ಆ್ಯಪ್ನಗರ

1 ಸಾವಿರ ಪಡೆಯಲು ಹೋಗಿ 35 ಸಾವಿರ ರೂ. ಹೋಯಿತು !

ಸೈಬರ್ ವಂಚನೆಯಲ್ಲಿ ವ್ಯಕ್ತಿಯೊಬ್ಬರು 35,000 ಕಳೆದುಕೊಂಡಿದ್ದಾರೆ.

Vijaya Karnataka 9 Oct 2018, 3:35 pm
ಬೆಂಗಳೂರು: ಬ್ಯಾಂಕ್‌ ಅಧಿಕಾರಿ ಸೋಗಿನಲ್ಲಿ ವ್ಯಕ್ತಿಯೊಬ್ಬರಿಗೆ ಕರೆ ಮಾಡಿದ ಸೈಬರ್‌ ಖದೀಮರು, 35 ಸಾವಿರ ರೂ.ಗಳನ್ನು ಅಕ್ರಮವಾಗಿ ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾರೆ.
Vijaya Karnataka Web Cyber Crime


ಈ ಸಂಬಂಧ ಎಚ್‌ಎಎಲ್‌ನ ಎಂ.ಕೃಷ್ಣ ಎಂಬುವರು ಸೈಬರ್‌ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕೆಲ ದಿನಗಳ ಹಿಂದೆ ಕೃಷ್ಣ ಅವರು ಎಸ್‌ಬಿಐ ಬ್ಯಾಂಕ್‌ ಖಾತೆಯಿಂದ ಮತ್ತೊಂದು ಖಾತೆಗೆ 1,150 ರೂ. ಜಮಾ ಮಾಡಿದ್ದರು. ಆದರೆ, ಖಾತೆಯ ಕೊನೆಯ ಅಂಕಿ 256ರ ಬದಲು 259 ಎಂದು ನಮೂದಾಗಿ ಬೇರೆಯವರ ಖಾತೆಗೆ ಆ ಹಣ ವರ್ಗಾವಣೆಯಾಗಿತ್ತು. ಆಕಸ್ಮಿಕವಾಗಿ ಬೇರೆ ಖಾತೆಗೆ ಹಣ ವರ್ಗಾವಣೆಯಾಗಿದ್ದ ಕಾರಣ ಮೊಬೈಲ್‌ ಆ್ಯಪ್‌ ಮೂಲಕ ಲೋಪ ಸರಿಪಡಿಸುವ ಕುರಿತು ದೂರನ್ನು ನೀಡಿದ್ದರು.

‘‘ ನಿಮ್ಮ ಹಣ ಬೇರೆ ಖಾತೆಗೆ ಆಕಸ್ಮಿಕವಾಗಿ ವರ್ಗಾವಣೆಯಾಗಿದೆ ಎಂದು ನೀವು ಕೊಟ್ಟ ದೂರಿನಂತೆ ಹಣವನ್ನು ವಾಪಸ್‌ ಮಾಡುತ್ತೇವೆ ಎಂದು ಅ.3ರಂದು ಅಪರಿಚಿತರು ಕರೆ ಮಾಡಿ ತಿಳಿಸಿದ್ದರು. ಪೋನ್‌ಗೆ ಬಂದಿರುವ ಒಟಿಪಿಯನ್ನು ತಿಳಿಸಿ ಎಂದು ಅವರು ಕೋರಿದ್ದರು. ಅದರಂತೆ ನಾನು ಒಟಿಪಿ ಹೇಳಿದಾಗ ನನ್ನ ಖಾತೆಯಿಂದ 35 ಸಾವಿರ ರೂ. ವರ್ಗಾವಣೆ ಆಗಿದೆ’’ ಎಂದು ದೂರಿನಲ್ಲಿ ಕೃಷ್ಣ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ