ಆ್ಯಪ್ನಗರ

ನವಬೆಂಗಳೂರು ರಚನೆಗೆ ಬಿಜೆಪಿ ಸಿದ್ಧತೆ

ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಅಪವಿತ್ರ ಮೈತ್ರಿ ಬೆಂಗಳೂರನ್ನು ಆಳುತ್ತಿದೆ. ಗೂಂಡಾಗಿರಿ, ಗುಂಡಿ ಹಾಗೂ ಗಾರ್ಬೇಜ್‌ ಎಂಬ 'ತ್ರಿಜಿ' ಸಮಸ್ಯೆಯಿಂದ ಬೆಂಗಳೂರು ಬಳಲುತ್ತಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಅನಂತಕುಮಾರ ವ್ಯಂಗ್ಯವಾಡಿದರು.

Vijaya Karnataka 9 May 2018, 10:27 am
ಬೆಂಗಳೂರು: ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಅಪವಿತ್ರ ಮೈತ್ರಿ ಬೆಂಗಳೂರನ್ನು ಆಳುತ್ತಿದೆ. ಗೂಂಡಾಗಿರಿ, ಗುಂಡಿ ಹಾಗೂ ಗಾರ್ಬೇಜ್‌ ಎಂಬ 'ತ್ರಿಜಿ' ಸಮಸ್ಯೆಯಿಂದ ಬೆಂಗಳೂರು ಬಳಲುತ್ತಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಅನಂತಕುಮಾರ ವ್ಯಂಗ್ಯವಾಡಿದರು.
Vijaya Karnataka Web bjp MANIFESTO


ಬೆಂಗಳೂರು ನಗರಕ್ಕಾಗಿ ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು ''ಕೆಂಪೇಗೌಡರು ಕಟ್ಟಿದ ಬೆಂಗಳೂರಿಗೆ ವಿಶ್ವೇಶ್ವರಯ್ಯನವರಂಥ ಮಹನೀಯರು ಒಂದು ರೂಪ ನೀಡಿದ್ದರು. ಅದೇ ಬೆಂಗಳೂರು ಬೆಂಗಳೂರು ಕಾಂಗ್ರೆಸ್‌ ಆಡಳಿತದ ಅವಧಿಯಲ್ಲಿ ದುಸ್ಥಿತಿಗೆ ತಲುಪಿದೆ. ಹೀಗಾಗಿ ನವ ಬೆಂಗಳೂರು ರಚನೆಗಾಗಿ ನಾವು ಪ್ರತ್ಯೇಕ ಪ್ರಣಾಳಿಕೆ ರಚಿಸಿದ್ದೇವೆ,'' ಎಂದು ಹೇಳಿದರು.

''ಬಿಲ್ಡರ್‌, ಕಾಂಟ್ರ್ಯಾಕ್ಟರ್‌, ಲ್ಯಾಂಡ್‌ ಮಾಫಿಯಾಗಳಿಂದ ಬೆಂಗಳೂರನ್ನು ರಕ್ಷಿಸುವುದು ನಮ್ಮ ಉದ್ದೇಶ. ಇದರ ಜತೆಗೆ ಬೆಂಗಳೂರು ರೈಲ್ವೇ ಇನ್ಫ್ರಾಸ್ಟ್ರಕ್ಚರ್‌ ಡೆವಲಪ್‌ಮೆಂಟ್‌ ಅಥಾರಿಟಿ ನಿರ್ಮಾಣ ಮಾಡುತ್ತೇವೆ. ಇದೇ ರೀತಿ ಬೆಂಗಳೂರನ್ನು ಮತ್ತೆ ಸಂಪದ್ಭ್ಬರಿತ ನಗರವಾಗಿ ಮಾಡಲು ಎಲ್ಲ ಕ್ರಮ ತೆಗೆದುಕೊಳ್ಳಲಾಗುವುದು,'' ಎಂದರು.

ಮಾಜಿ ಡಿಸಿಎಂ ಆರ್‌.ಅಶೋಕ್‌ ಮಾತನಾಡಿ ''ಬಾಂಗ್ಲಾ ವಲಸಿಗರು ಹಾಗೂ ಡ್ರಗ್‌ ಮಾಫಿಯಾದಲ್ಲಿ ತೊಡಗಿರುವ ಆಫ್ರಿಕಾ ಪ್ರಜೆಗಳ ನಿಯಂತ್ರಣಕ್ಕೆ ಬಿಜೆಪಿ ಕ್ರಮ ಕೈಗೊಳ್ಳಲಿದೆ. ವಿಧಾನಸೌಧ ಸುತ್ತಲಿನ 5 ಕಿ.ಮೀ ವ್ಯಾಪ್ತಿಯಲ್ಲಿ ಫ್ಲೆಕ್ಸ್‌ ಹಾಗೂ ಬ್ಯಾನರ್‌ಗೆ ನಿಷೇಧ ಹೇರುವ ಜತೆಗೆ, ಬೆಂಗಳೂರು ವಿಭಜನೆ ತಡೆಯುತ್ತೇವೆ,'' ಎಂದು ಹೇಳಿದರು.

ರಾಜ್ಯ ಬಿಜೆಪಿ ಉಸ್ತುವಾರಿಗಳಾದ ಪ್ರಕಾಶ್‌ ಜಾವಡೇಕರ್‌, ಮುರಳೀಧರ್‌ ರಾವ್‌ ಉಪಸ್ಥಿತರಿದ್ದರು.

ಪ್ರಣಾಳಿಕೆಯ ಮುಖ್ಯಾಂಶಗಳು

- ಬೆಂಗಳೂರು ಅಭಿವೃದ್ಧಿಗೆ 15 ವರ್ಷಗಳ ದೀರ್ಘಾವಧಿ ಸಮಗ್ರ ಅಭಿವೃದ್ಧಿ ಯೋಜನೆ. ಮಹಾನಗರ ಪ್ರಾದೇಶಿಕ ಆಡಳಿತಕ್ಕಾಗಿ ಕಾಯಿದೆ ರೂಪಿಸುವ ಭರವಸೆ. ಭೂ ಗಳ್ಳರ ವಿರುದ್ಧ ಕಠಿಣ ಕ್ರಮ, ಭೂ ಕಬಳಿಕೆ ನಿಯಂತ್ರಣಕ್ಕೆ ವಿಶೇಷ ನ್ಯಾಯಾಲಯ ಸ್ಥಾಪನೆ, ಮಲ ಹೊರುವ ಪದ್ಧತಿ ನಿಷೇಧ, ಫ್ಲೆಕ್ಸ್‌, ಬ್ಯಾನರ್‌, ಬಿತ್ತಿ ಪತ್ರಕ್ಕೆ ಕಡಿವಾಣ.

- ಮುಖ್ಯಮಂತ್ರಿ ಜಲಧಾರೆ ಯೋಜನೆ ಅನ್ವಯ 24 ಗಂಟೆ ನಗರಕ್ಕೆ ಕುಡಿಯುವ ನೀರು.

- ಮಂಗಳಮುಖಿಯರ ಕಲ್ಯಾಣ ನೀತಿ.

-ಕೆಂಪೇಗೌಡ ವಸತಿ ಯೋಜನೆ.

- ಆಯುಷ್ಮಾನ್‌ ಬೆಂಗಳೂರು, ಮೋದಿ ಹೆಲ್ತ್‌ ಕೇರ್‌, 24 ಗಂಟೆ ಕಾರ್ಯ ನಿರ್ವಹಿಸುವ ಸ್ಮಾರ್ಟ್‌ ಕ್ಲಿನಿಕ್‌, ಪ್ರತಿ ಕುಟುಂಬಕ್ಕೆ 5 ಲಕ್ಷ ರೂ. ಮೌಲ್ಯದ ಆರೋಗ್ಯ ವಿಮೆ.

- ಮಹಿಳೆಯರ ರಕ್ಷಣೆಗೆ ರಾಣಿ ಚನ್ನಮ್ಮ ಫ್ಲೈಯಿಂಗ್‌ ಸ್ಕ್ವಾಡ್‌

-ಬಡ ಮಹಿಳೆಯರಿಗೆ ಉಚಿತ ಅಡುಗೆ ಅನಿಲ ಪೂರೈಕೆ.

- ಅಗ್ಗದ ದರದಲ್ಲಿ ಅಟಲ್‌ ಸಾರಿಗೆ ವ್ಯವಸ್ಥೆ.

- ಪ್ರಾರ್ಥನಾ ಕೇಂದ್ರಗಳಿಗೆ ಪ್ರಸಾದ ಸೌಕರ್ಯ ಕಲ್ಪಿಸುವ ಪ್ರಸಾದ ಯೋಜನೆ.

- ಹಸಿರು ಬೆಂಗಳೂರು, ಮನೆಗೊಂದು ಮರ ಯೋಜನೆ.

- ಬೆಂಗಳೂರು ಕೆರೆ ಸಂರಕ್ಷಣೆ ಹಾಗೂ ಅಭಿವೃದ್ಧಿ ಪ್ರಾಧಿಕಾರ ರಚನೆ.

- ವಾರ್ಷಿಕ ಮರಗಣತಿ.

- ಪುರಾತನ ಕಟ್ಟಡ ಹಾಗೂ ಹಬ್ಬಗಳ ಬಗ್ಗೆ ವಿವರ ಸಂಗ್ರಹಣೆಗೆ ಬೆಂಗಳೂರು ಪರಂಪರೆ ಕೋಶ

- ಬೆಂಗಳೂರಿನ ಮೇಲಿನ ಒತ್ತಡ ಕಡಿಮೆ ಮಾಡಲು ಉಪನಗರಗಳ ನಿರ್ಮಾಣ.

- ಶಾಲೆಗಳು ಹಾಗೂ ಇತರೆ ಸ್ಥಳಗಳಲ್ಲಿ ಮಕ್ಕಳ ಸುರಕ್ಷತೆಗಾಗಿ ಸಮಗ್ರ ಮಾರ್ಗಸೂಚಿ.

- ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬಲಪಡಿಸುವುದು.

-ಸರಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ

- ಬೆಂಗಳೂರಿನಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರಗಳ ಹೆಚ್ಚಳ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ