ಆ್ಯಪ್ನಗರ

ಬೆಂಗಳೂರಿನಿಂದ ಗುಳೆ ಹೊರಟ ಜನ: ಗಂಟು ಮೂಟೆ ಕಟ್ಟಿ ಸ್ವಗ್ರಾಮದತ್ತ ಪಯಣ, ಟೋಲ್‌ ಪ್ಲಾಜಾ ಬಳಿ ಫುಲ್‌ ಟ್ರಾಫಿಕ್‌ ಜಾಮ್‌

ನವಯುಗ ಟೋಲ್‌ನಲ್ಲಿ ಕಿಲೋಮೀಟರ್‌ಗಟ್ಟಲೆ ಸಂಚಾರ ದಟ್ಟಣೆ ಏರ್ಪಟ್ಟಿತ್ತು. ಒಟ್ಟಾರೆ ಮಹಾಮಾರಿ ಕೊರೋನಾಗೆ ಹೆದರಿ ಬೆಂಗಳೂರು ಬಿಡುತ್ತಿದ್ದಾರೆ, ಅದರಲ್ಲಿ ಬಹುತೇಕರು ವಾಪಸ್ ಬೆಂಗಳೂರಿಗೆ ಬರೋದೇ ಡೌಟ್ ಆಗಿದೆ.

Vijaya Karnataka Web 4 Jul 2020, 6:06 pm
ಬೆಂಗಳೂರು: ಬೆಂಗಳೂರು ನಗರದಲ್ಲಿ ಕೊರೊನಾ ವೈರಸ್ ವಿಪರೀತ ಹೆಚ್ಚಾಗಿ, ಸಮುದಾಯ ಮಟ್ಟಕ್ಕೆ ಹರಡುತ್ತಿರುವ ಹಿನ್ನೆಲೆಯಲ್ಲಿ ಜನರು ಭೀತಿಯಿಂದ ಬೆಂಗಳೂರು ಬಿಟ್ಟು ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ.
Vijaya Karnataka Web ಸಂಚಾರ ದಟ್ಟಣೆ
ಸಂಚಾರ ದಟ್ಟಣೆ


ಗ್ರಾಮಗಳಿಂದ ವಲಸೆ ಬಂದವರೇ ಈಗ ಸಿಟಿಯಿಂದ ಗುಳೇ ಹೊರಟಿದ್ದಾರೆ. ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಗಿದರೆ ಸಾಕಪ್ಪ ಎನ್ನುತ್ತಿದ್ದವರು ಶನಿವಾರ ಪಾತ್ರೆ ಪಗಡೆಗಳನ್ನು ತುಂಬಿ ಮನೆಗಳನ್ನು ಖಾಲಿ ಮಾಡಿ ತಮ್ಮ ತಮ್ಮ ಸ್ವಗ್ರಾಮಗಳಿಗೆ ಗುಳೆ ಹೊರಟಿದ್ದಾರೆ.

ಈ ಬೆಂಗಳೂರು ಸಾಕು, ಇಲ್ಲಿನ ಜೀವನಾನು ಸಾಕು, ಬದುಕಿದ್ರೆ ಬಾಳೆ ಹಣ್ಣು ಮಾರಿಕೊಂಡು ನಮ್ಮೂರಲ್ಲೇ ಬದುಕೋಣ ಎಂದು ಬೆಂಗಳೂರಿನಲ್ಲಿ ಹಲವಾರು ಮಂದಿ ಈಗ ಸಿಟಿ ಬಿಡುತ್ತಿದ್ದಾರೆ. ಇದರಿಂದಾಗಿ ತುಮಕೂರು ರಸ್ತೆಯಲ್ಲಿ ಶನಿವಾರ ಸಂಪೂರ್ಣ ಟ್ರಾಫಿಕ್‌ ಜಾಮ್‌ ಆಗಿತ್ತು.

ಬೆಂಗಳೂರಿನಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಸಮುದಾಯ ಮಟ್ಟದಲ್ಲಿ ಹರಡುತ್ತಿದೆ. ಪ್ರತಿದಿನ ಬೆಂಗಳೂರು ಒಂದರಲ್ಲೇ ಸಾವಿರಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿಇವೆ.

ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ರಾಜ್ಯದ ವಿವಿದ ಜಿಲ್ಲೆಗಳ ಜನ ಬೆಚ್ಚಿಬಿದ್ದಿದ್ದಾರೆ. ಹೊಟ್ಟೆ ಬಟ್ಟೆಗಾಗಿ ಬೆಂಗಳೂರಿಗೆ ಬಂದಿದ್ದ ವಿವಿಧ ಬೇರೆ ಜಿಲ್ಲೆಗಳವರು ಈಗ ಗಂಟು ಮೂಟೆ ಕಟ್ಟಿ ಊರು ಬಿಡುತ್ತಿದ್ದಾರೆ. ಈ ಬೆಂಗಳೂರಿನ ಸಹವಾಸ ಸಾಕಪ್ಪ ಸಾಕು ಎಂದು ಲಾರಿ, ಕ್ಯಾಂಟರ್ ಹಾಗೂ ಸ್ವಂತ ವಾಹನದಲ್ಲೇ ತೆರಳುತ್ತಿರುವುದು ಶನಿವಾರ ಕಂಡುಬಂತು.

ದಿನ ಬಳಕೆಯ ವಸ್ತುಗಳನ್ನ ತುಂಬಿಕೊಂಡು ತಮ್ಮೂರುಗಳತ್ತ ಹೊರಟಿದ್ದಾರೆ. ಬೆಂಗಳೂರು ತುಮಕೂರು ರಾಷ್ಟ್ರೀಯ ಹೆದ್ದಾರಿ 4ರ ನವಯುಗ ಟೋಲ್ ಮೂಲಕ ರಾಜ್ಯದ 23ಕ್ಕೂ ಹೆಚ್ಚು ಜಿಲ್ಲೆಗಳಿಗೆ ಹೊರಟಿರುವುದು ಕಂಡುಬಂದಿದೆ.

ನವಯುಗ ಟೋಲ್‌ನಲ್ಲಿ ಕಿಲೋಮೀಟರ್‌ಗಟ್ಟಲೆ ಸಂಚಾರ ದಟ್ಟಣೆ ಏರ್ಪಟ್ಟಿತ್ತು. ಒಟ್ಟಾರೆ ಮಹಾಮಾರಿ ಕೊರೋನಾಗೆ ಹೆದರಿ ಬೆಂಗಳೂರು ಬಿಡುತ್ತಿದ್ದಾರೆ, ಅದರಲ್ಲಿ ಬಹುತೇಕರು ವಾಪಸ್ ಬೆಂಗಳೂರಿಗೆ ಬರೋದೇ ಡೌಟ್ ಆಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ