂಭಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.

37 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಬೆಲೆಬಾಳುವ ವಸ್ತುಗಳ ಜಪ್ತಿ
ಬೆಂಗಳೂರು: ಹಗಲಿನ ವೇಳೆ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ, ರಾತ್ರಿ ವೇಳೆ ಕನ್ನ ಹಾಕುತ್ತಿದ್ದ ಇಬ್ಬರನ್ನು ಸಂಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶರಣಪ್ಪ ಹಾಗೂ ಹರೀಶ್‌ ಬಂಧಿತರು. ಆರೋಪಿಗಳಿಂದ 37 ಲಕ್ಷ ರೂ. ಮೌಲ್ಯದ 24 ಗ್ರಾಂ ತೂಕದ ಚಿನ್ನದ ಸರ, ಎರಡು ಲ್ಯಾಪ್‌ಟಾಪ್‌, ಎರಡು ಐಫೋನ್‌, ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳ್ಳತನಕ್ಕೊಳಗಾದ ₹2.90 ಕೋಟಿ ಮೌಲ್ಯದ ಸೊತ್ತುಗಳನ್ನು ಹಸ್ತಾಂತರಿಸಿದ ಮಂಗಳೂರು ಪೊಲೀಸರು
ಆರೋಪಿಗಳು ಸಂಜಯನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಬೀಗ ಹಾಕಿರುವ ಮನೆಗೆ ಕನ್ನ ಹಾಕಿ ಕಳವು ಮಾಡಿ ಪರಾರಿಯಾಗಿದ್ದರು. ಮನೆ ಮಾಲೀಕ ಜು.21ರಂದು ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆಗಿಳಿದ ಪೊಲೀಸರು, ಆರೋಪಿಗಳಿಬ್ಬರನ್ನು ಬಂಧಿಸಿದ್ದರು. ರೌಡಿ ಶೀಟರ್‌ ಶರಣಪ್ಪ ಈ ಹಿಂದೆ ಆರ್‌.ಟಿ.ನಗರ, ಜಯನಗರ, ತುಮಕೂರು, ಹನುಮಂತನಗರ, ಎಲೆಕ್ಟ್ರಾನಿಕ್‌ ಸಿಟಿ, ಚಂದ್ರಾ ಲೇಔಟ್‌, ದೊಡ್ಡ ಬಳ್ಳಾಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಕೊಲೆ, ಸುಲಿಗೆ, ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಸೇರಿದ್ದ. ಬಳಿಕ ಜಾಮೀನನ ಮೇಲೆ ಹೊರಬಂದು ತನ್ನ ಹಳೇ ಚಾಳಿ ಮುಂದುವರಿಸಿದ್ದ. ಪೊಲೀಸರ ಕಣ್ತಪ್ಪಿಸಲು ಕೆಲ ದಿನಗಳಿಂದ ತಲೆಮರೆಸಿಕೊಂಡಿದ್ದ. ಆರೋಪಿ ಹರೀಶ್‌ ರಾಮಮೂರ್ತಿ ನಗರ, ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆ ವ್ಯಾಪ್ತಿಗಳಲ್ಲಿ ಕೊಲೆ, ಸುಲಿಗೆ, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಸೇರಿದ್ದ.

ಜಾಮೀನಿನ ಮೇಲೆ ಹೊರಬಂದು ಶರಣಪ್ಪನ ಜತೆ ಸೇರಿ ಮತ್ತೆ ಸುಲಿಗೆ, ದರೋಡೆ, ಮನೆಗಳವು ಮಾಡುತ್ತಿದ್ದ. ಆರೋಪಿಗಳ ಬಂಧನದಿಂದ ಸಂಜಯನಗರ, ಸದಾಶಿವನಗರ, ಹೆಣ್ಣೂರು ಹಾಗೂ ಗಂಗಮ್ಮನಗುಡಿ ಪೊಲೀಸ್‌ ಠಾಣೆ ವ್ಯಾಪ್ತಿಯ ಒಟ್ಟು 6 ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ