ಆ್ಯಪ್ನಗರ

ಬೆಂಗಳೂರು: ಎಟಿಎಂಗೆ ತುಂಬುವ ಹಣ ಕದ್ದವ ಪ್ರೇಯಸಿ ಜತೆ ಪರಾರಿ

ಸೆಕ್ಯೂರ್‌ ಆ್ಯಂಡ್‌ ವ್ಯಾಲ್ಯೂ ಏಜೆನ್ಸಿಯ ವಾಹನ ಚಾಲಕನಾಗಿದ್ದ ಯೋಗೇಶ್‌ ಫೆ. 2ರಂದು ನವರಂಗ್‌ ಬಳಿಯ ಆ್ಯಕ್ಸಿಸ್‌ ಬ್ಯಾಂಕ್‌ ಎಟಿಎಂಗೆ ಹಣ ತುಂಬುವ ಸಂದರ್ಭದಲ್ಲಿ ವಾಹನದಲ್ಲಿದ್ದ 64 ಲಕ್ಷ ರೂ. ಜತೆ ಪರಾರಿಯಾಗಿದ್ದ.

Vijaya Karnataka Web 8 Feb 2021, 11:22 pm
ಬೆಂಗಳೂರು: ಎಟಿಎಂಗೆ ತುಂಬುವ ಹಣ ಕದ್ದಿದ್ದ ಚಾಲಾಕಿ ಕಳ್ಳನೊಬ್ಬ ಪ್ರೇಯಸಿ ಜತೆ ಪರಾರಿಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
Vijaya Karnataka Web ಪೊಲೀಸ್‌
ಪೊಲೀಸ್‌


ಆರೋಪಿ ಯೋಗೇಶ್‌ ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ ತಾಲೂಕಿನ ದೊಡ್ಡಬಿದರಕಲ್ಲಿನಲ್ಲಿ ಪತ್ನಿ ಹಾಗೂ ಮಕ್ಕಳ ಜತೆ ನೆಲೆಸಿದ್ದ. ಆದರೂ ಮನೆ ಸಮೀಪದಲ್ಲೇ ನೆಲೆಸಿದ್ದ ವಿಚ್ಛೇದಿತೆಯಾಗಿದ್ದ ಅತ್ತೆ ಮಗಳ ಸಖ್ಯ ಬೆಳೆಸಿದ್ದ ಆತ, ಸುಖವಾದ ಜೀವನ ಕಟ್ಟಿಕೊಳ್ಳಲು ಪ್ಲ್ಯಾನ್‌ ಮಾಡಿದ್ದ.

ಸೆಕ್ಯೂರ್‌ ಆ್ಯಂಡ್‌ ವ್ಯಾಲ್ಯೂ ಏಜೆನ್ಸಿಯ ವಾಹನ ಚಾಲಕನಾಗಿದ್ದ ಯೋಗೇಶ್‌ ಫೆ. 2ರಂದು ನವರಂಗ್‌ ಬಳಿಯ ಆ್ಯಕ್ಸಿಸ್‌ ಬ್ಯಾಂಕ್‌ ಎಟಿಎಂಗೆ ಹಣ ತುಂಬುವ ಸಂದರ್ಭದಲ್ಲಿ ವಾಹನದಲ್ಲಿದ್ದ 64 ಲಕ್ಷ ರೂ. ಜತೆ ಪರಾರಿಯಾಗಿದ್ದ. ಪ್ರೇಯಸಿಯನ್ನು ರಾಜಾಜಿನಗರಕ್ಕೆ ಕರೆಸಿಕೊಂಡಿದ್ದ ಆತ ಹಣ ಕದ್ದ ಬಳಿಕ ಆಟೋ ಹತ್ತಿ ಮಾರ್ಗ ಮಧ್ಯೆ ಪ್ರೇಯಸಿಯನ್ನು ಕರೆದುಕೊಂಡು ಬೆಂಗಳೂರು ತೊರೆದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದಕ್ಕಾಗಿ ಆರೋಪಿ 7 ಸಿಮ್‌ಗಳನ್ನು ಬಳಸಿದ್ದಾನೆ. ಆ ಎಲ್ಲ ಸಿಮ್‌ಗಳ ಕರೆಗಳ ವಿವರ ಸಂಗ್ರಹಿಸಿ ಬಂಧನಕ್ಕೆ ಸಿದ್ಧತೆ ನಡೆಸಿರುವುದಾಗಿ ಸುಬ್ರಹ್ಮಣ್ಯನಗರ ಠಾಣಾ ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ